ಲಂಚ

ನಮ್ಮ ಬಾಜೂಮನಿ ಮುದುಕಿ ಯಾವತ್ತೂ
ತನ್ನ ಮಗಗಽ ಒಟಾ ಒಟಾ ಮಾಡಕೊಂತ
ಹೇಽಳ್ತಿತ್ತು.
ಯಪ್ಪಾ ಮಗನಽ ಮನಶ್ಯಾರಾಗ ಕೂಡುಕೋರೋ ಅಂತ
ಆದರೆ ಈ ಮಗ ಮುಖದ ಮ್ಯಾಲ
ನಗು ತೋರಿಸಿದ್ರೂ ಎದ್ಯಾಗ ನೂರೆಂಟ ಕ್ಯಾಕ್ಟಸ್‌
ತುಂಬಿಕೊಂಡ ಮತ್ತ ಮ್ಯಾಲ ಕುಡದ
ಕೆಕ್ಕರಿಸಿಕೊಂಡ
ನೀ ಸುಮ್ಮನಿರಬೆಽ ನಿನಗೆ ತಿಳಿಯಾಕಿಲ್ಲ ಅಂತ
ಹೆದರಿಸಿ ಸ್ಮಶಾನದ ತಗ್ಗಿನಾಗ ಮಲಕೊಂಡಿತ್ತು
ಅದರ ತಲಿಬುರುಡಿ ಎದ್ದು
ಚಹಾದಂಗಡಿ ಮುಂದ ಆಡ್ಡಾಡಕೊಂತ ಬಂದಾಗ
ಪುಕ್ಕಟೆ ಸುದ್ದಿ ಪೇಪರನಿಂದಲೇ
ಇಲ್ಲಾ ಮನಶ್ಯರಿಂದಲೇ ಕೇಳಿಕೊಂಡ
ನಾ ನಿಮ್ಮ ಏರಿಯೊ ಕಾಯೋ ಪೋಲೀಸ್ ಅಂತಾ
ಲಾಟಯಿಂದ ಚಟ್ ಚಟ್ ಬಡಕೊಂತ ಒಳಗ್ಹೋಗಿ
ಕುಂತ ದುಡ್ಡಕೊಡದ ಇಡ್ಲಿ – ಚಾ ಕುಡದ
ಅಡ್ಡಾಡಕೊಂತ
ಮಧ್ಯಾನ್ಹ ಬಸ್ಸಿನಾಗ ಹತ್ತಿ
ನಾ ಕಂಡಕ್ಟರ ಅಂತ ಹೇಳಿ ಉಳಿದ
ಚಿಲ್ಲರೆ ಕೊಡವ ಪಂಚ ಕಟ್‌ಕಟಿಸಿ
ಬಸ್ಸಿನ್ಯಾಗಿನ ದ್ಯಾಮಪ್ಪ ಲಗಮವ್ವರನ್ನ
ಅಂದಿಸಿ
ಲೊಳಗೆ ಕಾಲಹಾಕಿಕೊಂಡ ಕಾರ್ಪೋರೇಶನ್‌ದಾಗ
ಪಟ್ಟಾವಾಲಾ ಆಗಿ ಒಳಗ ಸಾಹೇಬರ ಮುಂದ
ನಾ ಮುಂಡ ಇಲ್ಲದ ರುಂಡ
ಅನನಕೋಂತ ಒಳಗ ಹೋಗುವಾಗ
ನಾ ನಿನ್ನ ಮುಂಡಽನ ಬಾರೋ
ಎಂದು ಎರಡೂ ಕೂಡಿ ಹಲ್ಲಕಿರೀತಾವು
ಸಮಾಧಿ ಬುಡದಾಗ ಗೊರಲಿ
ಹುಟ್ಟಕೊಳ್ತಾವನ್ನೋದ ಗೊತ್ತಾಗದಽ
ಗಾಡಿ ಏರಿಹೋಗಿ
ರಕ್ತ- ನರ ಇಲ್ಲದ ಈ ಬುರುಡೆಗಳೆರಡೂ
ಗೊರಲಿಗಳ ಮ್ಯಾಲ ಬಿದ್ದು ಏಳುವದರೊಳಗ
ಸಮಾಧಿಯಾಗಿದ್ದು
ಮುದುಕಿ ಡೊಗ್ಗಾಲೂರಿ ಮಗನ ಮುಖ
ನೋಡುವಾಗ
ಬುರುಡಿಯಿಂದ ಬಂದ ಒಂದೊಂದೇ
ಹುಳುಗಳು ಅವನ ಒಂದೊಂದೇ ಕಥೆ
ಹೇಳಿಕೊಂತ ಮುದುಕಿನ್ನ ಕ್ಯಾಕರಿಸಿ ನೋಡುವಾಗ
ಮುದುಕಿ ಜೀವಾಽನ ಹಾರಿಹೋಗಿತ್ತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...