ಲಂಚ

ನಮ್ಮ ಬಾಜೂಮನಿ ಮುದುಕಿ ಯಾವತ್ತೂ
ತನ್ನ ಮಗಗಽ ಒಟಾ ಒಟಾ ಮಾಡಕೊಂತ
ಹೇಽಳ್ತಿತ್ತು.
ಯಪ್ಪಾ ಮಗನಽ ಮನಶ್ಯಾರಾಗ ಕೂಡುಕೋರೋ ಅಂತ
ಆದರೆ ಈ ಮಗ ಮುಖದ ಮ್ಯಾಲ
ನಗು ತೋರಿಸಿದ್ರೂ ಎದ್ಯಾಗ ನೂರೆಂಟ ಕ್ಯಾಕ್ಟಸ್‌
ತುಂಬಿಕೊಂಡ ಮತ್ತ ಮ್ಯಾಲ ಕುಡದ
ಕೆಕ್ಕರಿಸಿಕೊಂಡ
ನೀ ಸುಮ್ಮನಿರಬೆಽ ನಿನಗೆ ತಿಳಿಯಾಕಿಲ್ಲ ಅಂತ
ಹೆದರಿಸಿ ಸ್ಮಶಾನದ ತಗ್ಗಿನಾಗ ಮಲಕೊಂಡಿತ್ತು
ಅದರ ತಲಿಬುರುಡಿ ಎದ್ದು
ಚಹಾದಂಗಡಿ ಮುಂದ ಆಡ್ಡಾಡಕೊಂತ ಬಂದಾಗ
ಪುಕ್ಕಟೆ ಸುದ್ದಿ ಪೇಪರನಿಂದಲೇ
ಇಲ್ಲಾ ಮನಶ್ಯರಿಂದಲೇ ಕೇಳಿಕೊಂಡ
ನಾ ನಿಮ್ಮ ಏರಿಯೊ ಕಾಯೋ ಪೋಲೀಸ್ ಅಂತಾ
ಲಾಟಯಿಂದ ಚಟ್ ಚಟ್ ಬಡಕೊಂತ ಒಳಗ್ಹೋಗಿ
ಕುಂತ ದುಡ್ಡಕೊಡದ ಇಡ್ಲಿ – ಚಾ ಕುಡದ
ಅಡ್ಡಾಡಕೊಂತ
ಮಧ್ಯಾನ್ಹ ಬಸ್ಸಿನಾಗ ಹತ್ತಿ
ನಾ ಕಂಡಕ್ಟರ ಅಂತ ಹೇಳಿ ಉಳಿದ
ಚಿಲ್ಲರೆ ಕೊಡವ ಪಂಚ ಕಟ್‌ಕಟಿಸಿ
ಬಸ್ಸಿನ್ಯಾಗಿನ ದ್ಯಾಮಪ್ಪ ಲಗಮವ್ವರನ್ನ
ಅಂದಿಸಿ
ಲೊಳಗೆ ಕಾಲಹಾಕಿಕೊಂಡ ಕಾರ್ಪೋರೇಶನ್‌ದಾಗ
ಪಟ್ಟಾವಾಲಾ ಆಗಿ ಒಳಗ ಸಾಹೇಬರ ಮುಂದ
ನಾ ಮುಂಡ ಇಲ್ಲದ ರುಂಡ
ಅನನಕೋಂತ ಒಳಗ ಹೋಗುವಾಗ
ನಾ ನಿನ್ನ ಮುಂಡಽನ ಬಾರೋ
ಎಂದು ಎರಡೂ ಕೂಡಿ ಹಲ್ಲಕಿರೀತಾವು
ಸಮಾಧಿ ಬುಡದಾಗ ಗೊರಲಿ
ಹುಟ್ಟಕೊಳ್ತಾವನ್ನೋದ ಗೊತ್ತಾಗದಽ
ಗಾಡಿ ಏರಿಹೋಗಿ
ರಕ್ತ- ನರ ಇಲ್ಲದ ಈ ಬುರುಡೆಗಳೆರಡೂ
ಗೊರಲಿಗಳ ಮ್ಯಾಲ ಬಿದ್ದು ಏಳುವದರೊಳಗ
ಸಮಾಧಿಯಾಗಿದ್ದು
ಮುದುಕಿ ಡೊಗ್ಗಾಲೂರಿ ಮಗನ ಮುಖ
ನೋಡುವಾಗ
ಬುರುಡಿಯಿಂದ ಬಂದ ಒಂದೊಂದೇ
ಹುಳುಗಳು ಅವನ ಒಂದೊಂದೇ ಕಥೆ
ಹೇಳಿಕೊಂತ ಮುದುಕಿನ್ನ ಕ್ಯಾಕರಿಸಿ ನೋಡುವಾಗ
ಮುದುಕಿ ಜೀವಾಽನ ಹಾರಿಹೋಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದರ ಮಾತಿನ್ನೇಕೆ
Next post ಲಿಂಗಮ್ಮನ ವಚನಗಳು – ೩೪

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…