ಲಂಚ

ನಮ್ಮ ಬಾಜೂಮನಿ ಮುದುಕಿ ಯಾವತ್ತೂ
ತನ್ನ ಮಗಗಽ ಒಟಾ ಒಟಾ ಮಾಡಕೊಂತ
ಹೇಽಳ್ತಿತ್ತು.
ಯಪ್ಪಾ ಮಗನಽ ಮನಶ್ಯಾರಾಗ ಕೂಡುಕೋರೋ ಅಂತ
ಆದರೆ ಈ ಮಗ ಮುಖದ ಮ್ಯಾಲ
ನಗು ತೋರಿಸಿದ್ರೂ ಎದ್ಯಾಗ ನೂರೆಂಟ ಕ್ಯಾಕ್ಟಸ್‌
ತುಂಬಿಕೊಂಡ ಮತ್ತ ಮ್ಯಾಲ ಕುಡದ
ಕೆಕ್ಕರಿಸಿಕೊಂಡ
ನೀ ಸುಮ್ಮನಿರಬೆಽ ನಿನಗೆ ತಿಳಿಯಾಕಿಲ್ಲ ಅಂತ
ಹೆದರಿಸಿ ಸ್ಮಶಾನದ ತಗ್ಗಿನಾಗ ಮಲಕೊಂಡಿತ್ತು
ಅದರ ತಲಿಬುರುಡಿ ಎದ್ದು
ಚಹಾದಂಗಡಿ ಮುಂದ ಆಡ್ಡಾಡಕೊಂತ ಬಂದಾಗ
ಪುಕ್ಕಟೆ ಸುದ್ದಿ ಪೇಪರನಿಂದಲೇ
ಇಲ್ಲಾ ಮನಶ್ಯರಿಂದಲೇ ಕೇಳಿಕೊಂಡ
ನಾ ನಿಮ್ಮ ಏರಿಯೊ ಕಾಯೋ ಪೋಲೀಸ್ ಅಂತಾ
ಲಾಟಯಿಂದ ಚಟ್ ಚಟ್ ಬಡಕೊಂತ ಒಳಗ್ಹೋಗಿ
ಕುಂತ ದುಡ್ಡಕೊಡದ ಇಡ್ಲಿ – ಚಾ ಕುಡದ
ಅಡ್ಡಾಡಕೊಂತ
ಮಧ್ಯಾನ್ಹ ಬಸ್ಸಿನಾಗ ಹತ್ತಿ
ನಾ ಕಂಡಕ್ಟರ ಅಂತ ಹೇಳಿ ಉಳಿದ
ಚಿಲ್ಲರೆ ಕೊಡವ ಪಂಚ ಕಟ್‌ಕಟಿಸಿ
ಬಸ್ಸಿನ್ಯಾಗಿನ ದ್ಯಾಮಪ್ಪ ಲಗಮವ್ವರನ್ನ
ಅಂದಿಸಿ
ಲೊಳಗೆ ಕಾಲಹಾಕಿಕೊಂಡ ಕಾರ್ಪೋರೇಶನ್‌ದಾಗ
ಪಟ್ಟಾವಾಲಾ ಆಗಿ ಒಳಗ ಸಾಹೇಬರ ಮುಂದ
ನಾ ಮುಂಡ ಇಲ್ಲದ ರುಂಡ
ಅನನಕೋಂತ ಒಳಗ ಹೋಗುವಾಗ
ನಾ ನಿನ್ನ ಮುಂಡಽನ ಬಾರೋ
ಎಂದು ಎರಡೂ ಕೂಡಿ ಹಲ್ಲಕಿರೀತಾವು
ಸಮಾಧಿ ಬುಡದಾಗ ಗೊರಲಿ
ಹುಟ್ಟಕೊಳ್ತಾವನ್ನೋದ ಗೊತ್ತಾಗದಽ
ಗಾಡಿ ಏರಿಹೋಗಿ
ರಕ್ತ- ನರ ಇಲ್ಲದ ಈ ಬುರುಡೆಗಳೆರಡೂ
ಗೊರಲಿಗಳ ಮ್ಯಾಲ ಬಿದ್ದು ಏಳುವದರೊಳಗ
ಸಮಾಧಿಯಾಗಿದ್ದು
ಮುದುಕಿ ಡೊಗ್ಗಾಲೂರಿ ಮಗನ ಮುಖ
ನೋಡುವಾಗ
ಬುರುಡಿಯಿಂದ ಬಂದ ಒಂದೊಂದೇ
ಹುಳುಗಳು ಅವನ ಒಂದೊಂದೇ ಕಥೆ
ಹೇಳಿಕೊಂತ ಮುದುಕಿನ್ನ ಕ್ಯಾಕರಿಸಿ ನೋಡುವಾಗ
ಮುದುಕಿ ಜೀವಾಽನ ಹಾರಿಹೋಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದರ ಮಾತಿನ್ನೇಕೆ
Next post ಲಿಂಗಮ್ಮನ ವಚನಗಳು – ೩೪

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…