ಲಂಚ

ನಮ್ಮ ಬಾಜೂಮನಿ ಮುದುಕಿ ಯಾವತ್ತೂ
ತನ್ನ ಮಗಗಽ ಒಟಾ ಒಟಾ ಮಾಡಕೊಂತ
ಹೇಽಳ್ತಿತ್ತು.
ಯಪ್ಪಾ ಮಗನಽ ಮನಶ್ಯಾರಾಗ ಕೂಡುಕೋರೋ ಅಂತ
ಆದರೆ ಈ ಮಗ ಮುಖದ ಮ್ಯಾಲ
ನಗು ತೋರಿಸಿದ್ರೂ ಎದ್ಯಾಗ ನೂರೆಂಟ ಕ್ಯಾಕ್ಟಸ್‌
ತುಂಬಿಕೊಂಡ ಮತ್ತ ಮ್ಯಾಲ ಕುಡದ
ಕೆಕ್ಕರಿಸಿಕೊಂಡ
ನೀ ಸುಮ್ಮನಿರಬೆಽ ನಿನಗೆ ತಿಳಿಯಾಕಿಲ್ಲ ಅಂತ
ಹೆದರಿಸಿ ಸ್ಮಶಾನದ ತಗ್ಗಿನಾಗ ಮಲಕೊಂಡಿತ್ತು
ಅದರ ತಲಿಬುರುಡಿ ಎದ್ದು
ಚಹಾದಂಗಡಿ ಮುಂದ ಆಡ್ಡಾಡಕೊಂತ ಬಂದಾಗ
ಪುಕ್ಕಟೆ ಸುದ್ದಿ ಪೇಪರನಿಂದಲೇ
ಇಲ್ಲಾ ಮನಶ್ಯರಿಂದಲೇ ಕೇಳಿಕೊಂಡ
ನಾ ನಿಮ್ಮ ಏರಿಯೊ ಕಾಯೋ ಪೋಲೀಸ್ ಅಂತಾ
ಲಾಟಯಿಂದ ಚಟ್ ಚಟ್ ಬಡಕೊಂತ ಒಳಗ್ಹೋಗಿ
ಕುಂತ ದುಡ್ಡಕೊಡದ ಇಡ್ಲಿ – ಚಾ ಕುಡದ
ಅಡ್ಡಾಡಕೊಂತ
ಮಧ್ಯಾನ್ಹ ಬಸ್ಸಿನಾಗ ಹತ್ತಿ
ನಾ ಕಂಡಕ್ಟರ ಅಂತ ಹೇಳಿ ಉಳಿದ
ಚಿಲ್ಲರೆ ಕೊಡವ ಪಂಚ ಕಟ್‌ಕಟಿಸಿ
ಬಸ್ಸಿನ್ಯಾಗಿನ ದ್ಯಾಮಪ್ಪ ಲಗಮವ್ವರನ್ನ
ಅಂದಿಸಿ
ಲೊಳಗೆ ಕಾಲಹಾಕಿಕೊಂಡ ಕಾರ್ಪೋರೇಶನ್‌ದಾಗ
ಪಟ್ಟಾವಾಲಾ ಆಗಿ ಒಳಗ ಸಾಹೇಬರ ಮುಂದ
ನಾ ಮುಂಡ ಇಲ್ಲದ ರುಂಡ
ಅನನಕೋಂತ ಒಳಗ ಹೋಗುವಾಗ
ನಾ ನಿನ್ನ ಮುಂಡಽನ ಬಾರೋ
ಎಂದು ಎರಡೂ ಕೂಡಿ ಹಲ್ಲಕಿರೀತಾವು
ಸಮಾಧಿ ಬುಡದಾಗ ಗೊರಲಿ
ಹುಟ್ಟಕೊಳ್ತಾವನ್ನೋದ ಗೊತ್ತಾಗದಽ
ಗಾಡಿ ಏರಿಹೋಗಿ
ರಕ್ತ- ನರ ಇಲ್ಲದ ಈ ಬುರುಡೆಗಳೆರಡೂ
ಗೊರಲಿಗಳ ಮ್ಯಾಲ ಬಿದ್ದು ಏಳುವದರೊಳಗ
ಸಮಾಧಿಯಾಗಿದ್ದು
ಮುದುಕಿ ಡೊಗ್ಗಾಲೂರಿ ಮಗನ ಮುಖ
ನೋಡುವಾಗ
ಬುರುಡಿಯಿಂದ ಬಂದ ಒಂದೊಂದೇ
ಹುಳುಗಳು ಅವನ ಒಂದೊಂದೇ ಕಥೆ
ಹೇಳಿಕೊಂತ ಮುದುಕಿನ್ನ ಕ್ಯಾಕರಿಸಿ ನೋಡುವಾಗ
ಮುದುಕಿ ಜೀವಾಽನ ಹಾರಿಹೋಗಿತ್ತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...