Home / ಕವನ / ಕವಿತೆ / ಗಿಳಿ ಮತ್ತು ಸೀತೆ

ಗಿಳಿ ಮತ್ತು ಸೀತೆ

ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ
ಕಣ್ಣೀರ ಸುರಿಸುತ್ತಾ ಕೊರಗುವೇಕೆ!
ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ
ಸೀತೆ ಮಿಥಿಲೆ ತೊರೆದು ಹೋಗುವಳೆಂದೆ!

ಸೀತೆ ಮನ ತುಂಬಿದವ ಶ್ರೀರಾಮ
ಶ್ರೀರಾಮ ವರಿಸಿದ ಹೆಣ್ಣು ಸೀತೆ
ಇಬ್ಬರಾಸೆಗಳಿಂದು ಕೈಗೂಡಿ ಅವರಿಂದು
ಸತಿಪತಿಗಳಾಗಿಹುದು ದೈವಲೀಲೆ |

ಇಂದು ಮಿಥಿಲಾಪುರವೂ ವೈಭವದಿ ಮಿಂಚಿಹುದು
ಅರಮನೆಯ ತುಂಬೆಲ್ಲಾ ಜನಸಾಗರ
ಜನಕರಾಜನ ಕಣ್ಣು ತುಂಬಿ ನಿಂತಿದೆ ಇಂದು
ಸಂತೋಷದಲಿ ದುಃಖ ಕೂಡಿಕೊಂಡು |

ನೋಡು ಗಿಳಿಯೆ ನಿನ್ನ ಆ ಗೆಳತಿ ಸೀತೆಯನು
ಹಿರಿಯ ಸಂತಸದಲ್ಲು ದುಃಖಭಾವ
ಚಿಗುರು ಬೆರಳುಗಳಿಂದ ತಂದೆ ಕಣ್ಣೀರನ್ನು
ಒರೆಸಿ ನಗಿಸುತಲಿಹುದು ಕಾಣದೇನು!

ಸಲಹಿದಪ್ಪನ ಹೊರತು ಆತ್ಮೀಯರಾರಿಹರು!
ನೀನಲ್ಲವೇ ಅವಳ ಪ್ರೀತಿ ಗೆಳತಿ!
ನಿನ್ನ ಮರೆಯುವಳೇನೇ, ನಿನ್ನ ಬಿಟ್ಹೋಗುವಳೆ!
ತವರು ನೆನಪಿನ ಒಡವೆ ನೀನೆ ತಾನೆ!

ನೋಡು ಅರಮನೆ ಮುಂದೆ ಕನಕರಥ ನಿಂತಿಹುದು
ಶ್ರೀರಾಮ ಅದರಲ್ಲಿ ಕುಳಿತಿಹನು
ಕಣ್ಣ ಕುಡಿ ನೋಟದಲೆ ರಾಮ, ಸೀತೆಯ ಕರೆವ
ನಿನಗೆ ಆಯಿತೆ ಲಜ್ಜೆ! ಘಾಟಿ ನೀನು|
ನಿನ್ನ ಇನಿದನಿ ನಿನ್ನ ಇಂಪಾದ ಸವಿನುಡಿಯ
ಎಲ್ಲೂ ಕೇಳದೆ ಸೀತೆ ಹುಡುಕುತಿಹಳು
ಬಾ ನನ್ನ ತೊಡೆವೇರು ಎನುತ ಕರೆಯುತಿಹಳು
ಪಿಸುಮಾತು ಮೆಲು ದನಿಯ ದಾಟಿಯಲ್ಲಿ|

ನವ ದಂಪತಿಗಳ ನಡುವೆ ನನ್ನ ಇರುವಿಕೆ ಸರಿಯೇ
ಎಂದೇಕೆ ಬೇಸರ ಪಡುತಲಿರುವೆ ||
ಸೀತೆ ಪ್ರತಿರೂಪದಲಿ ಆ ರಥದ ಕೆಳೆಯು ನೀನು
ಪಯಣಿಸಮ್ಮ ಗಿಳಿಯೆ ಮುಂದೆ ನೀನು !
ಬಾ ಗಿಳಿಯೆ ರಥವೇರು ಸೀತೆ ಕರೆಯುತಲಿಹಳು
ಹೊತ್ತಾಯ್ತು ಇನ್ನೇಕೆ ಚಿಂತೆ ನಿನಗೆ!
ಮೌನ ಬಿಡು ಸುತ್ತೆಲ್ಲ ಚೈತ್ರ ಚೆಲುವಿದೆ ನೋಡು
ಹಾಡುತ್ತ ನೀ ಸಾಗು ಹೆಮ್ಮೆಯಿಂದ |
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ