ಕವಿತೆ…

ನಿನಗೆಂದು ಕವಿತೆಯನು ಬರೆದೆ
ಸರಿದ ಮಧು ಚಣದ ರಸ ಸುರಿದೆ

ನೀನು ಓದಬೇಕೆಂದು
ಓದಿ ತಿಳಿಯಬೇಕೆಂದು
ತಿಳಿದು ಉಳಿಸಬೇಕೆಂದು
ಉಳಿಸಿ ನಲ್ನುಡಿಯ ಕಳಿಸಬೇಕೆಂದು

ಮನಸಿನಲೆ ಬಗೆದು ಕೊರಗಿನಲಿ
ಮರೆಯಲಾಗದೆ ಬರೆದೆ

ಅದರೊಳಗೆ –
ನಮ್ಮೊಲವಿನ ಕಥೆ
ಸುಖದ ಸಗ್ಗದ ನಗೆ
ಭಾವ ತುಂಬಿದ ವ್ಯಥೆ…..

ಅನುಕಂಪ, ಅನುರಾಗ
ನಿನಗುಂಟೆಂದು
ಭಾವದುಸಿರಿನ ವೇಗ
ನಿನಗೆ ನಂಟೆಂದು

ಬರಿದೆ ಕಲ್ಪಿಸಿ ಬರೆದೆ….
ನಿನಗೆಂದು ಕವಿತೆಯನು ಬರೆದೆ….

ಪ್ರೇಮದ ಒಂದೆ ಮಿಡಿತ,
ನಿನ್ನ ನಾಮದ ಒಂದು ತುಡಿತ
ಅರಿಯದೆ, ಹಿತ-ಮಿತ
ಅರುಹಿದೆ….ಓ! ಎದೆಯಕ್ಷತ

ಅದರೊಳಗೆ –
ಹೇಳಲರಿಯದ ಬಯಕೆಯನು
ಆಳವರಿಯದ ಕೊರತೆಯನು
ಮೇಳವಿಸಿ ಬರೆದೆ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಳಿ ಮತ್ತು ಸೀತೆ
Next post ಚೋರ ಸೂತ್ರವಾದರೂ ಎಲ್ಲರಿಗೊಂದಾದೀತೇ?

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…