ಕವಿತೆ…

ನಿನಗೆಂದು ಕವಿತೆಯನು ಬರೆದೆ
ಸರಿದ ಮಧು ಚಣದ ರಸ ಸುರಿದೆ

ನೀನು ಓದಬೇಕೆಂದು
ಓದಿ ತಿಳಿಯಬೇಕೆಂದು
ತಿಳಿದು ಉಳಿಸಬೇಕೆಂದು
ಉಳಿಸಿ ನಲ್ನುಡಿಯ ಕಳಿಸಬೇಕೆಂದು

ಮನಸಿನಲೆ ಬಗೆದು ಕೊರಗಿನಲಿ
ಮರೆಯಲಾಗದೆ ಬರೆದೆ

ಅದರೊಳಗೆ –
ನಮ್ಮೊಲವಿನ ಕಥೆ
ಸುಖದ ಸಗ್ಗದ ನಗೆ
ಭಾವ ತುಂಬಿದ ವ್ಯಥೆ…..

ಅನುಕಂಪ, ಅನುರಾಗ
ನಿನಗುಂಟೆಂದು
ಭಾವದುಸಿರಿನ ವೇಗ
ನಿನಗೆ ನಂಟೆಂದು

ಬರಿದೆ ಕಲ್ಪಿಸಿ ಬರೆದೆ….
ನಿನಗೆಂದು ಕವಿತೆಯನು ಬರೆದೆ….

ಪ್ರೇಮದ ಒಂದೆ ಮಿಡಿತ,
ನಿನ್ನ ನಾಮದ ಒಂದು ತುಡಿತ
ಅರಿಯದೆ, ಹಿತ-ಮಿತ
ಅರುಹಿದೆ….ಓ! ಎದೆಯಕ್ಷತ

ಅದರೊಳಗೆ –
ಹೇಳಲರಿಯದ ಬಯಕೆಯನು
ಆಳವರಿಯದ ಕೊರತೆಯನು
ಮೇಳವಿಸಿ ಬರೆದೆ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಳಿ ಮತ್ತು ಸೀತೆ
Next post ಚೋರ ಸೂತ್ರವಾದರೂ ಎಲ್ಲರಿಗೊಂದಾದೀತೇ?

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys