ಕವಿತೆ…

ನಿನಗೆಂದು ಕವಿತೆಯನು ಬರೆದೆ
ಸರಿದ ಮಧು ಚಣದ ರಸ ಸುರಿದೆ

ನೀನು ಓದಬೇಕೆಂದು
ಓದಿ ತಿಳಿಯಬೇಕೆಂದು
ತಿಳಿದು ಉಳಿಸಬೇಕೆಂದು
ಉಳಿಸಿ ನಲ್ನುಡಿಯ ಕಳಿಸಬೇಕೆಂದು

ಮನಸಿನಲೆ ಬಗೆದು ಕೊರಗಿನಲಿ
ಮರೆಯಲಾಗದೆ ಬರೆದೆ

ಅದರೊಳಗೆ –
ನಮ್ಮೊಲವಿನ ಕಥೆ
ಸುಖದ ಸಗ್ಗದ ನಗೆ
ಭಾವ ತುಂಬಿದ ವ್ಯಥೆ…..

ಅನುಕಂಪ, ಅನುರಾಗ
ನಿನಗುಂಟೆಂದು
ಭಾವದುಸಿರಿನ ವೇಗ
ನಿನಗೆ ನಂಟೆಂದು

ಬರಿದೆ ಕಲ್ಪಿಸಿ ಬರೆದೆ….
ನಿನಗೆಂದು ಕವಿತೆಯನು ಬರೆದೆ….

ಪ್ರೇಮದ ಒಂದೆ ಮಿಡಿತ,
ನಿನ್ನ ನಾಮದ ಒಂದು ತುಡಿತ
ಅರಿಯದೆ, ಹಿತ-ಮಿತ
ಅರುಹಿದೆ….ಓ! ಎದೆಯಕ್ಷತ

ಅದರೊಳಗೆ –
ಹೇಳಲರಿಯದ ಬಯಕೆಯನು
ಆಳವರಿಯದ ಕೊರತೆಯನು
ಮೇಳವಿಸಿ ಬರೆದೆ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಳಿ ಮತ್ತು ಸೀತೆ
Next post ಚೋರ ಸೂತ್ರವಾದರೂ ಎಲ್ಲರಿಗೊಂದಾದೀತೇ?

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…