ಒಂದೇ ಮುಷ್ಠಿ ಒಂದೇ ತಂತ್ರ

“ಓಂಕಾರಾತ್ಮಂ ತ್ವಂ ಮಮಕಾರಾನ್ವಿತಂ
ಜಗತ್ ಸ್ವರೂಪಾಯ ವಿಶಾನಿಕೇತನಂ ||ಓಂ||”

ಒಂದು ಮುಷ್ಠಿ ಒಂದೇ ತಂತ್ರ
ಐಕ್ಯತೆ ಒಂದೇ ಮಂತ್ರ ಒಂದೇ
ಜಾತಿ ಭೇದ ಭಾವ ದೃಷ್ಟಿ
ಎಲ್ಲಾ ಒಂದೇ ಸೃಷ್ಟಿಯೂ ||

ರೆಂಬೆ ಕೊಂಬೆ ಒಂದೇ ಹಸಿರು
ನೆಲದ ಬೇರು ಮಣ್ಣ ಬಸಿರು
ಹೂವು ಹಣ್ಣು ಕಾಯಿ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||

ಕಡಲ ತೀರ ಧರೆಯು ಒಂದೇ
ಮುತ್ತು ರತ್ನ ಹೊನ್ನು ಬೆಳ್ಳಿ
ಜೀವ ಜೀವನ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||

ವೇದ ಮಂತ್ರ ಧರ್ಮ ಒಂದೇ
ರಾಮ ರಹಿಮ ಏಸು ಬುದ್ಧ
ವೇಷ, ಭಾಷೆ ನೀತಿ ನೇಮ
ಎಲ್ಲಾ ಒಂದೇ ಸೃಷ್ಟಿಯೂ ||

ಒಂದೇ ಸಂಸ್ಕೃತಿ ಒಂದೇ ತತ್ವ
ದ್ವೇಷ ಕ್ಲೇಶ ಎಲ್ಲಾ ಅಂತ್ಯ
ಭಾರತೀಯರು ನಾವು ಧನ್ಯರು
ಕನ್ನಡ ತಾಯೆ ಮಡಿಲು ಮಾನ್ಯವು

“ನಮಾಮಿತಂ ನಮಾಮಿತಂ ಭೂಗರ್ಭಧಾತಂ
ಸರ್ವಂ ಸುಖ ಪ್ರಾತ್ಪಂ ಸರ್ವ ಜೀವ ಜೀವಾತ್
ಓಂ ಶಾಂತಿಃ ಶಾಂತಿಃ ಶಾಂತಿಃ”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಘಾತ
Next post ಹೀಗೊಂದು ಕವಿತೆ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…