ಒಂದೇ ಮುಷ್ಠಿ ಒಂದೇ ತಂತ್ರ

“ಓಂಕಾರಾತ್ಮಂ ತ್ವಂ ಮಮಕಾರಾನ್ವಿತಂ
ಜಗತ್ ಸ್ವರೂಪಾಯ ವಿಶಾನಿಕೇತನಂ ||ಓಂ||”

ಒಂದು ಮುಷ್ಠಿ ಒಂದೇ ತಂತ್ರ
ಐಕ್ಯತೆ ಒಂದೇ ಮಂತ್ರ ಒಂದೇ
ಜಾತಿ ಭೇದ ಭಾವ ದೃಷ್ಟಿ
ಎಲ್ಲಾ ಒಂದೇ ಸೃಷ್ಟಿಯೂ ||

ರೆಂಬೆ ಕೊಂಬೆ ಒಂದೇ ಹಸಿರು
ನೆಲದ ಬೇರು ಮಣ್ಣ ಬಸಿರು
ಹೂವು ಹಣ್ಣು ಕಾಯಿ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||

ಕಡಲ ತೀರ ಧರೆಯು ಒಂದೇ
ಮುತ್ತು ರತ್ನ ಹೊನ್ನು ಬೆಳ್ಳಿ
ಜೀವ ಜೀವನ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||

ವೇದ ಮಂತ್ರ ಧರ್ಮ ಒಂದೇ
ರಾಮ ರಹಿಮ ಏಸು ಬುದ್ಧ
ವೇಷ, ಭಾಷೆ ನೀತಿ ನೇಮ
ಎಲ್ಲಾ ಒಂದೇ ಸೃಷ್ಟಿಯೂ ||

ಒಂದೇ ಸಂಸ್ಕೃತಿ ಒಂದೇ ತತ್ವ
ದ್ವೇಷ ಕ್ಲೇಶ ಎಲ್ಲಾ ಅಂತ್ಯ
ಭಾರತೀಯರು ನಾವು ಧನ್ಯರು
ಕನ್ನಡ ತಾಯೆ ಮಡಿಲು ಮಾನ್ಯವು

“ನಮಾಮಿತಂ ನಮಾಮಿತಂ ಭೂಗರ್ಭಧಾತಂ
ಸರ್ವಂ ಸುಖ ಪ್ರಾತ್ಪಂ ಸರ್ವ ಜೀವ ಜೀವಾತ್
ಓಂ ಶಾಂತಿಃ ಶಾಂತಿಃ ಶಾಂತಿಃ”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಘಾತ
Next post ಹೀಗೊಂದು ಕವಿತೆ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys