Home / ಕವನ / ಕವಿತೆ / ಛಲೋ ಅಂದರ ನಡೀಬೇಕ

ಛಲೋ ಅಂದರ ನಡೀಬೇಕ

ಛಲೋ ಅಂದರ ನಡೀಬೇಕ
ಸಿದ್ಧರಾಮನ ಪೂಜೆಯಾಗ
ನಾನು ಕೂಡ ಹೋಗಬೇಕ ||
ನಾನು ಅಂದರೆ ನಾನೇ ಅಲ್ಲ
ನೀನು ಅಂದರೆ ನೀನೇ ಎಲ್ಲಾ
ಜೀವನ ಉಂಟು ಬೇವು ಬೆಲ್ಲ
ತಮ್ಮಾಽಽಽ !!

ಬೆಳಕಾಗೊವರೆಗೂ
ಕುಣಿಬೇಕ ಸಂತೆಯೊಳ
ಗೊಂದು ಮಾಳಿಗೆ ತರತರದ
ಗೊಂಬಿ| ದೊಂಬಿಯಾಗ
ಮಾರಾಟಮಾಡಬೇಕ ಸಾಗುತದಽಽಽ
ಜೀವನ| ಸಿದ್ಧರಾಮ ಪೂಜೆಯಾಗ
ನಾನು ಕೂಡ ಹೋಗಬೇಕ ನೋಡಬೇಕ
ತಮ್ಮಾಽಽಽ !!

ಜೋಳಿಗೆ ಒಂದು
ನೂರೆಂಟು ಹಸಿವು
ನೀಗಿಸೋಕೆ ಕಾಯಕ
ನರನಾಡಿಗಳಲ್ಲಿ ಕರ್ಮ
ಧರ್ಮದ ಉಸಿರು ಆಡಬೇಕ
ಸಿದ್ಧರಾಮನ ಪೂಜೆಯಾಗ
ನಾನು ಕೂಡ ಹೋಗಬೇಕ
ಹೋಗಿ ಒಪ್ಪಿಸಬೇಕ ತಮ್ಮಽಽಽ !!

ನಿದ್ದಿ ಹೋದ್ರ ಮಾಯದ
ಬಜಾರ ಕಂಡು ಕಾಣದ್ದು
ಬ್ಯಾಸರ ಮಲಗಿದ್ಹಂಗ
ಸಂಸಾರ | ಎಚ್ಚರಾಗಬೇಕ
ಬೆಚ್ಚನೆ ಗೂಡು ಹಚ್ಚ ಹೆಸರಾಗ
ಬೇಕ | ಸಿದ್ದರಾಮ ಪೂಜೆ
ಯಾಗ ನಾನು ಕೂಡ ಹೋಗಬೇಕ |
ನೂರೆಂಟು ಮಕ್ಕಳ ಹಡೀಬೇಕ
ಮುಕ್ತಿಗೆ ಸೋಪಾನ ಹಾಕಬೇಕ |
ತಮ್ಮಽಽಽ ||

ಒಳಗೊಂದು ಹೊರಗೊಂದು
ಮನಿ ಕಟ್ಟಬೇಕ| ಕಟ್ಟಕಡೆಯ
ಇಟ್ಟಿಗೆಗಳ ಇರಿಸಿ ಸಿದ್ದರಾಮನ
ಕರೀಬೇಕ| ನಾನು ಅವನ ಕೂಡ
ಹೋಗಬೇಕ| ಪೂಜೆ ಮಾಡಬೇಕ
ಕೂಡಿ ಹಾಡಬೇಕ ತಮ್ಮಾಽಽಽ ||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...