ಛಲೋ ಅಂದರ ನಡೀಬೇಕ

ಛಲೋ ಅಂದರ ನಡೀಬೇಕ
ಸಿದ್ಧರಾಮನ ಪೂಜೆಯಾಗ
ನಾನು ಕೂಡ ಹೋಗಬೇಕ ||
ನಾನು ಅಂದರೆ ನಾನೇ ಅಲ್ಲ
ನೀನು ಅಂದರೆ ನೀನೇ ಎಲ್ಲಾ
ಜೀವನ ಉಂಟು ಬೇವು ಬೆಲ್ಲ
ತಮ್ಮಾಽಽಽ !!

ಬೆಳಕಾಗೊವರೆಗೂ
ಕುಣಿಬೇಕ ಸಂತೆಯೊಳ
ಗೊಂದು ಮಾಳಿಗೆ ತರತರದ
ಗೊಂಬಿ| ದೊಂಬಿಯಾಗ
ಮಾರಾಟಮಾಡಬೇಕ ಸಾಗುತದಽಽಽ
ಜೀವನ| ಸಿದ್ಧರಾಮ ಪೂಜೆಯಾಗ
ನಾನು ಕೂಡ ಹೋಗಬೇಕ ನೋಡಬೇಕ
ತಮ್ಮಾಽಽಽ !!

ಜೋಳಿಗೆ ಒಂದು
ನೂರೆಂಟು ಹಸಿವು
ನೀಗಿಸೋಕೆ ಕಾಯಕ
ನರನಾಡಿಗಳಲ್ಲಿ ಕರ್ಮ
ಧರ್ಮದ ಉಸಿರು ಆಡಬೇಕ
ಸಿದ್ಧರಾಮನ ಪೂಜೆಯಾಗ
ನಾನು ಕೂಡ ಹೋಗಬೇಕ
ಹೋಗಿ ಒಪ್ಪಿಸಬೇಕ ತಮ್ಮಽಽಽ !!

ನಿದ್ದಿ ಹೋದ್ರ ಮಾಯದ
ಬಜಾರ ಕಂಡು ಕಾಣದ್ದು
ಬ್ಯಾಸರ ಮಲಗಿದ್ಹಂಗ
ಸಂಸಾರ | ಎಚ್ಚರಾಗಬೇಕ
ಬೆಚ್ಚನೆ ಗೂಡು ಹಚ್ಚ ಹೆಸರಾಗ
ಬೇಕ | ಸಿದ್ದರಾಮ ಪೂಜೆ
ಯಾಗ ನಾನು ಕೂಡ ಹೋಗಬೇಕ |
ನೂರೆಂಟು ಮಕ್ಕಳ ಹಡೀಬೇಕ
ಮುಕ್ತಿಗೆ ಸೋಪಾನ ಹಾಕಬೇಕ |
ತಮ್ಮಽಽಽ ||

ಒಳಗೊಂದು ಹೊರಗೊಂದು
ಮನಿ ಕಟ್ಟಬೇಕ| ಕಟ್ಟಕಡೆಯ
ಇಟ್ಟಿಗೆಗಳ ಇರಿಸಿ ಸಿದ್ದರಾಮನ
ಕರೀಬೇಕ| ನಾನು ಅವನ ಕೂಡ
ಹೋಗಬೇಕ| ಪೂಜೆ ಮಾಡಬೇಕ
ಕೂಡಿ ಹಾಡಬೇಕ ತಮ್ಮಾಽಽಽ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋಂದನ ಬಾಳೆಗೊನೆ
Next post ಅಮರ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys