ಅಮರ

(‘ದಿ. ಜಾನ್ ಕೆನಡಿ’ಯ ಕೊಲೆಯನ್ನು ನೆನೆದು)

ಅಯ್ಯೋ! ಹತನಾದ ವಿಶ್ವ ಪ್ರೇಮಿ!!
ಕಗ್ಗೂಲೆಯ ಕಾಳ ರಾತ್ರಿಯಲಿ
ಜಗ ಬೆರೆಯಿತು….
ವಿಶ್ವ ಪ್ರಾಣದ ರಕ್ತ –
ಕೋಡಿ ಹರಿಯಿತು

ಶೋಕಾಂಬುಧಿಯ ತೆರೆ
ಎದ್ದು ಮೊರೆಯಿತು!

ಜವರಾಯ ನೀ ನನ್ನಿಕಾರನೆಂದು
ನನ್ನಿಯಲೆ ನಿನ್ನ ಒಲವೆಂದು
ಧರೆಯೆಲ್ಲ ನಂಬಿಹುದು….

ಆದರೆ….. ಹುಸಿ,
ನಿನ್ನ ನಂಬಿದ ಕುಲಕೆ
ನೀ ಬರೆದೆ ಎದೆ ಬಿರಿವ ಪುಸಿ

ಹಾಸ…ಪರಿಹಾಸ…..ಮೋಸ!
ನಮ್ಮ ಕನಸಿನ ಮನೆಗೆ
ಎರಗಿ ಬಂದ ನಾಶ…..

‘ಬಾಪು ಆಬೆಗೆ’ ಬಡಿದ ದೆವ್ವ
ಜವಗುಣವ ಮೀರಿ
ಮನುಜತೆಯ ಜೀವಂತ ದೀಪಕೆ ಬಡಿಯಿತು….ದಿವ್ಯ

ಹೊಸಭಾವ, ಜೀವೈಕ್ಯದ ನವೀನ
ರಸದುಂಬಿ
ಮನುಷ್ಯತ್ವ, ಸಮತತ್ವ

ನಿಜವೆಂದು ನಂಬಿ-ದ
ನಿರ್ಮಲ ನಗುಮೊಗದ
ವಿಶ್ವಶಾಂತಿಯ

ಸಹೃದಯ ವಿಶ್ವನೇತ
ಓ ! ನೀನಿಲ್ಲ!!
ಆವ ನಿರ್ದಯ ಕಠೋರ
ನಿರ್ಮಮ ಪ್ರೇತ
ಗೈದಿತು ಮಹಾ
ಪ್ರಾಣಕೆ ಘಾತ….

ನಿನ್ನುಸಿರಿನ
ಬೆಲೆಯನರಿಯದೀ
ಹಾಳು ನರಜಾತಿ

ನಿನ್ನ ಬದುಕಿನ
ನೆಲೆಯ ತಿಳಿಯದೀ
ಕಟುಕವಾನರಕೋತಿ….

ನಿನ್ನಿರವಿನ ಭೇದವರಿಯದ ಜನ
ಕ್ಲೀಬತನಲಿ ಸಿಡಿದರೇನು
ನಂಜಿನ ಗುಂಡು….?

ನೀನಮರ, ಅಜೇಯ
ದೈವ ಮಾನವ,
ಜಗಕಾಗಿ ಮಡಿದ ಗಂಡು…..!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...