ಬೆಂಕಿ

ಒಡಲಿನಾಗೆ ಸಿಡಿಲು ಕುಂತು
ಕೂಗು ಹಾಕಿತು.
ನೆತ್ತರಾಗೆ ತತ್ತಿಯಿಟ್ಟು
ತೇಲಿಬಿಟ್ಟಿತು.

ಕೆಂಡದುಂಡೆಯಂಥ ತತ್ತಿ
ಕನಸು ಕಟ್ಟಿತು-
ಅದು ಬಿರುಕು ಬಿಟ್ಟಿತು,
ನೆತ್ತರಲ್ಲಿ ತತ್ತಿಯೊಡೆದು ಬಂದುಬಿಟ್ಟವು-
ಮರಿಗಳು ಬಂದುಬಿಟ್ಟವು.
ಮೌನದಾಗೆ ಮೈಯ ತಿಂದು ಮಾತಾಡಿದವು-
ಮರಿಗಳು ಮಾತಾಡಿದವು.

ಉರಿವ ಒಡಲಿನೊಳಗಿನಿಂದ
ಸೀಳಿಕೊಂಡು ಬಂದವು.
ಹೊರಗೆ ಬೀದಿಬೀದಿಯಲ್ಲಿ
ಧಗಧಗನೆ ಉರಿದವು.

ಮಲಗಿ ಮುಲುಕುತಿದ್ದ ಮಣ್ಣು
ಕೆಂಗಣ್ಣ ತೆರೆಯಿತು
ಘಾಸಿಗೊಂಡ ಗಿಡಗಳು
ಬಾಯಿಲ್ಲದ ಮರಗಳು
ದಟ್ಟಯಿಸುವ ದನಿಯಾಗಿ
ಮುಗಿಲಮಟ್ಟ ನಿಂತವು
ಮನಸಿನೊಳಗೆ ಇಳಿದವು
ಬೆಂಕಿಯಾಗಿ ಬೆಳೆದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವತ್ತಿನ ಸಾಹಿತ್ಯ : ಯಾಕೆ ಪ್ರಖರವಾಗಿಲ್ಲ?
Next post ಕನಸು

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…