ಶ್ರಮಜೀವಿಗಳ ಹಾಡು

ನಾವು ಕಟ್ಟಿದ ಗೆದ್ದಲಗೂಡು
ನಿಮಗಾಯಿತು ಹುತ್ತ.
ನಾವು ಹೊತ್ತ ಮಣ್ಣಿನ ಕನಸು
ನಿಮಗಾಯಿತು ನನಸು.
ನಾವು ನೀರೆರೆದ ಹೂವು ಹಣ್ಣು
ನಮಗಾದವು ಹುಣ್ಣು.

ಮೂಸಿ ನೋಡದ ಕಾಡು ಕಲ್ಗಳ
ಮುದ್ದಾಡಿದೆವು ನಾವು
ಕಲ್ಲು ಕಂದಗಳ ಹೊತ್ತು ತಂದೆವು
ಕೋಟೆ ಕೊತ್ತಲಕೆ ಕಾಯ ಕೊಟ್ಟೆವು
ಕೋಟಿ ಕೈಗಳ ಕೋಟೆಯ ಕೆಳಗೆ
ಲಯವಾಯಿತು ಉಸಿರು
ದಣಿಗಳದೇ ಹೆಸರು.

ಕಲ್ಲಿನಲಿ ನಾವ್ ಕಣ್ಣ ಕಂಡೆವು
ಮೈಯ ಮುಟ್ಟುತ ಮೋದವುಂಡೆವು
ಎಳೆ ಎಳೆ ಬಿಡಿಸುತ ಜೀವ ಕೊಟ್ಟೆವು
ಎದ್ದು ನಿಂತಿತು ದೇವಸ್ಥಾನ
ಕೆಸರು ಗದ್ದೆಯ ಕಾರಸ್ಥಾನ.

ನರನರದಲಿ ಹೆಡೆಯೆತ್ತುತ
ನೀವ್ ಹರಿದಾಡುತ
ಮನ ಮಾರಿದೆವು ನಾವು
ಕರುಳನು ಕಿತ್ತು
ಕೊರಳಲ್ಲಿ ಧರಿಸಿ
ಮೆರೆದಾಡಿದಿರಿ ನೀವು

ಕಂಡ ಕಂಡವರ ಕವಚವಾದವರು
ಸುಖ ತೆತ್ತವರು, ಸಾವ ಕಂಡವರು
ದಾರಿ ಕಾಣುವೆವು ನಾವು
ಗೋರಿಯೊಳಗಡೆಯೆ ಘೋಷಣೆ ಕೂಗಿ
ಸಿಡಿದೇಳುವೆವು ನಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಿಳೆ – ಭಾವನಾತ್ಮಕ ಕ್ರಿಯಾತ್ಮಕ ಸಂವೇದನೆಗಳು
Next post ಸಿಹಿಯಾದ ಶಿಕ್ಷೆ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys