Home / ಕವನ / ಕವಿತೆ / ಗೋರಿಗಳ ನಡುವೆ

ಗೋರಿಗಳ ನಡುವೆ


ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ
ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ
ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ
ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ

ನಡುವೆ ನಿಂತವನ
ಮನಸು ಚಿಂತೆವನ
ಉರಿಯುತ್ತಿದೆ ಕಾಡು
ಮುರಿಯುತ್ತಿದೆ ಮಾಡು

ಮನಸಿನ ಮಾತು
ಕಣ್ಣಲೆ ಹೂತು
ಅರಿವಾಗದು ಅಲ್ಲಿ
ಅದು ನೀರಿಲ್ಲದ ನಲ್ಲಿ.

ನಗವಿದ್ದರೆ, ನಗುವಿದ್ದರೆ
ಮುಗಿಬೀಳುವರಲ್ಲಿ.
ನಿಜ ಮುಚ್ಚುತ, ಹುಸಿ ಬಿಚ್ಚುತ
ಹಸಿವಾದರೂ ಹಸಿರಾಗುತ
ಅವರಿವರಿಗೆ ಉಸಿರಾದರೆ
ಹೆಸರಾಗುವುದಲ್ಲಿ
ಮನದಾಳವ ತೋಡಿದರೆ
ಕೆಸರಾಗುವುದಲ್ಲಿ
ಮೊರೆ ಹೊಕ್ಕೆನು ಇಲ್ಲಿ


ಗೋಡೆಗಳಾದರು ಕಂಬಗಳಾದರು
ಮಾತು ಮರೆಯುವ ಮೃಗಗಳಾದರು
ಸತು ಮುರಿಯುವ ತೋಳಗಳಾದರು
ಮನಸಿಗೆ ಮುಷ್ಟಿಯ ತೋಳುಗಳಾದರು.

ಬೆಳಕಿಗೆ ಬರಿದೆ ಕತ್ತಲ ಕೊರೆದೆ
ಮೀಟುವ ತಂತಿ ಮಿನುಗುವ ತಾರೆ-
ಕಾಣದೆ, ಕಡೆಗೆ ನಾನೇ ಕತ್ತಲು
ಕಣ್ಕಟ್ಟಿದ ವಿಷ-ಬಾಳಿನ ಕುಯಿಲು.


ಮನಸಿಲ್ಲವೆ ನಿಮಗಾದರು?
ದನಿಯಿಲ್ಲವೆ ನಿಜ-ಕಾದರು?
ನನ್ನೆದೆ ಬೆಳಕಿನ ಗೋರಿಗಳೆ
ಬಾಳಿನ ಬಯಲಿನ ಭೇರಿಗಳೆ.

ಅಳಲಿನ ಅನುಭವ ಆಳಕೆ ತಟ್ಟಿ
ಮನುಜತೆ ಮಾತು ಮೂಲಕ ಮುಟ್ಟಿ
ಕಲಕುವ ಅಲೆಗಳು, ಎದೆ ಮುಟ್ಟುವ ಮಜಲು
ಗೋರಿಗಳಾ ಒಡಲು-ಈಗಾಯಿತು ಕಡಲು.

ಗೋರಿಗೊರಳುಗಳು ಉಬ್ಬಿ ಬಂದವು
ಬೆಂದ ಮನಸನು ತಬ್ಬಿ ನಿಂದವು
ತೇವಗೊಳ್ಳುತ ತೇವಗೊಳಿಸುತ
ತೆರಳು ಎಂದವು ಬಾಳಿನ ಹರಿತಕೆ
ಮರಳು ಎಂದವು ಗೋಳಿನ ಇರಿತಕೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...