ನೀಲಮೇಘಗಳಾಚೆ

 

ಹೊಲದಲ್ಲಿ ನಿಂತು ನಕ್ಷತ್ರಗಳನ್ನು ಕೈ ಬೀಸಿ
ಕರೆಯುತ್ತಾಳೆ ತನ್ನೊಲುಮೆಯ ಹೂವಿಗಾಗಿ,
ಬಿಸಿರಕ್ತದ ಪರಿಮಳಕ್ಕಾಗಿ ಕ್ರೂರ ಪ್ರೀತಿಗಾಗಿ.

ಬೇಡ ಗೆಳತಿ,
ಇನ್ನೆಷ್ಟು ದಿನ ಉಳಿದೀತು ಈ ಅಸಹಾಯಕ ಜಗತ್ತು?

ಹಗಲಿನ ವೇಷದಲ್ಲಿ ರಾತ್ರೆಗಳನ್ನು ಹೊದೆಯಬಲ್ಲ
ಕಾಲ ನಿನ್ನನ್ನು ಬೆತ್ತಲಾಗಿಸಬಲ್ಲದು.

ಅಷ್ಟು ದೂರದ ಜೋಳದ ತೆನೆಗಳು,
ಹಕ್ಕಿ ನಿಲುವಿನ ನೀಲಿ ಹೂವುಗಳು ಗಾಳಿಯಲೆಗಳಿಗೆ
ನಲಿಯುವುದನ್ನು ನೋಡು-
ಎಚ್ಚರಗೊಳ್ಳದೇ ನಿನ್ನ ಗೊಡ್ಡು ಮನಸ್ಸು?

ಇನ್ನಿಲ್ಲದವನ ದುರಾಶೆ ಬಿಡು,
ಸದಾ ಬೆತ್ತಲೆಯಲ್ಲಿನ ಕೀಳು ನಿಂದನೆಗೊಳಗಾಗುವ
ಪಾಪಿ ಮದ್ಯವನ್ನು ಹೀರು;
ಅವನು ನಿನ್ನನ್ನು ಹೀರಿ ಹಾಕಲೆತ್ನಿಸಿದಂತೆ.

ಅದೂಂದು ಕಾಳ ರಾತ್ರೆ-
ಜೊಂಡುಹುಲ್ಲಿನ ಚಾವಣಿಯೊಳಕ್ಕೆ ತೂರಿಬರುವ
ಹೊಸ ಕನಸುಗಳಿಗೆ ನಿಂತ ನೀರಿನ
ಪ್ರತಿರೂಪದಲಿ ಮೈಯೊಡ್ಡು;
ಕಲಕಿದೊಡನೆ ಕಲರವದ ಹಕ್ಕಿಯಾಗಿ
ನೀಲಮೇಘಗಳನ್ನು ದಾಟಿಹೋಗುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನೆ ಗಂಟೆ
Next post ಮಲವಯ್ಯ ಶೆಟ್ಟಿ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys