Home / ಕವನ / ಕವಿತೆ / ಜಗಜ್ಯೋತಿ

ಜಗಜ್ಯೋತಿ

ಜಗಜ್ಯೋತಿಯೇ ಯುಗ ಜ್ಯೋತಿಯೇ
ಮಹಾಂತ ಮಹಿಮನೆ ಬಸವಣ್ಣ || ಪ ||
ಏಕ ದೇವನನು ನಂಬಿದೆ ತೋರಿದೆ
ನೀನೇ ಇಂದಿಗು ಗತಿಯಣ್ಣ || ಅ.ಪ.||

ಒಂದೊಂದು ಜಾತಿಗೊಂದೊಂದು ದೈವ
ದೇವರು ಜಾತಿಗಳಗಣಿತವು
ಜಾತಿಯೊಂದೆ ಮನುಕುಲವು ದೈವವೂ
ಒಂದೇ ಸಾರಿದೆ ಸನ್ಮತವು || ೧ ||

ಒಬ್ಬನೇ ದೇವನು ಸರ್ವಕೆ ಒಡೆಯನು
ಇನ್ನೊಬ್ಬನಿಗೆಲ್ಲಿಯ ಜಾಗ
ಅನೇಕ ದೇವರ ಕಲ್ಪನೆ ಸಮಾಜ
ದನೈಕ್ಯ ಭೇದದ ರೋಗ || ೨ ||

ವಿಶ್ವವನ್ನು ತುಂಬಿರುವ ಲಿಂಗವನು
ಅಂಗದಲ್ಲಿ ಸಾಕಾರಗೊಳಿಸಿದೆ
ವಿಶ್ವ ಜೀವರಲಿ ವಿಶ್ವೇಶನ ಕಂಡೆ
ವಿಶ್ವಮಾನವನ ರೂಪುಗೊಳಿಸಿದೆ || ೩ ||

ಸಂಕೇತ ರೂಪ ಇಷ್ಟಲಿಂಗವದು
ಸಕಲವು ಅವನದೆ ರೂಪಗಳು
ಒಬ್ಬನೆ ಈಶ್ಚರ ಅವನೆ ಲಿಂಗ ಶಿವ
ಸಲ್ಲವು ಕಲ್ಪನೆ ರೂಪಗಳು || ೪ ||

ಪ್ರಾಣಲಿಂಗಕೆ ಕಾಯುವೆ ಸೆಜ್ಜೆ
ಅವಗೇಕೆ ಗುಡಿಯ ಗೊಡವೆ
ವಿಶ್ಚದ ಲಿಂಗಕೆ ಗಗನವೆ ದೇಗುಲ
ಅವಗೆಂಥ ಪೂಜೆ ಒಡವೆ || ೫ ||

ಮೂರ್ತಿ ಪೂಜೆಯಲಿ ಭವ್ಯ ಗುಡಿಗಳಲಿ
ಹಣದ ಸ್ವಾರ್ಥವುಂಟು
ದೇವರ ವ್ಯಾಪಾರಿಗಳನು ಖಂಡಿಸಿ
ತೋರಿದೆ ನೇರದ ನಂಟು || ೬ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...