ನಡುನೀರಿನಲ್ಲಿ

ದೀಪ ಹಚ್ಚಿ
ಹೃದಯ ಬಿಚ್ಚಿ
ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು :
ಇವಗೊದಗಲಿ ಹಿರಿತನ
ಮೇಲೇಳಲಿ ಮನೆತನ
ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು.
* * *

ನೀ ಬಂದೆ
ನಮ್ಮ ನಡುವೆ ನಿಂದೆ
ಏನೇನೋ ನಿರೀಕ್ಷೆ ತಂದೆ.
ನೀ ನಿಂತ ನೆಲ ಬೆಳೆ ಚಿಮ್ಮುವ ಹೊಲವಾಗಿ
ನೀ ಸೋಕಿದ ಮರಕ್ಕೆ ಮೈತುಂಬ ಫಲವಾಗಿ
ಬತ್ತಿದ ಜಲಗಳೆಲ್ಲ ಮತ್ತೆ ಕಾಣಿಸಿಕೊಂಡು
ಬಣ್ಣದ ಚಿತ್ತಾರವಾದೀತು ಬ್ಳು ಬದುಕು ಎಂದು
ತುದಿಗಾಲಿನಲಿ ನಿಂತು ಎರಡು ಬದಿಗೆ
ಕಾದೆಉ ದಿನಾ ಅಂಥ ಸಿರಿಗಳಿಗೆಗೆ.
* * *

ಹರಿದ ಕಾಗದದಂಥ ಬಿಳಿ ಮುಗಿಲ ಚೂರು
ಎಲ್ಲೊ ಐದಾರು ಬಾನಿನಲ್ಲಿ
ಯಾವಾಗ ಆದುವೋ ಕರಿಯ ಕಂಬಳಿ ಚೂರು
ನೂರು ಸಾವಿರ ಈಗ ಮಾಯದಲ್ಲಿ.
ಎಲ್ಲ ಒಂದಕ್ಕೊಂದು ಸೇರಿಕೊಂಡು
ದಟ್ಟವಾಗಿ, ನೀರ ಬೆಟ್ಟವಾಗಿ
ಸಾಗಿಬಂದವು ಮಾರಿಗಾಲಲ್ಲಿ ಜೋರಲ್ಲಿ
ಕಾಳವರ್ಷಿಣಿ ಕೂಗು ಹಾಕಿಕೊಂಡು.
ಬೆನ್ನ ಚಪ್ಪರಿಸಿ ಛೂ ಬಿಟ್ಟಿತೆಲ್ಲಿಂದಲೋ
ಮೇಲೆದ್ದು ಬಂದ ಮನೆಮುರುಕ ಗಾಳಿ
ಬಂತು ಬಂತೋ ಬಂತು ನಗುವ ನೆಲದೆದೆಗೆ
ಪ್ರಳಯ ಕಾಲದ ಮೊದಲ ಕಂತು ಎನುವಂತೆ
ಜಲದ ದಾಳಿ!
* * *

ಹಿಂದೆ ಇಷ್ಟಾದರೂ ಹಸಿರಿದ್ದ ನೆಲವೆ ಇದು?
ಕಾಲಿಟ್ಟ ಕಡೆಯೆಲ್ಲ ಕೆಸರು,
ಹರಿದ ಛಾವಣಿ ಮುರಿದುಬಿದ್ದ ಗಿಡಗಂಟಿ
ಒಡೆದ ಸೂರು.
ಬೀದಿ ಮನೆ ಅಂಗಡಿ ಚರಂಡಿ ಡೈನೇಜುಗಳ
ಒಂದುಗೂಡಿಸಿ ನಿತ ಹೊಲಸು ನೀರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗಜ್ಯೋತಿ
Next post ಇರುಳ ಸಂಜೆಯಲಿ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys