ದುಂಡುಚಿ

ಪಂಡಿತರೇ ವಿವಿಧ ಕಳಾ ಮಂಡಿತರೇ
ಇದು ನೀವು ಕೇಳತಕ್ಕ ಕೃತಿಯಲ್ಲ
ಇದು ಬೀದಿವರೆ ಬೀರನ ಕತೆ ಒಂಟಿ ವ್ಯಥೆ
ಮುಚ್ಚಿ ಕಿವಿ ಇದು ಬೇರೆಯೇ ಕತೆ
ಬೇಕೆಂದೇ ಹೇಳಿದ್ದು ಸರಸ್ವತಿ ಬರೆಸಿದ್ದಲ್ಲ
ಅವಳ ಸಂಗತಿ ಬೇರೆ
ಸ್ಫೂರ್ತಿ ಸುರಿದದ್ದಲ್ಲ ಕಲೆ ಒಲಿದದ್ದಲ್ಲ
ಅವೆಲ್ಲ ನಿಮ್ಮ ಪೇಟೆಂಟು ಸ್ವತ್ತು
ಆ ಗತ್ತು ಸಾಕು -ಹಳೆಮಾಲು ಜರಿರುಮಾಲು ನಿಮಗೇ ಸಾಕು
ಇಲ್ಲಿ ಬೆಳಗ್ಗೆ ಬಿಲ್ಲಿಯ ಬೇಟೆ ಕೂಗುತ್ತ
ಹೊರಗೆ ಫಸ್ಟ್ ಗೀಯರಿನ ಟ್ರಕ್ಕಿನ ಭರಾಟೆ
ಬಡಿಯುತ್ತ ಹೊಟ್ಟೆಗೆ ತಾಳ ಹಾಕುತ್ತ
ಕೊನೆನಿದ್ದೆ ಹೆಣೆದ ಸ್ವಪ್ನ ಒಡೆಯುತ್ತ ಒಡೆಯುತ್ತ
ಒಡೆದು ಬಿದ್ದವನ ಒಡಕು ತಮ್ಮಟೆ
ನುಚ್ಚು ನೂರಾದ ಅಪಸ್ವರ-ಸಾವಿರ ಸ್ವರ
ನಿಮ್ಮ ನಾಜೂಕು ಕಿವಿಗೆ ತಾಗೀತೆ ಈ ಧ್ವನಿ?
ವೇಷಧಾರಿಗಳೇ ಏಳಿ
ನೀವು ಕುಣಿದದ್ದು ಸಾಕು
ಎಣ್ಣೆ ಹಾಕಿ ತೊಳೆಯಿರಿ ಬಣ್ಣ
ನಿಮ್ಮ ಶ್ರಾದ್ಧಕ್ಕೆ ಈ ಆಪೋಷಣ:
ವಾತಾಪಿ ಜೀರ್ಣೋ ಭವ ! ಹರೋಹರ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು ಜೀವಕ್ಕೆ ಏನೂ ಅನ್ನಿಸೋದಿಲ್ವೆ?
Next post ಜಗಜ್ಯೋತಿ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys