ಹಿರಿಯರು

ಇವರು ಹಿರಿಯರು
ತಾವರಿಯದ ಹೊನ್ನು
ಕೊಪ್ಪರಿಗೆಗಟ್ಟಲೆ ಇದೆಯೆಂದು ಸುತರಾಂ ಅರಿಯರು
ಎಳೆಯರು ಅದರ ಮಾತಾಡಿದರೊ
ಇವರ ಬಾಯಿಂದ ಉರಿಯ ಮಳೆ
ಕೆಸರ ಹೊಳೆ
ಕಣ್ಣೆಲ್ಲ ಬೆಂಕಿಬಳೆ.

ನದಿ ಹೊರಳಿದ್ದಕ್ಕೆ
ನೆಲ ಕೆರಳಿದ್ದಕ್ಕೆ
ಇಷ್ಟು ದಿನ ನಿಂತ ಬಂಡೆ ಈಗ ತಳ ಧಿಕ್ಕರಿಸಿ
ಬೆಟ್ಟದಿಂದ ಉರುಳಿದ್ದಕ್ಕೆ
ಕೋಪ ಇವರಿಗೆ
ಇಟ್ಟ ಜೈಲಿನಿಂದ ಮಗ ತಪ್ಪಿಸಿಕೊಂಡದ್ದಕ್ಕೆ
ಹಿಡಿಶಾಪ ಅವನಿಗೆ.

ಅರಿವಿಗೆ ಮಿತಿಗಳಿವೆ
ಮಿತಿಗಳೇ ಮರ್‍ಯಾದೆ ಇವರಿಗೆ.
ತೊಟ್ಟ ಬೇಡಿಯೆ ಬಳೆ
ಮೈಬೆವರೇ ಪುನುಗು ಶುದ್ದಿಗೆ.
ಗೆಜ್ಜೆ ಕಟ್ಟಿದ ಪ್ರಾಯ ಕೊಪ್ಪರಿಗೆ ಗುರಿಯಲ್ಲಿ
ಹೆಜ್ಜೆ ಹಾಕಿದ್ದಕ್ಕೆ
ಕೇರಿಕಟ್ಟಳೆ ಮೀರಿ ಊರ ಗಡಿಯಾಚೆ
ಭೇರಿ ನುಡಿಸಿದ್ದಕ್ಕೆ
ಮನೆ ಮನೆ ಮುಂದೆ ಇವರ ಮಾರಿ ಗಂಟಲ ತುತ್ತೂರಿ
ಎಲ್ಲೆಂದರಲ್ಲಿ
ತಮ್ಮ ಮಕ್ಕಳ ವಿರುದ್ಧವೇ ಪಿತೂರಿ!

ಪ್ರಳಯವಾಗಿಲ್ಲ ಬಿಡಿ
ಕೂತು ಮಾತಾಡೋಣ
ಗಡಿ ಇದ್ದರೇನಂತೆ ಆಮದು ರಫ್ತಿಗೆ ಒಪ್ಪೋಣ
ಎಂದಿರೋ
ಕೈತಪ್ಪಿ ಇವರಿಗೆ ಅವಾಚ್ಯ ಭಾಷೆಯ ಮೇಲಿನ ಕಡಿವಾಣ
ಬಂಗಾರದ ಬಟ್ಟಲು
ಕಫಕ್ಕೆ ನಿಲ್ದಾಣ

ತಿಳಿಯದ ಹುಚ್ಚಿಗೆ ತಡೆಗಳ ಮೆಚ್ಚಿಗೆ ಯಾಕೆ?
ಹೊಸತನ್ನು ಕಟ್ಟುವ ಅದನ್ನು ಕಟ್ಟೀತೇ ಟೀಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಣ ತಿನ್ನುತ್ತಾನೆ
Next post ಪ್ರೀತಿ ಎಂಬ ಹೂದೋಟದಲ್ಲಿ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…