ಚಿತೆಗೇರಲಿಲ್ಲ ಹೂವುಗಳು

ಗಾಳಿ ತಂದಿತು
ದೀಪವಾರಿದ ಸುದ್ದಿ

ಒಂದು ಚಣ ಮೌನ
ನೋಡು ಎಂದಿತು ಹೃದಯ
ಬೇಡವೆಂದಿತು ಮನಸು

ನಿಮ್ಮ ಚಿತೆಗೇರಿಸಬೇಕೆಂದು
ಕೊಂಡಿದ್ದ ಎರಡು ನಸು ಹಳದಿ
ಗುಲಾಬಿ ಮೊಗ್ಗುಗಳು
ಇನ್ನೂ ಹಾಗೆಯೇ ಇವೆ
ನಳನಳಿಸುತ್ತಿವೆ ಹೂದಾನಿಯಲ್ಲಿ

ಸದ್ಯ ಬೂದಿಯಾಗಲಿಲ್ಲ
ಹೂವುಗಳು…
ಏನೋ ಸಮಾಧಾನ

ನಿಮ್ಮನ್ನು ದ್ವೇಷಿಸುತ್ತಲೇ
ಪ್ರೀತಿಸಿದೆವು ನಾವು
ನೀವೇ ಕಲಿಸಿದ ಪಾಠ
ವೈಭವೀಕರಿಸಲಾರೆ ನಿಮ್ಮ ಸಾವು

ಉಳಿದಷ್ಟು ದಿನ
ಉಳಿದೇ ಉಳಿಯುವುದು
ಅಗಲಿಕೆಯ ನೋವು

(ಪಿ. ಲಂಕೇಶ್‍ಗೆ ಶ್ರದ್ಧಾಂಜಲಿ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೩
Next post ಊಸುರವಳ್ಳಿ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…