ಎಲ್ಲರೂ ದಡ ಸೇರಿದರು

ಎಲ್ಲರೂ ದಡ ಸೇರಿದರು
ನಾನು ಮಾತ್ರ ನಡು ನೀರಿನಲ್ಲಿ

ಎಲ್ಲರೂ ಹೊಳದಾಟಿದರು
ನಾನು ಮಾತ್ರ ಮುರುಕು ದೋಣಿಯಲ್ಲಿ

ಕತ್ತರಿಸುತ್ತಿದೆ ಚಳಿ
ತತ್ತರಿಸುತ್ತಿದೆ ಎದೆ ನಡುಗಿ

ಅಲೆಯೊಳಗೆ ತೇಲಿ ಬಿಟ್ಟಿರುವೆ
ಕಂಬನಿಯ ಮಾಲೆ
ಇರುವುದೊ ಇಲ್ಲವೊ
ನಾನರಿಯೆ ನನ್ನ ಪಾಲಿಗೆ ನಾಳೆ

ಎಲವೊ ಚಂದಿರನೆ
ನೀನಾದರೂ ಇಳಿ ಬಿಡಬಾರದೆ
ನೂಲ ಏಣಿ
ಅಗಣಿತ ತಾರಾ ಗಣಿಗಳೇ
ಈ ಕಂಗೆಟ್ಟ ಕೆಳದಿಯನು
ಕರುಣೆಯಿಂದಲೇ ಕಾಣಿ

ಏನಚ್ಚರಿ!
ನರನಾಡಿಯಲಿ ಧುಮ್ಮಿಕ್ಕಿ ಹರಿದು
ಬೆಚ್ಚಗೆ ಇಟ್ಟಿದ್ದಾಳೆ ರಕ್ತದೇವತೆ
ಪುಪ್ಪುಸದಲಿ ನೆಲೆಗೊಂಡು
ಹುರಿದುಂಬಿಸುತ್ತಿದ್ದಾನೆ ಪ್ರಾಣವಾಯು
ಒಂದಿನಿತೂ ಕೊಂಕಿಲ್ಲ ಬಾಡಿಲ್ಲ
ಎದೆಯೊಳಗಣ ಸಹಸ್ರ ದಳದ ಕಮಲ

ಎಣ್ಣೆ ತೀರಿದೆ ಎಂದು
ತೋರಿದರೂ
ಜೀವದೀಪ ಭರವಸೆಯಲಿ
ಉರಿಯುವುದು

ನಂಬುಗೆಯೇ ಅಂಬಿಗನು
ಹರಿಗೋಲ ಅಪ್ಪುವೆನು

ಎಲ್ಲರೂ ದಡ ಸೇರಿದರು
ನಾನೂ ಸೇರುವೆನು

ಎಲ್ಲರೂ ಹೊಳೆ ದಾಟಿದರು
ನಾನೂ ದಾಟದೆ ಇರೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿಲುಗರಿ – ೬
Next post ನಿಶ್ಚಿಂತೆ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys