Home / ಕವನ / ಕವಿತೆ / ಎಲೆ ಸಾವೇ ನೀನೇಕೆ ಜೀವಂತ?

ಎಲೆ ಸಾವೇ ನೀನೇಕೆ ಜೀವಂತ?

ಬಿದ್ದ ಮರಗಳ ಬುಡಕ್ಕೆ ಹತ್ತಿದ ಗೆದ್ದಲು
ನಿಗಿ ನಿಗಿ ಕೆಂಡಕ್ಕೆ ಕಣ್ಣೀರು ಬಿದ್ದು ಬರಿ ಇದ್ದಿಲು
ದಾರಿ ಬದಿಯಲ್ಲಿ ದುಗುಡ ತುಂಬಿದ ಗಿಡ
ಮೇಲೆ ನೋಡಿದರೆ ನಡುಗುತ್ತಿರುವ ಮೋಡ.

ಬಿದ್ದ ಮನೆಯ ಜಂತೆಗಳಲ್ಲಿ ಕಂತೆಕಂತೆ ಕತೆಗಳು
ಸಂತೆ ಗದ್ದಲದ ನಡುವೆ ಮೌನಕವಿತೆಗಳು
ರಕ್ಕೆ ಸುಟ್ಟ ಹಕ್ಕಿಯೊಳಗೆ ನಿಂತ ನಾದಗಳು
ಬೇರಲ್ಲೇ ಬೋರಲಾಗಿ ಬಿದ್ದ ಜೀವಬಳ್ಳಿಗಳು.

ಎಲ್ಲಿ ಹೋದರು ಅವರು ಎತ್ತಿ ಆಡಿಸಿದವರು?
ತೋಳ ತುಂಬ ಭಾವ ತುಂಬಿಕೊಂಡ ಜನರು!
ಬಂದೆಯಾ ಮಗುವೆ ಈ ನೆಲದ ನಗುವೆ
ಎನ್ನುತ್ತ ಮನದುಂಬಿ ಹಾಡಾಗಿ ಮಿಡಿದವರು
ಮನೆತನವ ಮೀರಿ ಗೆಳತನದ ಹಣತೆಯಲ್ಲಿ
ಉರಿದು ಕರಕಾದ ಹಟ್ಟಿಯ ಅಜ್ಜಂದಿರು
ಮುಟ್ಟಿ ಮಲ್ಲಿಗೆ ಮಾಡಿದವರು.

ಎಲೆ ಸಾವೇ ನೀನೇಕೆ ಜೀವಂತ?
ಎಲ್ಲರ ಜೀವ ಕಳೆಯುವ ಧಾವಂತ!
ಭೂಮಿಯೊಳಗಿಂದ ಎದ್ದುಬರುವೆ
ಆಕಾಶದಿಂದ ಬಿದ್ದು ಸುರಿವೆ
ಬೆಂಕಿಯಾಗಿ ಬಿರುಗಾಳಿಯಾಗಿ
ಹರಿವ ನೀರೊಳಗಿನ ಉರಿಯಾಗಿ
ಜೀವ ಕಳೆಯುತ್ತಲೇ ಜೀವಕಳೆಯಾಗುತ್ತಿರುವೆ.

ಹೊಕ್ಕುಳಲ್ಲಿ ಹುಟ್ಟಿದ ಸಾವೇ
ಬಳ್ಳಿಗೆ ಕೊಳ್ಳಿಯಿಡುವುದು ತರವೆ?
ಮಗುವಿನ ಮೊದಲ ಅಳು
ನಗುವಾಗುವ ಮೊದಲೇ
ಸಿಡಿಯಾಗಿ ಹಿಡಿಯುವ ಉಡವೇ,
ಬೆನ್ನು ಬಿಡದ ಬಾಳ ಗಡುವೇ,
ಮಾತುಗಳನ್ನು ಮೌನದಲ್ಲಿ ಒಸಗುತ್ತೀಯ
ನಗುವನ್ನು ನಡುವಲ್ಲೇ ಕತ್ತರಿಸುತ್ತೀಯ
ಹಾವಿನ ಸೇಡಿಗೆ ಹತ್ಯೆಯಾಗುತ್ತೀಯ
ನೋವಿನ ನೇಣಿಗೆ ಆತ್ಮಹತ್ಯೆಯಾಗುತ್ತೀಯ
ಪೊಲೀಸರ ಗುಂಡಾಗುತ್ತೀಯ
ಹೆಣ್ಣಿಗೆ ಗಂಡಾಗುತ್ತೀಯ
ಕುರ್ಚಿಯಲ್ಲಿ ಕೂತ ಭರ್ಜಿಯಾಗುತ್ತೀಯ
ಎಲ್ಲರೊಳಗಿದ್ದೂ ಎದುರುಬದರಾಗುತ್ತೀಯ
ನೀನಲ್ಲವೆ ನಿಜವಾದ ಆತ್ಮ!
ಸಾವಿಲ್ಲದ ಅಂತರಾತ್ಮ!

ಸಾವು ಶಿಖರವಾಗಿ ಪರ್ವತಾರೋಹಿಗಳೇ ಎಲ್ಲ
ಆಮ್ಲಜನಕ ಯಾರ ಬಳಿಯಲ್ಲೂ ಇಲ್ಲ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...