ಎಷ್ಟು ಜನ್ಮದ ಪುಣ್ಯದ ಫಲವೋ

ಎಷ್ಟು ಜನ್ಮದ ಪುಣ್ಯದ ಫಲವೋ
ನಾ ಈ ಜನ್ಮದಲಿ ಕನ್ನಡಿಗನಾಗಿರುವುದಕೆ|
ಹಿಂದಿನ ಜನ್ಮವ ಸ್ಥಿತಿಯ ನರಿಯೆ
ಮುಂದಿನಜನ್ಮದಲೇನೋ ಕಾಣೆ||

ಎಷ್ಟು ಜನ್ಮದ ಪುಣ್ಯದ ಫಲವೊ
ಈ ಕನ್ನಡ ನಾಡಲೇ ಜನಿಸಿದಕೆ|
ಈ ನಾಡ ಸಿರಿ ಸೌಂದರ್ಯವ ಕಾಣುವುದಕೆ
ಗಂಧ ಶ್ರೀಗಂಧ ಚೆಂದನದ ಲೇಪ
ಧೂಪಗಳ ಪರಿಮಳದಿ ಬೆಳೆದುದಕೆ||

ಎಷ್ಟು ಜನ್ಮದ ಪುಣ್ಯದ ಫಲವೊ
ಕಾವೇರಿ ತುಂಗೆ ಕಪಿಲ ಭದ್ರೆ ಕೃಷ್ಣೆಯಲಿ
ಮಿಂದು ಆನಂದದಿ ಹೊಳೆದುದಕೆ|
ಬಸವ ಅಲ್ಲಮ ಶರಣ ದಾಸರ
ಸಾಹಿತ್ಯದಲಿ ಕಲಿತು ವ್ಯವಹರಿಸಿದುದಕೆ||

ಎಷ್ಟು ಜನ್ಮದ ಪುಣ್ಯದ ಫಲವೊ
ಹಂಪೆ ಬೇಲೂರು ಹಳೇಬೀಡು|
ಬಾದಾಮಿ ಬನವಾಸಿ ಐಹೊಳೆ
ಶಿಲ್ಪಕಲೆಯ ಸೌಂದರ್ಯ ಕಂಡು
ಮನ ಸಂತಸದಿ ಹರ್ಷಿಸಿದಕೆ||

ಕದಂಬ ಚಾಲುಕ್ಯರ ರಾಷ್ಟ್ರಕೂಟರು
ಕಟ್ಟಿದ ನಾಡಲಿ ಜನಿಸಿರುವುದಕೆ|
ಬೇಂದ್ರೆ ಕುವೆಂಪು ಮಾಸ್ತಿ ಕಾರಂತರು
ಬೆಳೆಸಿದ ಕನ್ನಡನಾಡಲಿ ನಾನುದಿಯಿಸಿದಕೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಹೊಸ ಭೂಗ್ರಹಗಳ ಶೋಧ
Next post ಎಲೆ ಸಾವೇ ನೀನೇಕೆ ಜೀವಂತ?

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys