Home / ಲೇಖನ / ವಿಜ್ಞಾನ / ಎರಡು ಹೊಸ ಭೂಗ್ರಹಗಳ ಶೋಧ

ಎರಡು ಹೊಸ ಭೂಗ್ರಹಗಳ ಶೋಧ

ಈಗಿರುವ ಗ್ರಹಗಳಲ್ಲಿ ಜೀವಸಂಕುಲದ ಅನ್ವೇಶಣೆ ಒಂದೆಡೆ ಸಾಗಿದರೆ ಇದರ ಜೊತೆಗೆ ಹೊಸ ಭೂಗ್ರಹಗಳ ಹುಡುಕಾಟವೂ ನಡೆಯುತ್ತಿದ್ದು ಎರಡು ಹೊಸ ಭೂಗ್ರಹಗಳನ್ನು ಸ್ವಿಡ್ಜರ್ ಲ್ಯಾಂಡಿನ ಜಿನಿವಾ ವೇದಶಾಲೆ, ಮತ್ತು ಅಮೇರಿಕನ್ ಖಗೋಳ ವೇದ ಶಾಲೆಗಳು ಕಂಡು ಹಿಡಿದಿವೆ.

ಈ ಎರಡು ಭೂಗ್ರಹಗಳು ನಮ್ಮಿಂದ ೩೫ ಜ್ಯೋತಿವರ್‍ಷಗಳ ಅಂತರದಲ್ಲಿವೆ, ಎಂದು ವಿಜ್ಞಾನಿಗಳು ಅಭಿಪ್ರಾಯ. ಇದರಂತೆ ೭೦ ವರ್ಜಿನಿಸ್, ಮತ್ತು “೪೭ ಉರ್ಸೆ ಮೆಜೋರಿಸ್” ಎಂದು ಹೆಸರಿಸಲಾಗಿದ್ದು ಒಂದು ಕನ್ಯಾರಾಶಿಯಲ್ಲಿಯೂ ಇನ್ನೊಂದು ಸಪ್ತರ್ಷಿ ಮಂಡಲದಲ್ಲಿಯೂ ಇವೆ, ಎಂದು ಖಚಿತಪಡಿಸಿಕೊಳ್ಳಲಾಗಿದೆ. ರೇಡಿಯೋ ತರಂಗಗಳ ಮೂಲಕ ನಾವು ಸಂದೇಶ ಕಳಿಸಿದರೆ ೩೫ ವರ್ಷಗಳು ಬೇಕು. ನಕ್ಷತ್ರವಾಗಿದ್ದು ಸೂರ್ಯನಂತೆ ಇವೆ. ಇದನ್ನು ಸುತ್ತುವ ವರ್ಜಿನಿಯಸ್ – ೭೦, ನಮ್ಮ ಗುರುಗ್ರಹದ ಗಾತ್ರಕ್ಕಿಂತ ೮ ಪಟ್ಟು ದೊಡ್ಡದಿದೆ. ಪ್ರತಿ ೧,೧೦೦ ದಿನಗಳಿಗೊಮ್ಮೆ ತನ್ನ ಸೂರ್ಯನನ್ನು ಪ್ರದಕ್ಷಣೆ ಇವು ಹಾಕುತ್ತಿವೆ. ಇದರ ತಾಪಮಾನ ೮೦ ಸೆಲ್ಸಿಯಸ್‌ನಷ್ಟು ಇದೆ.

ಇವೆರೆಡೂ ಗ್ರಹಗಳಲ್ಲಿ ನೀರು ಇದ್ದು ಮತ್ತು ಜೀವಿ ವಿಕಾಸ ಉಂಟಾಗಿರುವ ಸಾಧ್ಯತೆ ಇದೆ, ಎಂಬುವುದು ವಿಜ್ಞಾನಿಗಳ ಅಭಿಪ್ರಾಯ. ಜೀವಿಗಳು ಅಥವಾ ಮಾನವ ವಾಸಯೋಗ್ಯ ವಾತಾವರಣ ಬಗ್ಗೆ ಯೋಚಿಸುತ್ತಿರುವ ಖಗೋಳಜ್ಞರಿಗೆ ಆಶಾದಾಯಕ ಅಂಶವೆಂದರೆ ಈ ಗ್ರಹಗಳಿಗಿರುವ ಚಂದ್ರರು. ಈ ಚಂದ್ರರ ಮೇಲೆ ವಾಸಯೋಗ್ಯವಾದ ಭೂಮಿ ಇದೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ. ಈ ಗ್ರಹಗಳ ಚಂದ್ರದಲ್ಲಿ ಸಾಗರ ಮತ್ತು ಮಳೆಯ ವಾತಾವರಣವಿದ್ದುದರಿಂದ ಮಾನವರಿಗೆ ವಸತಿಯೋಗ್ಯವೆಂದು ನಿರೀಕ್ಷಿಸಿದ್ದಾರೆ. ಈಗಾಗಲೇ ಇಂಥಹ ನಕ್ಷತ್ರಗಳನ್ನು ಮತ್ತು ಅಲ್ಲಿನ ಗ್ರಹಗಳ ಬೇಟಿಯಲ್ಲಿ ನಿರತವಾಗಿರುವ ಖಗೋಳ ಶಾಸ್ರಜ್ಞರಿಗೆ ಇದು ಹೊಸತಲ್ಲವಾದರೂ ಏನನ್ನೊ ನಿರೀಕ್ಷಿಸಿದಾರೆ. ಇನೂ ೬೦ ಗ್ರಹಗಳನ್ನು ಈ ತಂಡವು ವೀಕ್ಷಿಸತೊಡಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...