ಯಾತ್ರೆ

ಕಾವಡಿ ತಕ್ಕೊಂಡು ಕಾಶಿಯನು ಸಾರಿರಲು
ಗಂಗೆಯಲಿ ಕೆಸರಿತ್ತು ಹಾದಿಯಲಿ ಧೂಳಿತ್ತು
ವಿಶ್ವನಾಥನಿಗೆ ಮೈಲಿಗೆಯಾಗಿ ಅವನಾಗಿದ್ದ ಕಲ್ಲು!

ಪಾಪಿಗಳ ಬೀಡಾರವಾಗಿತ್ತು ವಾರಣಾಸಿ
ಸಾರನಾಥವು ಆಗಿತ್ತು ಅಸ್ತಿರಾಶಿ!
ದ್ವಾರಕದಿ ನೋಡಿದೆನು ಗೋಪಾಲ ನಿರಲಿಲ್ಲ!
ಕೇದಾರದಲ್ಲಿದ್ದೆ ಘನಹಿಮವದಾಗಿತ್ತು ಪ್ರಕೃತಿ ಜೀವ
ದೇವನಿರಲಿಲ್ಲ ಅಲ್ಲಿ! ಶಿವನಲ್ಲಿ ಕಾಣದಾದ!
ಆಬೆಟ್ಟ, ಈತೀರ್ಥ, ಈಸರಸು, ಆಉದಧಿ
ಎಲ್ಲೆಲ್ಲಿ ಹುಡುಕಿದರು ಸಿಗಲಿಲ್ಲದಾಹಶಾಂತಿ!
ದೊಡ್ಡವರ ಹುಡಿಕಿದನು! ಹೆಡ್ಡ! ಕೊಡುನಿನ್ನ ಬಿಸಿರಕ್ತ ಎಂದರವರು……
ಅರಿಯದಲೆ ದಾರಿಯನು ನಿಂತೆ ನೀರವದಲ್ಲಿ
“ಜಗದೊಳಗೆ ಕೀಳ ನೋರ್ವನ ಹುಡುಕು
ಅವನೊಳಗೆ ಹರಿಯುವುದು ಜೀವನದಿ”
ಎಂತೆಂಬ ಒಳಧನಿಯ ಕೇಳುತಲೆ……….. ಹುಡುಕಿದೆನು!
ಎತ್ತಲೂ, ಯಾರೂ, ಇರಲಿಲ್ಲ, ನನಗಿಂತ ಕೀಳು!
ನನ್ನೊಳಗೆ ನಾನೆಂದೆ-“ಹುಡುಕು ನಿನ್ನೊಳಗೆ”-ನಿಂತೆ……
ನಿಂತ ನಿಲುವಿಗೆ ಸಂತು ಸಂತಸದ ವರತೆ! ಕರಗಿ ನೀರಾದೆ
ಹರಿದು ತೊರೆಯಾದೆ! ಮುಕ್ತಿಸಾಗರದಿ ರಾಸಲೀಲೆ!
ಆದಕಾಗಿ ನನಗಿಹುದು ಆಹ್ವಾನ!……………
ಪಡೆಯುವೆನು ಪರಸಾದ! ಹಡೆಯುವೆನು ಸುಖಶಾಂತಿ
ಮುಡುಪಾಯ್ತು ಎನ್ನ ಜೀವ! ಕೇಳೆನ್ನ ಜೀವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೪
Next post ನವಿಲುಗರಿ – ೧೭

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys