ಯಾತ್ರೆ

ಕಾವಡಿ ತಕ್ಕೊಂಡು ಕಾಶಿಯನು ಸಾರಿರಲು
ಗಂಗೆಯಲಿ ಕೆಸರಿತ್ತು ಹಾದಿಯಲಿ ಧೂಳಿತ್ತು
ವಿಶ್ವನಾಥನಿಗೆ ಮೈಲಿಗೆಯಾಗಿ ಅವನಾಗಿದ್ದ ಕಲ್ಲು!

ಪಾಪಿಗಳ ಬೀಡಾರವಾಗಿತ್ತು ವಾರಣಾಸಿ
ಸಾರನಾಥವು ಆಗಿತ್ತು ಅಸ್ತಿರಾಶಿ!
ದ್ವಾರಕದಿ ನೋಡಿದೆನು ಗೋಪಾಲ ನಿರಲಿಲ್ಲ!
ಕೇದಾರದಲ್ಲಿದ್ದೆ ಘನಹಿಮವದಾಗಿತ್ತು ಪ್ರಕೃತಿ ಜೀವ
ದೇವನಿರಲಿಲ್ಲ ಅಲ್ಲಿ! ಶಿವನಲ್ಲಿ ಕಾಣದಾದ!
ಆಬೆಟ್ಟ, ಈತೀರ್ಥ, ಈಸರಸು, ಆಉದಧಿ
ಎಲ್ಲೆಲ್ಲಿ ಹುಡುಕಿದರು ಸಿಗಲಿಲ್ಲದಾಹಶಾಂತಿ!
ದೊಡ್ಡವರ ಹುಡಿಕಿದನು! ಹೆಡ್ಡ! ಕೊಡುನಿನ್ನ ಬಿಸಿರಕ್ತ ಎಂದರವರು……
ಅರಿಯದಲೆ ದಾರಿಯನು ನಿಂತೆ ನೀರವದಲ್ಲಿ
“ಜಗದೊಳಗೆ ಕೀಳ ನೋರ್ವನ ಹುಡುಕು
ಅವನೊಳಗೆ ಹರಿಯುವುದು ಜೀವನದಿ”
ಎಂತೆಂಬ ಒಳಧನಿಯ ಕೇಳುತಲೆ……….. ಹುಡುಕಿದೆನು!
ಎತ್ತಲೂ, ಯಾರೂ, ಇರಲಿಲ್ಲ, ನನಗಿಂತ ಕೀಳು!
ನನ್ನೊಳಗೆ ನಾನೆಂದೆ-“ಹುಡುಕು ನಿನ್ನೊಳಗೆ”-ನಿಂತೆ……
ನಿಂತ ನಿಲುವಿಗೆ ಸಂತು ಸಂತಸದ ವರತೆ! ಕರಗಿ ನೀರಾದೆ
ಹರಿದು ತೊರೆಯಾದೆ! ಮುಕ್ತಿಸಾಗರದಿ ರಾಸಲೀಲೆ!
ಆದಕಾಗಿ ನನಗಿಹುದು ಆಹ್ವಾನ!……………
ಪಡೆಯುವೆನು ಪರಸಾದ! ಹಡೆಯುವೆನು ಸುಖಶಾಂತಿ
ಮುಡುಪಾಯ್ತು ಎನ್ನ ಜೀವ! ಕೇಳೆನ್ನ ಜೀವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೪
Next post ನವಿಲುಗರಿ – ೧೭

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…