Home / ಕವನ / ಕವಿತೆ / ಕನಸು

ಕನಸು

ಪಿಡಿಗೆ ಅಡವೆನ್ನುವೊಲು! ನಿಡುಗತ್ತಲಡಗಿರಲು
ಸುಡುವ ಮನದವಮಾನದಲ್ಲಿ ಬೆಂದು ಬೆಂದು!
ಕಡುದುಗುಡ ಭಾರವನು ಹೂರುತಿರುವಳಾರೊ…………
ಅಮಮ! ಮಲಗಿರಲೆಲ್ಲ ಮೈಮರೆದು ಮರೆದು!-

ದೂರದಾತಾರೆಗಳು ತೀರದಾದುಗುಡಕ್ಕೆ
ತುಂಬಿ ಕಂಗಳ ನಿಂದು ನಿಡುಸುಯ್ದು ನೋಡಿ-
ಅಂಬ! ನೀನಾರೌವ್ವ ದುಗುಡವೇನೆನಲು
-ಅಮಮ! ಮಲಗಿರಲೆಲ್ಲ ಮೈಮರೆದು ಮರೆದು

ಯಾರದಾರಲಲ್ಲಲ್ಲಿ! ದಾರಿಯಲಿ ನಿಲ್ಲುತಲೆ
ಕುಂಟುತ್ತಲೆಡವುತ್ತ ನಡೆಯುತ್ತಲಿಹಳು
ಎಂಟು ರಾಜ್ಯದ ಮಾತೆ ಗಂಭೀರೆ ಯಾರೊ!
-ಅಮಮ! ಮಲಗಿಹರೆಲ್ಲ ತನುಮನವ ಮರೆದು-

ಸೆರೆ ಹಿಡಿದ! ಸರಪಳಿಯ ಸರಸರಕಜಣಜಣಕೆ
ನೆರೆ ಹಳಿವ ನಿಡುನಿಟ್ಠುರದ ನುಡಿಗೆ ನಡುಗಿ!
ಸೆಳೆದೊಯ್ಯುವಳು ಅಡಿಗಳನು! ಎಡವಿದರು ಎದ್ದು
-ಅಮಮ! ಮಲಗಿಹರಿವರು ಮೈಮರೆದು ಮರೆದು-

ಈ ಜಗದ ತಾಯಿಗೀಸೋಜಿಗದ ಭಂಧನವೆ?
ಪೂಜೆಗೊಂಬುವ ಪದ ಬಂಧನದಲಿರಲು
ಪೂಜೆಮಾಳ್ಪನೆ! ನಾನು! ಸಂಕೋಲೆಯ ಸೆರೆಯ!
-ಅಮಮ! ಮಲಗಿಹರೆಲ್ಲ ತನುಮನವ ಮರೆದು-

ಹೆಜ್ಜೆಯೊಂದಿಗೆ ಧನಿಯು! ಗೆಜ್ಜೆ ಪಾಡಗವಲ್ಲ.
ಸದ್ದ ಕೇಳಿದೆ ನಾನು! ಸರಪಳಿಯ ಸದ್ದ.
ನಿದ್ದೆ ತಿಳಿದದ್ದು ನಾನೆದ್ದು ಕುಳಿತಿರಲು………..
– ಅಮಮ! ಮಲಗಿಹರಿವರು ಮೈಮರೆದು ಮರೆದು-

ಜನದ ಗಜಬಿಜಿಯಲ್ಲಿ! ತನುಮನದ ಕೂಗಿನಲ್ಲಿ!
ಕನಸಿನಾಸಿರಿಪಾದ ಸರಪಣಿಯ ಸೆಳೆವ…….
ಜಣ ಝಣವು ಕೇಳುತಿದೆ ಈ ಹೃದಯದಲ್ಲಿ!
-ಅಮಮ! ಮಲಗಿಹರಿವರು ತನುಮನವ ಮರೆದು-
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...