ಬಿನ್ನಾಣಗಿತ್ತಿ

ಬಿನ್ನಾಣಗಿತ್ತಿ ಈ ಮೋಡಗಾತಿ
ಚಂದ್ರನ ಮರೆಮಾಡಿ
ಎನ್ನ ಮನಸನು ಕದಡಿದಳು ||

ದಿನವು ದಿನವು ನೋಡಿ ನಲಿದಂಥ
ಮನವು ಒಂದು ಕ್ಷಣವು
ನೋಡದೆ ನಿಲ್ಲದು ನಿಲ್ಲದೆ ಸಾಗದು ||ಬಿ||

ಏಕೆ ಇಂದು ಹೀಗಾಯ್ತೋ
ನಾ ಕಾಣೆ ಸವತಿ ಕಾಟ
ಕರ್ಮ, ಬಂದಲೇ ಮಾಟಗಾತಿ ||ಬಿ||

ಮುಸ್ಸಂಜೆ ಹೊತ್ತು ಆರು ಮೂವತ್ತು
ಆಗಿತ್ತು ಬೆಳದಿಂಗಳ ಚಲ್ಲಿದ
ಒಲಿದನವನ ಮರೆಯೊದುಂಟೆ ||ಬಿ||

ನಮ್ಮಿಬ್ಬರ ನೋಟ ಒಂದು
ಎದೆಯಾಳದ ಮಾತು ಒಂದು
ಮೌನದ ಬವಣೆ ನೂರೆಂಟು ||ಬಿ||

ಯಾರದೋ ದೃಷ್ಟಿ ತಗುಲಿತೋ
ಪ್ರೀತಿಯ ಕನಸಿದು ಒಡೆಯಿತು
ಬಾಳೆಲ್ಲಾ ಬರಿದಾದ ಮರುಭೂಮಿ ||ಬಿ||

ಕಪ್ಪು ಬಿಳುಪು ನೀಲ ಕೆಂಪು
ಬಣ್ಣ ಒಡನಾಟ ಚೆಲ್ಲಾಟ
ಎಂತು ಕೇಳುವುದೇ ನನ್ನ ಗೀತೆ ||ಬಿ||

ಕಳಿಸಿರುವೆ ಪ್ರೇಮ ಸಂದೇಶ
ತಿಳಿಯುವುದೇ ನನ್ನದೆ ಅಳಲು
ಹಸಿರಾಗಿಹ ಪ್ರೇಮದ ಹೊನಲು ||ಬಿ||

ಇರುಳು ಹಗಲು ಕಳೆದು
ಬಿನ್ನಾಣಗಿತ್ತಿಯ ತೊರೆದು
ಒಲಿದ ಗೂಡಿಗೆ ಬಂದು ಸೇರೆನ್ನಾ
ಜೊತೆಯಾಗಿ ಹಾಡುವ ಬಾಳಗೀತೆ ||ಬಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನೆಗೆ ನನ್ನ ಮಾತು
Next post ಹಳ್ಳಿ ರಾಜಕೀಯ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys