Home / ಕವನ / ಕವಿತೆ / ಬಿನ್ನಾಣಗಿತ್ತಿ

ಬಿನ್ನಾಣಗಿತ್ತಿ

ಬಿನ್ನಾಣಗಿತ್ತಿ ಈ ಮೋಡಗಾತಿ
ಚಂದ್ರನ ಮರೆಮಾಡಿ
ಎನ್ನ ಮನಸನು ಕದಡಿದಳು ||

ದಿನವು ದಿನವು ನೋಡಿ ನಲಿದಂಥ
ಮನವು ಒಂದು ಕ್ಷಣವು
ನೋಡದೆ ನಿಲ್ಲದು ನಿಲ್ಲದೆ ಸಾಗದು ||ಬಿ||

ಏಕೆ ಇಂದು ಹೀಗಾಯ್ತೋ
ನಾ ಕಾಣೆ ಸವತಿ ಕಾಟ
ಕರ್ಮ, ಬಂದಲೇ ಮಾಟಗಾತಿ ||ಬಿ||

ಮುಸ್ಸಂಜೆ ಹೊತ್ತು ಆರು ಮೂವತ್ತು
ಆಗಿತ್ತು ಬೆಳದಿಂಗಳ ಚಲ್ಲಿದ
ಒಲಿದನವನ ಮರೆಯೊದುಂಟೆ ||ಬಿ||

ನಮ್ಮಿಬ್ಬರ ನೋಟ ಒಂದು
ಎದೆಯಾಳದ ಮಾತು ಒಂದು
ಮೌನದ ಬವಣೆ ನೂರೆಂಟು ||ಬಿ||

ಯಾರದೋ ದೃಷ್ಟಿ ತಗುಲಿತೋ
ಪ್ರೀತಿಯ ಕನಸಿದು ಒಡೆಯಿತು
ಬಾಳೆಲ್ಲಾ ಬರಿದಾದ ಮರುಭೂಮಿ ||ಬಿ||

ಕಪ್ಪು ಬಿಳುಪು ನೀಲ ಕೆಂಪು
ಬಣ್ಣ ಒಡನಾಟ ಚೆಲ್ಲಾಟ
ಎಂತು ಕೇಳುವುದೇ ನನ್ನ ಗೀತೆ ||ಬಿ||

ಕಳಿಸಿರುವೆ ಪ್ರೇಮ ಸಂದೇಶ
ತಿಳಿಯುವುದೇ ನನ್ನದೆ ಅಳಲು
ಹಸಿರಾಗಿಹ ಪ್ರೇಮದ ಹೊನಲು ||ಬಿ||

ಇರುಳು ಹಗಲು ಕಳೆದು
ಬಿನ್ನಾಣಗಿತ್ತಿಯ ತೊರೆದು
ಒಲಿದ ಗೂಡಿಗೆ ಬಂದು ಸೇರೆನ್ನಾ
ಜೊತೆಯಾಗಿ ಹಾಡುವ ಬಾಳಗೀತೆ ||ಬಿ||
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...