ಹಳ್ಳಿ ರಾಜಕೀಯ

ಹಳ್ಳಿ ರಾಜಕೀಯ –
ಯಾರೊಬ್ಬರೂ ತೇಲಲ್ಲ
ಯಾರೊಬ್ಬರೂ ಮುಳುಗೊಲ್ಲ
ಯಾರೊಬ್ಬರೂ ದಡ ಸೇರಲ್ಲ

ಹಳ್ಳಿ ರಾಜಕೀಯ –
ಯಾರೊಬ್ಬರೂ ಬೆಳಿಯಲ್ಲ
ಯಾರೊಬ್ಬರೂ ಅಳಿಯಲ್ಲ
ಯಾರೊಬ್ಬರೂ ಉಳಿಯಲ್ಲ

ಹಳ್ಳಿ ರಾಜಕೀಯ –
ಹಾವು ಸಾಯೊಲ್ಲ
ಕೋಲು ಮುರಿಯೊಲ್ಲ
ಪರಿತಾಪ ತಪ್ಪೊಲ್ಲ

ಹಳ್ಳಿ ರಾಜಕೀಯ –
ಆರಕ್ಕೆ ಏರೊಲ್ಲ
ಮೂರಕ್ಕೆ ಇಳಿಯೊಲ್ಲ
ಸೀಳುದಾರಿ ತಪ್ಪೊಲ್ಲ

ಹಳ್ಳಿ ರಾಜಕೀಯ –
ಹಳ್ಳಿಯದ್ದೊ ಈ ಸ್ವಾತಂತ್ರ್ಯ
ದಿಳ್ಳಿಯದ್ದೊ ಈ ಕುತಂತ್ರ
ಬಲ್ಲವ ಬಲ್ಲ ಈ ಅತಂತ್ರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿನ್ನಾಣಗಿತ್ತಿ
Next post ವಿಧಾನಸೌಧದಲ್ಲಿ ಮಠ, ಮಠದಲ್ಲಿ ವಿಧಾನಸೌಧ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…