ನಿನ್ನೆಗೆ ನನ್ನ ಮಾತು

ನೆನಪಿನ ಕಾಡು ಸುತ್ತಲೂ ಹಬ್ಬಿ
ಎತ್ತಲೂ ಸುತ್ತ ರಾಗಗಳು
ವರ್ತಮಾನಕ್ಕೆ ಚಿತ್ರದ ಹಂಗೆ?
ಅವೆಲ್ಲ ಬರಿಯ ಹೃದ್ರೋಗಗಳು
ಸತ್ತ ನಾಗಗಳು – ಪಟ್ಟೆನಾರುಗಳು
ಛಲಕ್ಕೆ ಬಿದ್ದ ಸರ್‍ಪಧ್ವಜನ
ವಿಕಾರ ರೂಪಿನ ಊರುಗಳು

ನಾಳೆ ಇವತ್ತಿಗೆ ಕೊಡುವ ಈ ಅರ್ಥ
ಇವತ್ತು ನಿನ್ನಗೆ ಕೊಟ್ಟಿದ್ದರ್ಂತೇ ವ್ಯರ್ಥವ ?
ಎಂದು ಕಳಕಳಿಸಿ
ಸತ್ತವರ ಕರೆದು
ವರ್ಷಕ್ಕೊಮ್ಮೆಯಾದರೂ ಒಟ್ಟು ನಿಲ್ಲುತ್ತೇನೆ
ರೀತಿ ಬದಲಾದರೂ – ಅಯ್ಯ, ಪ್ರೀತಿಗೆ ವ್ಯವಸ್ಥೆಯೆ ? –
ವಿನ್ಯಾಸಕ್ಕೆ ತಕ್ಕ ನೆರಳು ಬೆರಸಿ
ಅನ್ಯಾಯವಿಲ್ಲ ಎಂದುಕೊಂಡರೂ
ಮನಮನೆಯೊಳಗುರಿವ ಹಗಲು
ಒಂದೇ ಎಂದುಕೊಳ್ಳುತ್ತೇನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರದ್ದು ವಿಷ?
Next post ಬಿನ್ನಾಣಗಿತ್ತಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys