Home / ಕವನ / ಕವಿತೆ / ಹದಿನಾರರ ಹರೆಯ

ಹದಿನಾರರ ಹರೆಯ

ಹದಿನಾರರ ಹರೆಯ ಬೆಡಗಿ
ನೀನು ಮಾನಸಕಂಡ ಗೆಳತಿ
ನಿನ್ನ ಮನದ ಪಯಣವೆಲ್ಲಿಗೆ?

ನಾಲ್ಕು ದಿಕ್ಕು ನಾಲ್ಕು ದೋಣಿ
ಬದುಕಿದು ಮಹಾಸಾಗರ
ಯಾವ ದಿಕ್ಕು ಯಾವ ದೋಣಿ
ಎತ್ತ ನೋಡೆ ಸುಂದರ ||

ಕನಸು ಕಟ್ಟಿ ಹೊರಟೆ ಏನು
ದಡವ ಹೇಗೆ ಮುಟ್ಟುವೆ
ಮೊರೆವ ಶರಧಿ ಮನದಿ ಕಷ್ಟ
ಅದನು ಹೇಗೆ ಅರಿಯುವೆ ||

ಶರದಿಯಲ್ಲಿ ಕಾಯುತಿಹವು
ಹಲವಾರು ಜೀವಿಗಳು
ಎಚ್ಚರವಿರಲಿ ಪಯಣ ಬೆಳೆಸು
ಹೊಂಚುತಿಹುದು ಅವುಗಳು ||

ನಿನ್ನ ದೋಣಿ ಭದ್ರವಿರಲಿ
ಪಯಣ ಬಹಳ ದೂರವು
ದಡವು ಸೇರಿ ಮೆರೆವನೆಂಬ
ಲೆಕ್ಕ ಛಲವು ಸುಲಭವು ||

ಇಡುವ ಹೆಜ್ಜೆ ಹೆಜ್ಜೆಗಳಲಿ
ಇರಲೆಚ್ಚರ ಗೆಳತಿ ನಿನಗೆ
ಕಾಣದಂಥ ಕಲ್ಲು ಮುಳ್ಳು
ಅಡಗಿರುವವು ಅಲ್ಲಿಯೇ ||

ದೂರ ಬೆಟ್ಟ ಬಹು ಸುಂದರ
ಕಾಣುತಿಹುದು ಕಣ್ಣಿಗೆ
ಕಾಡು ಮೃಗಗಳು ಇವು
ಹೊಂಚುತಿಹುವು ಮೆಲ್ಲಗೆ ||

ಹದಿನಾರರ ಶೋಡಷಿ ನಿನಗೆ
ಜಗವೆಲ್ಲವು ಸುಂದರ
ಬಲು ಸುಂದರತೆಯ ಖಣಿ
ನಿನ್ನ ಹಿಡಿವ ಪಂಜರ ||

ಹೆಜ್ಜೆ ಇಡುವ ಮುನ್ನ ನಿನಗೆ
ಬುದ್ಧಿ ಇರಲಿ ಎಚ್ಚರ
ತಗ್ಗು ದಿಣ್ಣೆ ಇಹವು ನೂರು
ಬೇಡ ನಿನಗೆ ಆತುರ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...