ಕವನ

ಮೈ ತಪ್ಪೆ
ಮನ ತಪ್ಪೆ?
ಎರಡೂ ಕೂಡಿ ಕುಣಿದ ಗಣಿತದ,
ತಿಂದ ಸಿಹಿ ಖಾರ ಬೇರಿಗೆ ಜಾರಿ
ಚೀರಿದ ಚಿಲುಮೆಯ
ಸುಖ ತಪ್ಪೆ ?
ಭಗವದ್ಗೀತೆಯ ಹಿಂದೆ ಮುಂದೆಯೇ
ನೂರು ಹಗರಣ
ಸಮತೆ ಶಾಂತಿ ಶಿಸ್ತಿನ ನಡುವಿನಲೇ
ಥಟ್ಟನೆ ಜಗಣ!

ಏ ಚೆನ್ನೆ, ಈ
ಸೀ ಕೆನ್ನೆ
ಹೆಗಲಡಿ ಹಬ್ಬಿದ ಬಿಳಿದಿನ್ನೆ
ಕಾಯಿಸಿ ಬೇಯಿಸಿ ತೋಯಿಸಿ, ಸೋಕಲು
ಕಚ್ಚಿ ರಸಚಿಲಿವ ಉರಿಸೊನ್ನೆ,
ಮತ್ತ ಬಾಳೆಕಂಬದ ನಡುವೆ
ವೃತ್ತಗಂಧಿ ಮಿದುಸುಡುಶಯ್ಯೆ
ನೋಯಿಸಿವೆ ಮೈ
ಮಾಯಿಸಿವೆ
ಮುಕ್ತಿಸೂತ್ರಗಳ ಮರೆತ ಗಳಿಗೆಯಲಿ
ಭಗವದ್ಯೋಗದಿ ಮೀಯಿಸಿವೆ.

ಈಚೀಚೆ
ಏನೋ ಮಾತು
ಎಲ್ಲೋ ಕೂತು
ಯಾವುದೊ ನೋವಿಗೆ ಹವ್ವನೆ ಬಾತು
ಹೂ ಮುಳ್ಳು ನಗೆ
ನಿಜ ಸುಳ್ಳು ಧಗೆ
ಮದಾಲಸೆಯ ಮೈ ನೆಗೆತ ಕುಸಿತದಲಿ ಕಲೆತು
ಸರಿಗಮ ಪದನಿಸ ದನಿಯೊಡೆದು
ಹೊಯಭಂಗಿಗಳಿಗೆ ಮಿಡಿದು
ತುಡಿನುಡಿ ಮುಖಾಂತರ
ಲಯದಲಿ
ಮೂಡಿದ ಭವಾಂತರ
ಬುದ್ದಿಯ ಹಂಗಿಗು ಮೀರಿ ನಿಲ್ಲುವ
ಹಿಗ್ಗಿನ ಆವಾಂತರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳಿರಲಿಲ್ಲವೇ
Next post ಹದಿನಾರರ ಹರೆಯ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys