ಕವನ

ಮೈ ತಪ್ಪೆ
ಮನ ತಪ್ಪೆ?
ಎರಡೂ ಕೂಡಿ ಕುಣಿದ ಗಣಿತದ,
ತಿಂದ ಸಿಹಿ ಖಾರ ಬೇರಿಗೆ ಜಾರಿ
ಚೀರಿದ ಚಿಲುಮೆಯ
ಸುಖ ತಪ್ಪೆ ?
ಭಗವದ್ಗೀತೆಯ ಹಿಂದೆ ಮುಂದೆಯೇ
ನೂರು ಹಗರಣ
ಸಮತೆ ಶಾಂತಿ ಶಿಸ್ತಿನ ನಡುವಿನಲೇ
ಥಟ್ಟನೆ ಜಗಣ!

ಏ ಚೆನ್ನೆ, ಈ
ಸೀ ಕೆನ್ನೆ
ಹೆಗಲಡಿ ಹಬ್ಬಿದ ಬಿಳಿದಿನ್ನೆ
ಕಾಯಿಸಿ ಬೇಯಿಸಿ ತೋಯಿಸಿ, ಸೋಕಲು
ಕಚ್ಚಿ ರಸಚಿಲಿವ ಉರಿಸೊನ್ನೆ,
ಮತ್ತ ಬಾಳೆಕಂಬದ ನಡುವೆ
ವೃತ್ತಗಂಧಿ ಮಿದುಸುಡುಶಯ್ಯೆ
ನೋಯಿಸಿವೆ ಮೈ
ಮಾಯಿಸಿವೆ
ಮುಕ್ತಿಸೂತ್ರಗಳ ಮರೆತ ಗಳಿಗೆಯಲಿ
ಭಗವದ್ಯೋಗದಿ ಮೀಯಿಸಿವೆ.

ಈಚೀಚೆ
ಏನೋ ಮಾತು
ಎಲ್ಲೋ ಕೂತು
ಯಾವುದೊ ನೋವಿಗೆ ಹವ್ವನೆ ಬಾತು
ಹೂ ಮುಳ್ಳು ನಗೆ
ನಿಜ ಸುಳ್ಳು ಧಗೆ
ಮದಾಲಸೆಯ ಮೈ ನೆಗೆತ ಕುಸಿತದಲಿ ಕಲೆತು
ಸರಿಗಮ ಪದನಿಸ ದನಿಯೊಡೆದು
ಹೊಯಭಂಗಿಗಳಿಗೆ ಮಿಡಿದು
ತುಡಿನುಡಿ ಮುಖಾಂತರ
ಲಯದಲಿ
ಮೂಡಿದ ಭವಾಂತರ
ಬುದ್ದಿಯ ಹಂಗಿಗು ಮೀರಿ ನಿಲ್ಲುವ
ಹಿಗ್ಗಿನ ಆವಾಂತರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳಿರಲಿಲ್ಲವೇ
Next post ಹದಿನಾರರ ಹರೆಯ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…