ಮಲ್ಲಿಗೆಯೆ ಮುಡಿಯಬಾರದೇಕೆ

ಮಲ್ಲಿಗೆಯೆ
ಮುಡಿಯಬಾರದೇಕೆ
ಮುಡಿದರೆ ನಿನ್ನ ಮಡಿವಂತಿಕೆಯೆ ||

ಬಾಲೆಯಾದೆನ್ನ ಅಪ್ಪಿ
ಮುತ್ತಿಟ್ಟೆ ಒಲವು
ತೋರಿದೆ ಯೌವನಕೆ ||

ಮನವ ಸೆಳೆದು
ಮುಡಿಯ ನೇರಿ ನಗಿಸಿ
ಒಲ್ಲೆ ಎಂದು ಹೇಳಲು ನೀನು ||

ನೊಂದು ಬೆಂದ
ಬೈರಾಗಿ ನಾ ಅರಿಯಲಿಲ್ಲ
ಮುಗುದೆ ಜೀವನವನು ||

ಜನುಮಕೊಂದು
ಮದುವೆ ಎಂದು
ನಲಿದು ಮಣಿಸಿದೆ ನೀನು ||

ದೇವನೊಲಿದ ಮನೆ
ಬೆಳಕು ಹರುಷ
ತಂದಿತೆಂದು ನಂಬಿದೆ ||

ವಿಧಿಯಾಟವಾಡಿ
ನೀ ವಿಧವೆ ಎಂದಾಗ
ನಿನ್ನ ಮುಡಿದರೆ ಮಡಿವಂತೆಕೆಯೆ ||

ಅತ್ತಿತ್ತ ಅವರಿವರಾಡಿದ
ಮಾತು ಚುಚ್ಚಿ ಕಾಡಿತು.
ಬರಿದಾಯ್ತು ಮನಸ್ಸು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪು
Next post ಧೂಮಪಾನವೇಕೆ ಗೆಳತಿ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…