ನೀ ಬಾರದೇ

ನೀ ಬಾರದೇ
ಮನವು ಕಾಡಿದೇ
ಬರಡಾದ ಜೀವಕೆ
ಬಯಕೆಗಳೂ ಮೂಡದೇ ||

ಪ್ರೀತಿಯ ಅರಿಯೆ ಎಂದೂ
ಪ್ರಿಯತಮನೇ ನೀನೇ ಎಂದು
ಬಯಸಿ ಬಂದೆ ರಾಧೆ ನಾನು
ಕೈ ಹಿಡಿದು ನಡೆಸುವಾತ ನೀನೇ ಎಂದೂ ||

ನನ್ನಲ್ಲಿ ನಿನ್ನ ನಿಲುವಿರಲು
ನಿನ್ನಲ್ಲಿ ನನ್ನ ಒಲವಿರಲು
ಮನವೆಂಬ ಹಕ್ಕಿ ಹಾಡೆ
ಕುಣಿ ಕುಣಿದು ನಾನು ದಣಿದೆ ||

ಹಾದಿ ಬೀದಿಯಲಿ
ಕೃಷ್ಣಾ ನಿನ್ನ ಸಖಿಯರಲ್ಲಿ
ವಿರಹವ ತೋಡಿಕೊಂಡೆ
ಯಾರು ಹೇಳುವರಿಲ್ಲ ಕೇಳುವರಿಲ್ಲ ||

ರಾಧೆನಾ ಕೃಷ್ಣ ನಿನ್ನ ಮೊರೆ
ಹೋಗಲು ಬಿಗುಮಾನವೇಕೊ
ಪ್ರೀತಿಯ ಕರೆಗೆ ಪ್ರೇಮಾಗ್ನಿಯಲಿ
ಬೆಂದ ಬೂದಿಯನು ತಿಲಕವಾಗಿರಿಸಿದೇ ಕೃಷ್ಣಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡುಗಡೆ
Next post ಕಳ್ಳ ಮತ್ತು ಸೇವಕ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…