ಬಿಡುಗಡೆ

ವಾಸ-ನಾಲ್ಕು ಪುಟಗಳ ಮಧ್ಯೆ
ಭಾಷೆ-ವ್ಯಾಕರಣ ಸೂತ್ರಗಳ ಮಧ್ಯೆ
ಗಡಿ ಮಡಿಗಳ ಇಕ್ಕಟ್ಟಿನೊಳಗೆ ಹೀಗೆ
ಬಿಕ್ಕಟ್ಟಿಗೆ ಸಿಕ್ಕು ಬಾಳಿದರೂ
ತರ್ಕದ ತಲೆಮೆಟ್ಟಿ ಹಾಡುತ್ತದೆ
ಕಟ್ಟು ಮೀರಿ ಹುಟ್ಟುವ ಪದ್ಯದ ಸತ್ಯ.

ಅದರ ದನಿ – ಬಳೆ ನೂಪುರ ಕಾಲುಂಗರ,
ಕಳೆ-ಎಳೆ ಹುಡುಗನ ಮುಖದಂಗಳ;
ಒಡಲು ಹನಿಯಾದರೂ ಜಿಗಿಯುತ್ತದೆ
ಮನೆ ಮಠ ನೆಲ ಬಾನು ತಾರೆಯ,
ಮಂಗಳ ತಿಂಗಳ ಮೇರಯ.

ಎಂದೇ ಸೆಣಸುವ ಕಣದಲ್ಲಿ
ಇಂದಿಗೂ ಸಾಕ್ರಟೀಸ್ ಇದ್ದೇ ಇದ್ದಾನೆ;
ಹಳೆ ವೇಶದ ಕಟ್ಟೊಡೆದು
ಉರಿ ಉರಿ ಹಿಪ್ಪಿ ಹುಟ್ಟುತ್ತಾನೆ;
ಪ್ರಸ್ತುತ ಪ್ರಿಯಗಳ ದಾಳಿಯನ್ನು ತಡೆದು
ಸೋಗಿನ ಸತ್ಯಗಳ ಸೌಧವನ್ನು ಒಡೆದು
ಬಯಲ ಬಿಡುಗಡೆಗೆ ತುಯ್ಯುತ್ತಾನೆ,
ಒಡಲ ಗುಡುಗುಡಿ ಹೊತ್ತಿ
ನೆತ್ತಿಯ ಆಕಾಶಕ್ಕೆತ್ತಿ
ಸದಾ ಪಾರಿಜಾತಕ್ಕೆ ಸುಯ್ಯುತ್ತಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಸಾರ
Next post ನೀ ಬಾರದೇ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys