ಬಿಡುಗಡೆ

ವಾಸ-ನಾಲ್ಕು ಪುಟಗಳ ಮಧ್ಯೆ
ಭಾಷೆ-ವ್ಯಾಕರಣ ಸೂತ್ರಗಳ ಮಧ್ಯೆ
ಗಡಿ ಮಡಿಗಳ ಇಕ್ಕಟ್ಟಿನೊಳಗೆ ಹೀಗೆ
ಬಿಕ್ಕಟ್ಟಿಗೆ ಸಿಕ್ಕು ಬಾಳಿದರೂ
ತರ್ಕದ ತಲೆಮೆಟ್ಟಿ ಹಾಡುತ್ತದೆ
ಕಟ್ಟು ಮೀರಿ ಹುಟ್ಟುವ ಪದ್ಯದ ಸತ್ಯ.

ಅದರ ದನಿ – ಬಳೆ ನೂಪುರ ಕಾಲುಂಗರ,
ಕಳೆ-ಎಳೆ ಹುಡುಗನ ಮುಖದಂಗಳ;
ಒಡಲು ಹನಿಯಾದರೂ ಜಿಗಿಯುತ್ತದೆ
ಮನೆ ಮಠ ನೆಲ ಬಾನು ತಾರೆಯ,
ಮಂಗಳ ತಿಂಗಳ ಮೇರಯ.

ಎಂದೇ ಸೆಣಸುವ ಕಣದಲ್ಲಿ
ಇಂದಿಗೂ ಸಾಕ್ರಟೀಸ್ ಇದ್ದೇ ಇದ್ದಾನೆ;
ಹಳೆ ವೇಶದ ಕಟ್ಟೊಡೆದು
ಉರಿ ಉರಿ ಹಿಪ್ಪಿ ಹುಟ್ಟುತ್ತಾನೆ;
ಪ್ರಸ್ತುತ ಪ್ರಿಯಗಳ ದಾಳಿಯನ್ನು ತಡೆದು
ಸೋಗಿನ ಸತ್ಯಗಳ ಸೌಧವನ್ನು ಒಡೆದು
ಬಯಲ ಬಿಡುಗಡೆಗೆ ತುಯ್ಯುತ್ತಾನೆ,
ಒಡಲ ಗುಡುಗುಡಿ ಹೊತ್ತಿ
ನೆತ್ತಿಯ ಆಕಾಶಕ್ಕೆತ್ತಿ
ಸದಾ ಪಾರಿಜಾತಕ್ಕೆ ಸುಯ್ಯುತ್ತಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಸಾರ
Next post ನೀ ಬಾರದೇ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…