ಮೋಹನ ಮುರಳಿ

ಮೋಹನ ಮುರಳಿ ಕೃಷ್ಣಾ
ಬೆಳದಿಂಗಳಿನಾ ಸಂಜೆಯಲಿ
ಕೊಳಲನಾದದ ಅಲೆಗಳು
ರಾಧೆಯ ಮನವನು ಕಾಡುವುವು
ಎಲ್ಲಿರುವೆ ಹೇಳು ಮುಕುಂದಾ ||

ಎಲ್ಲಿ ಹುಡುಕಿದರು ಕಾಣದಾಗಿರುವೆ
ಕಾಣುವಾತುರದಿ ರಾಧೆಯ ಕಂಗಳು
ಮುದ್ದಾಡುವಾತುರದಿ ಮನವು
ವಿರಹದ ವೇದನೆಯಲಿ ರಾಧೆಯೂ ||

ಚಂದ್ರ ತಾರಾ ಚಕೋರಿ
ಅಣಕಿಸಿ ನಿನ್ನ ಕೃಷ್ಣ ಎಲ್ಲಿ
ಎಂದು ಕೇಳುತಿಹರು
ಮೋಹನ! ಎಲ್ಲಿ ಕೃಷ್ಣ
ನೀನೆಲ್ಲಿರುವೆ ಹೇಳೋ ಮುಕುಂದ ||

ಬೃಂದಾವನ ಆ ನಂದನವನದಲಿ
ಅತ್ತ ಇತ್ತ ದಾರಿಯ ಹುಡುಕುತ
ಯಮುನೆ ನೀರು ತಣಿಯಲು
ಆಂ! ತೀರದೋ ದಾಹ
ನಿನ್ನ ಕಾಣದೇ ಕೃಷ್ಣಾಽಽಽ ||

ನೂರಾರು ಬಯಕೆ, ನೂರಾರು ಕನಸುಗಳ
ಕಟ್ಟಿ ಕೊಂಡಿಹಳೋ ರಾಧೆ ಕೇಳೋ
ರಾಧೆ ಎಂಬ ಆತ್ಮಕೆ ನಿನ್ನ
ಅನುರಾಗದ ರೂಪವಾಗಿಸೋ ಮುಕುಂದ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷ್ಣಭಕ್ತರ ಕುಣಿತ
Next post ಬುದ್ಧ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys