ಮೋಹನ ಮುರಳಿ

ಮೋಹನ ಮುರಳಿ ಕೃಷ್ಣಾ
ಬೆಳದಿಂಗಳಿನಾ ಸಂಜೆಯಲಿ
ಕೊಳಲನಾದದ ಅಲೆಗಳು
ರಾಧೆಯ ಮನವನು ಕಾಡುವುವು
ಎಲ್ಲಿರುವೆ ಹೇಳು ಮುಕುಂದಾ ||

ಎಲ್ಲಿ ಹುಡುಕಿದರು ಕಾಣದಾಗಿರುವೆ
ಕಾಣುವಾತುರದಿ ರಾಧೆಯ ಕಂಗಳು
ಮುದ್ದಾಡುವಾತುರದಿ ಮನವು
ವಿರಹದ ವೇದನೆಯಲಿ ರಾಧೆಯೂ ||

ಚಂದ್ರ ತಾರಾ ಚಕೋರಿ
ಅಣಕಿಸಿ ನಿನ್ನ ಕೃಷ್ಣ ಎಲ್ಲಿ
ಎಂದು ಕೇಳುತಿಹರು
ಮೋಹನ! ಎಲ್ಲಿ ಕೃಷ್ಣ
ನೀನೆಲ್ಲಿರುವೆ ಹೇಳೋ ಮುಕುಂದ ||

ಬೃಂದಾವನ ಆ ನಂದನವನದಲಿ
ಅತ್ತ ಇತ್ತ ದಾರಿಯ ಹುಡುಕುತ
ಯಮುನೆ ನೀರು ತಣಿಯಲು
ಆಂ! ತೀರದೋ ದಾಹ
ನಿನ್ನ ಕಾಣದೇ ಕೃಷ್ಣಾಽಽಽ ||

ನೂರಾರು ಬಯಕೆ, ನೂರಾರು ಕನಸುಗಳ
ಕಟ್ಟಿ ಕೊಂಡಿಹಳೋ ರಾಧೆ ಕೇಳೋ
ರಾಧೆ ಎಂಬ ಆತ್ಮಕೆ ನಿನ್ನ
ಅನುರಾಗದ ರೂಪವಾಗಿಸೋ ಮುಕುಂದ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷ್ಣಭಕ್ತರ ಕುಣಿತ
Next post ಬುದ್ಧ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…