Home / ಕವನ / ಕವಿತೆ / ಲೋಕೇಶಿಯ ಕಥಾಪ್ರಸಂಗ

ಲೋಕೇಶಿಯ ಕಥಾಪ್ರಸಂಗ

ಮುಗಿದು ಹೋಯಿತೆಲ್ಲೋ ಲೋಕೇಶಿ
ನಿನ್ನ ಕಥೆ
ನೆಗದು ಬಿತ್ತಲ್ಲೋ ಕೋಟೆ
ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ
ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ !
ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ
ಮಣ್ಣು ಮುಕ್ಕಿ ಹೋಯಿತಲ್ಲೋ ಮಂಕೆ!

ಹಾಯ್ ಬೆಂಗಳೂರೇ, ಹಾಯ್ ಬೆಂಗಳೂರೇ
ಏನು ಸೇರಿದ್ದಾರೆ ಜನ ಜಂಗೀಕುಸ್ತಿಗೆ!
ಬೆರಗಾಗಿದ್ದಾರೆ ಎಲ್ಲ, ಹುಡುಗ ಹಾಕುವ ಪಟ್ಟಿಗೆ
ಹೇಳುತ್ತಾನೆ ಅವರಲ್ಲೊಬ್ಬ:
ಭಲೆ, ಹೇಗೆ ಹೂಡೆದ ಒಂದೇ ಏಟಿಗ ಅಬ್ಬ!
ಕೈ ಹಿಡಿದರೆ ಕತ್ತು ಹಿಡಿದ
ಕಾಲೆಳಿದರೆ ಸೊಂಟ ಮುರಿದ
‘ಏ ಕುರುಡ, ಏ ಕುರುಡ’ ಎಂದು ಎಳೆದಾಡುತ್ತ
ಬಿಸಿ ಬಾಣಲಿಗೆ ಹಾಕಿ ಹುಳ ಎಂಬಂತೆ ಹುರಿದ.
ಒಂದು ವಿಕೆಟ್ಟೂ ತೆಗೆಯದೆ ನೂರು ರನ್ನಿನ ಸೋಲು!
ದೇವರೇ
ಹೀಗೆ ಹೊಡೆಸಿಕೊಳ್ಳುವ ಬದಲು
ಲೋಟಾ ನೀರಲ್ಲಿ ಹಾರಿ
ಆತ್ಮಹತ್ಯೆ ಮಾಡಿಕೊಳ್ಳುವುದು ಮೇಲು!

ಹಿಂದೆ ಹೇಗಿತ್ತಲ್ಲೊ ಲೋಕೇಶಿ
ನಿನ್ನ ಪದಶಕ್ತಿ, ಸಿದ್ಧಿ!
ಯಾಕಾಯಿತೊ ಅದೀಗ ಹೀಗೆ
ಮುದಿಕತ್ತೆಯ ಲದ್ದಿ ?
ಹೇಗಿದ್ದವನು ಹೇಗಾದೆ,
ಏ ಕುದುರೆ! ಯಾಕೆ ಇಂಥ ಕತ್ತೆಯಾದೆ?
ಕಣ್ಣು ಕಾಣದಿದ್ದರೆ ಹೋಗಲಿ
ಬೇಡವೆ ಬುದ್ಧಿ,
ಯಾಕಾದರೂ ಸುಮ್ಮನಿರದೆ ಸವಾಲು ಕೊಟ್ಟೆ
ಯಾಕಾದರೂ ಹುಲಿಬಾಯಲ್ಲಿ ತಲೆ ಇಟ್ಟೆ?

ಪಾಪ!
ಎಂಥ ನಿನಗೆ ಎಂಥ ಗತಿ!
ಅಲ್ಲ ಸಲ್ಲದವರ ಮೇಲೆಲ್ಲ
ಸುಳ್ಳೇ ಬಗುಳಿದ್ದ ಕೇಡಿಗೆ
ಈಗ ಎಂಜಲ ಹೊಂಡದಲ್ಲಿ
ಪಬ್ಲಿಕ್ಕಾಗಿ ತಿಥಿ.
ತೊಡೆ ಹೊಟ್ಟೆ ಕೆನ್ನೆ ದವಡೆ ಅಂತ
ಹಾಗೆ ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಡ ಗಾಯ!
ನೋಡುತ್ತಿದ್ದಾರೆ
ಲಕ್ಷ ಲಕ್ಷ ಜನ
ಚಪ್ಪಾಳೆ ಹಾಕಿ
ನಗದೆ ಇರುತ್ತಾರೆಯೇ ಮಾರಾಯ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...