Home / ಕವನ / ಕವಿತೆ / ಲೋಕೇಶಿಯ ಕಥಾಪ್ರಸಂಗ

ಲೋಕೇಶಿಯ ಕಥಾಪ್ರಸಂಗ

ಮುಗಿದು ಹೋಯಿತೆಲ್ಲೋ ಲೋಕೇಶಿ
ನಿನ್ನ ಕಥೆ
ನೆಗದು ಬಿತ್ತಲ್ಲೋ ಕೋಟೆ
ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ
ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ !
ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ
ಮಣ್ಣು ಮುಕ್ಕಿ ಹೋಯಿತಲ್ಲೋ ಮಂಕೆ!

ಹಾಯ್ ಬೆಂಗಳೂರೇ, ಹಾಯ್ ಬೆಂಗಳೂರೇ
ಏನು ಸೇರಿದ್ದಾರೆ ಜನ ಜಂಗೀಕುಸ್ತಿಗೆ!
ಬೆರಗಾಗಿದ್ದಾರೆ ಎಲ್ಲ, ಹುಡುಗ ಹಾಕುವ ಪಟ್ಟಿಗೆ
ಹೇಳುತ್ತಾನೆ ಅವರಲ್ಲೊಬ್ಬ:
ಭಲೆ, ಹೇಗೆ ಹೂಡೆದ ಒಂದೇ ಏಟಿಗ ಅಬ್ಬ!
ಕೈ ಹಿಡಿದರೆ ಕತ್ತು ಹಿಡಿದ
ಕಾಲೆಳಿದರೆ ಸೊಂಟ ಮುರಿದ
‘ಏ ಕುರುಡ, ಏ ಕುರುಡ’ ಎಂದು ಎಳೆದಾಡುತ್ತ
ಬಿಸಿ ಬಾಣಲಿಗೆ ಹಾಕಿ ಹುಳ ಎಂಬಂತೆ ಹುರಿದ.
ಒಂದು ವಿಕೆಟ್ಟೂ ತೆಗೆಯದೆ ನೂರು ರನ್ನಿನ ಸೋಲು!
ದೇವರೇ
ಹೀಗೆ ಹೊಡೆಸಿಕೊಳ್ಳುವ ಬದಲು
ಲೋಟಾ ನೀರಲ್ಲಿ ಹಾರಿ
ಆತ್ಮಹತ್ಯೆ ಮಾಡಿಕೊಳ್ಳುವುದು ಮೇಲು!

ಹಿಂದೆ ಹೇಗಿತ್ತಲ್ಲೊ ಲೋಕೇಶಿ
ನಿನ್ನ ಪದಶಕ್ತಿ, ಸಿದ್ಧಿ!
ಯಾಕಾಯಿತೊ ಅದೀಗ ಹೀಗೆ
ಮುದಿಕತ್ತೆಯ ಲದ್ದಿ ?
ಹೇಗಿದ್ದವನು ಹೇಗಾದೆ,
ಏ ಕುದುರೆ! ಯಾಕೆ ಇಂಥ ಕತ್ತೆಯಾದೆ?
ಕಣ್ಣು ಕಾಣದಿದ್ದರೆ ಹೋಗಲಿ
ಬೇಡವೆ ಬುದ್ಧಿ,
ಯಾಕಾದರೂ ಸುಮ್ಮನಿರದೆ ಸವಾಲು ಕೊಟ್ಟೆ
ಯಾಕಾದರೂ ಹುಲಿಬಾಯಲ್ಲಿ ತಲೆ ಇಟ್ಟೆ?

ಪಾಪ!
ಎಂಥ ನಿನಗೆ ಎಂಥ ಗತಿ!
ಅಲ್ಲ ಸಲ್ಲದವರ ಮೇಲೆಲ್ಲ
ಸುಳ್ಳೇ ಬಗುಳಿದ್ದ ಕೇಡಿಗೆ
ಈಗ ಎಂಜಲ ಹೊಂಡದಲ್ಲಿ
ಪಬ್ಲಿಕ್ಕಾಗಿ ತಿಥಿ.
ತೊಡೆ ಹೊಟ್ಟೆ ಕೆನ್ನೆ ದವಡೆ ಅಂತ
ಹಾಗೆ ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಡ ಗಾಯ!
ನೋಡುತ್ತಿದ್ದಾರೆ
ಲಕ್ಷ ಲಕ್ಷ ಜನ
ಚಪ್ಪಾಳೆ ಹಾಕಿ
ನಗದೆ ಇರುತ್ತಾರೆಯೇ ಮಾರಾಯ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...