ಲೋಕೇಶಿಯ ಕಥಾಪ್ರಸಂಗ

ಮುಗಿದು ಹೋಯಿತೆಲ್ಲೋ ಲೋಕೇಶಿ
ನಿನ್ನ ಕಥೆ
ನೆಗದು ಬಿತ್ತಲ್ಲೋ ಕೋಟೆ
ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ
ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ !
ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ
ಮಣ್ಣು ಮುಕ್ಕಿ ಹೋಯಿತಲ್ಲೋ ಮಂಕೆ!

ಹಾಯ್ ಬೆಂಗಳೂರೇ, ಹಾಯ್ ಬೆಂಗಳೂರೇ
ಏನು ಸೇರಿದ್ದಾರೆ ಜನ ಜಂಗೀಕುಸ್ತಿಗೆ!
ಬೆರಗಾಗಿದ್ದಾರೆ ಎಲ್ಲ, ಹುಡುಗ ಹಾಕುವ ಪಟ್ಟಿಗೆ
ಹೇಳುತ್ತಾನೆ ಅವರಲ್ಲೊಬ್ಬ:
ಭಲೆ, ಹೇಗೆ ಹೂಡೆದ ಒಂದೇ ಏಟಿಗ ಅಬ್ಬ!
ಕೈ ಹಿಡಿದರೆ ಕತ್ತು ಹಿಡಿದ
ಕಾಲೆಳಿದರೆ ಸೊಂಟ ಮುರಿದ
‘ಏ ಕುರುಡ, ಏ ಕುರುಡ’ ಎಂದು ಎಳೆದಾಡುತ್ತ
ಬಿಸಿ ಬಾಣಲಿಗೆ ಹಾಕಿ ಹುಳ ಎಂಬಂತೆ ಹುರಿದ.
ಒಂದು ವಿಕೆಟ್ಟೂ ತೆಗೆಯದೆ ನೂರು ರನ್ನಿನ ಸೋಲು!
ದೇವರೇ
ಹೀಗೆ ಹೊಡೆಸಿಕೊಳ್ಳುವ ಬದಲು
ಲೋಟಾ ನೀರಲ್ಲಿ ಹಾರಿ
ಆತ್ಮಹತ್ಯೆ ಮಾಡಿಕೊಳ್ಳುವುದು ಮೇಲು!

ಹಿಂದೆ ಹೇಗಿತ್ತಲ್ಲೊ ಲೋಕೇಶಿ
ನಿನ್ನ ಪದಶಕ್ತಿ, ಸಿದ್ಧಿ!
ಯಾಕಾಯಿತೊ ಅದೀಗ ಹೀಗೆ
ಮುದಿಕತ್ತೆಯ ಲದ್ದಿ ?
ಹೇಗಿದ್ದವನು ಹೇಗಾದೆ,
ಏ ಕುದುರೆ! ಯಾಕೆ ಇಂಥ ಕತ್ತೆಯಾದೆ?
ಕಣ್ಣು ಕಾಣದಿದ್ದರೆ ಹೋಗಲಿ
ಬೇಡವೆ ಬುದ್ಧಿ,
ಯಾಕಾದರೂ ಸುಮ್ಮನಿರದೆ ಸವಾಲು ಕೊಟ್ಟೆ
ಯಾಕಾದರೂ ಹುಲಿಬಾಯಲ್ಲಿ ತಲೆ ಇಟ್ಟೆ?

ಪಾಪ!
ಎಂಥ ನಿನಗೆ ಎಂಥ ಗತಿ!
ಅಲ್ಲ ಸಲ್ಲದವರ ಮೇಲೆಲ್ಲ
ಸುಳ್ಳೇ ಬಗುಳಿದ್ದ ಕೇಡಿಗೆ
ಈಗ ಎಂಜಲ ಹೊಂಡದಲ್ಲಿ
ಪಬ್ಲಿಕ್ಕಾಗಿ ತಿಥಿ.
ತೊಡೆ ಹೊಟ್ಟೆ ಕೆನ್ನೆ ದವಡೆ ಅಂತ
ಹಾಗೆ ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಡ ಗಾಯ!
ನೋಡುತ್ತಿದ್ದಾರೆ
ಲಕ್ಷ ಲಕ್ಷ ಜನ
ಚಪ್ಪಾಳೆ ಹಾಕಿ
ನಗದೆ ಇರುತ್ತಾರೆಯೇ ಮಾರಾಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೊಕ್ಕ ತಲೆ
Next post ಹೂ ನಗೆ ಬೀರಿದಾಗ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…