ಚಿಂತಲ್ ಬಸ್ತಿ

ಚಿಂತಲ್ ಬಸ್ತಿ ಚಿಂತಲ್ ಬಸ್ತಿ
ಬಡವರ ಬಗ್ಗರ ಅಗ್ಗದ ಆಸ್ತಿ
ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ

ರಾಮುಡು ಭೀಮುಡು ಪರಮೇಶ್ವರುಡು
ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ
ಎಲ್ಲರಿಗೂ ಇದು ಒಂದೇ ಮಾಡು
ಇರುವಂತೆಲ್ಲರಿಗೊಬ್ಬನೆ ಅಲ್ಲಾ!

ಆಚೆಗೆ ಬಯಲು ಈಚೆಗೆ ರೈಲು
ಕೈಕಾಲಿಟ್ಟಲ್ಲೆಲ್ಲಾ ಕೊಳಚೆ
ಆದರು ಬದುಕು ಸಾಗಲೆಬೇಕು
ಹೊಯ್ಯಲೆ ಬೇಕು ಬಂದರೆ ಉಚ್ಚೆ

ಚಿಂತಲ್ ಬಸ್ತಿ ಚಿಂತಲ್ ಬಸ್ತಿ
ಗತಿಯಿಲ್ಲದವರಿಗೆ ನೀನೇ ಆಸ್ತಿ

ಹಗಲೂ ಇರುಳೂ ಬೀದಿಗಳಲ್ಲಿ
ಘನ ಸರಕಾರದ ನಿಯಾನ್ ಬೆಳಕು
ಆಳುವ ಪಕ್ಷಕು ಆಳದ ಪಕ್ಷಕು
ಎಲ್ಲರಿಗೂ ಈ ಮತಗಳು ಬೇಕು

ತೆಲುಗು ದೇಶಂ ಭಾರತ ದೇಶಂ
ಇಂದಿರಾಗಾಂಧಿಯ ಕಾಂಗ್ರೆಸ್ ದೇಶಂ
ಯಾರೂ ಬಿಡರೈ ಈ ಅವಕಾಶಂ
ಸರ್ವರ ಮೈಮೇಲೂ ಆವೇಶಂ

ಚಿಂತಲ್ ಬಸ್ತಿ ಚಿಂತಲ್ ಬಸ್ತಿ
ಗತಿಯಿಲ್ಲದವರಿಗೆ ನೀನೇ ಆಸ್ತಿ
ಗತಿಯಿದ್ದವರಿಗು ನೀನೇ ಆಸ್ತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾರಿವಾಳಗಳು ಹಾರಿಹೋದವು
Next post ಘಾಟಿ ಹೆಂಗಸು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys