ಯಸ್ ಯಸ್ ಯಲ್ಲವ್ವಾ

ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ
ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ||

ಮಜಕಟ ಕಟಕಟ ಕಿವಿತುಂಬ ವಟವಟ
ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ
ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ
ದೆವ್ವನ್ ಹೇಂತಿ ಹಳೆದವ್ವಾ ಹಡಿತೋ ಹಡಿತೋ ||೧||

ಏನ್ಪುರಿ ಕರಿಕರಿ ವರಿವರಿ ಹೇನೂರಿ
ಸರವಾತ್ನ್ಯಾಗ ಅರವತ್ಹಾವು ಬಂದಾವೋ ಬಂದಾವೋ
ಸುರಿಸುರಿ ಸುಂಬ್ಳಾಸುರಿ ಎರಿ‌ಎರಿ ನಾಯಿಯೆರಿ
ಪಾವ್ರೊಟ್ಟಿ ನೂರ್‍ನಾಯಿ ತಿಂದಾವೋ ತಿಂದಾವೋ ||೨||

ಹರಕ್‍ತಟ್ಟಿ ಎಣ್ಣಿಬುಟ್ಟಿ ವಡಕ್ಮಗಿ ಹೊಗಿಹೊಗಿ
ಸಾವ್ಕಾರ್‍ಹೊಟ್ಟಿ ಸುಡಗಾಡ್ಗಟ್ಟಿ, ಚೀರ್‍ಯಾವೋ ಚೀರ್‍ಯಾವೋ
ಗೌಡ್ತಿಮಲಿ ಕತ್ನಿ ಮಲಿ ಕಂಗಾಲಾಗಿ ನಲಿ ನಲಿ
ಗೌಡ ಮೀಸಿ ಗೊಬ್ರಗುಂಡಿ ಸುಟ್ಟಾವೋ ಸುಟ್ಟಾವೋ ||೩||

ಚಿಪ್ಪಾಡ್ಯಾಗ ಚಿತ್ತಾರ್ ರಾಜಾ ಸತ್ತಾನೊ ಸತ್ತಾನೊ
ಅತ್ತರ್‍ಬಾಟ್ಲಿ ಪಂಪಂಪಾಟ್ಲಿ ಅತ್ತಾವೋ ಅತ್ತಾವೋ
ಹುತ್ಹುತ್ನ್ಯಾಗ ಬ್ಹುಸ್ ಬ್ಹುಸ್ ಹಾವು ಎದ್ದಾವೊ ಎದ್ದಾವೊ
ರಾಣಿಗಂಡಾ ಗುಂಡಾರ್‌ಗುಂಡಾ ಹಡದಾನೋ ಹಡದಾನೋ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂಫಿ ಸಂತ
Next post ನಾಯಕ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…