ಬಂಗರ ಚಂದ್ರಾ ಮುಗಿಲಾ ಇಂದ್ರಾ

ಬಂಗರ ಚಂದ್ರಾ ಮುಗಿಲಾ ಇಂದ್ರಾ
ಹೌವ್ವನೆ ನಕ್ಕಿದ್ದಾ|| ಏನ್ಚಂದಽಽ ಏನ್ಚಂದಽಽ ||ಪಲ್ಲ||

ಚಂಚಂದಾಗಿ ಆಡ್ಯಾಡ್ಯಾಡ್ತಾ-
ನನ್ನನ್ರಾಗ ಇಲ್ಲಾಗಿ ಹೋದ
ಬಂದೇನೆಂದು ಬ್ಯಾಸತ್ತಾನು
ಹೇಳೇಳ್ರಾಗ ಗಳ್ಳನೆ ಹೋದ ||೧||

ಕಂಡ್‍ಕಂಡಾನು ಕಲ್ಲಾಬಿಲ್ಲಿ
ಹೌವ್ವವ್ವಾರಿ ಸೆರಗಿಡಿರಾಗ
ಕಣ್ಣಾರೆಪ್ಪಿ ಗಪ್‍ಗಪ್ಪಾಗಿ
ಬಿಚ್ಚಿದ ಎದಿಯಾ ಕಟ್‍ಕಟ್‍ರಾಗ ||೨||

ಮಿಂಡಾ ಬಂದು ಪುಂಡಿ ಕಟ್ಟಿ
ಪೆಂಡಿ ಹೊತ್ತಾ ಎನ್ನನ್ರಾಗ
ಗೂಳಿ ಮ್ಯಾಗ ಗೂಳಿ ಬಂದು
ಗೋಳು ಆತು ಅನ್ನನ್ರಾಗ ||೩||

ಸುತ್ತಾಡ್ಕೊಂತ ಸರಗಾಡ್ಕೊಂತ
ಹರಗ್ಯಾಡ್ಕೊಂತ ಹಿಡಿಹಿಡಿರಾಗ
ಸುದ್ದಿಲ್ದಂಗ ಸದ್ದಿಲ್ದಂಗ
ಇದ್ದಲ್ಲಿದ್ದು ಇಲ್ದಂಗಾದಾ ||೪||

ಗುಂಗುರುಗೂದ್ಲಾ ಸಿಂಗರಗಲ್ಲಾ
ಅಲ್ಲಾ ಬೆಲ್ಲಾ ಮೆಲ್‍ಮೆಲ್‍ರಾಗ
ಬಂದಾ ಬಂದಾ ಎನ್‌ಎನ್ ರಾಗ
ಬಂದಂಗಾಗಿ ಬಾಲ್ದಂಗಾದಾ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಲೆಗೆಡುಕಿ
Next post ಕಳವು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys