ಕಾಲಾತೀತ ತಲಬು

ಇದ್ದ ಬಿದ್ದ ಶಕ್ತಿಯನ್ನೆಲ್ಲಾ ಇಡಿಯಾಗಿಸಿ
ಕೊಂಡು ಹೊರಟೆ, ಉನ್ಮಾದ ತಡೆಯಲಾರದೇ
ಬಾಯಿ ತೆರೆದುಕೊಂಡೆ.
ಈಗ ಮೆಲ್ಲಲೇಬೇಕು ಕವಳ.
ಚಟ ಎಷ್ಟೆಂದರೂ ಚಟವೇ:
ಹುಡುಕಿದರೂ ಸಿಗಲಿಲ್ಲ ಸಂಚಿಯಲ್ಲಿ ನಾಲ್ಕಾಣೆ
ಹಂಗೆಲ್ಲ ಸಿಕ್ಕುವ ಸರಕಲ್ಲ.
ಎದುರಿಗೆ ಅದೇ ಹಳೆಯ ಶತ್ರು
ಹಲ್ಲುಗಿಂಜುತ್ತ
ಧನದ ಥಾಲಿ ಹಿಡಿದ ಕೋರೆದಂತಗಳ ಧನಿಕ.

ಹಂಬಲಿಸಿ ಲೇಪಿಸಿದ ಲಿಪಸ್ಟಿಕ್ಕು,
ಕ್ರೀಮು, ಮುಖಬಣ್ಣಗಳು
ಸೋತು ಸುಣ್ಣವಾಗಿವೆ.
ಒತ್ತಿ ಕುಳಿತುಕೊಳ್ಳಲಾಗದೇ ಶತ್ರುವಿನಂತೆ.
ಕಾಲನ ಕೈಯಲ್ಲಿ ಸಿಕ್ಕು ತರಗೆಲೆಗಳಂತೆ
ಮುದುಡಿ,
ತುಪ್ಪೆಯಾಗಿರುವ ಚರ್ಮದ
ಸುಕ್ಕು ನೋಡಿ ಮುಸಿ ಮುಸಿ ನಗುತ್ತ,
ಲೇವಡಿ ಮಾಡುತ್ತಿವೆ ಶತ್ರುವಿನಂತೆ

ಈಗಷ್ಟೇ ಬಿಚ್ಚಿಟ್ಟ ಬಳೆ ಮಂಗಮಾಯವಾದಂತೆ.
ಹುಡುಕಿ ಹುಡುಕಿ ಸಾಕಾಗಿ
ಪ್ರಾಯ ದಕ್ಕಿಸಿಕೊಟ್ಟ ಶತ್ರುವಿಗೆ ಹಿಡಿಶಾಪ ಹಾಕುತ್ತ
ಕೈ ನೋಡಿಕೊಂಡೆ.
ಅರೇ ಯಾವಾಗ ಕೈ ಸೇರಿತು,
ಮಂದಿ ಮಗಂದು?
ಜಿಗುಪ್ಸೆಯಾದರೂ ಚಿನ್ನಚಿನ್ನವೇ?
ಶತ್ರುವಾದರೇನು?

ಮೇಲಿನ ಕೇರಿ ಮಾಯಣ್ಣನ ಮಗಳು
ಮೈನೆರೆದಾಳಂತೆ. ದೇವರಿಗೆ ಬಿಡ್ತಾರಂತೆ.
ಅದಕ್ಕೆ ಬಳೆ ನೆನಪಾಯ್ತು.
“ಹೀರೇಕಿ ನೀನು, ನಿತ್ಯ ಸುಮಂಗಲಿ.
ಹರಸಿ ಹೋಗು ಬಾ.” ಎಂದಿದ್ದ.
ಯಾವ ಕಾಲದಲ್ಲಿದ್ದಾನೆ ಮಾಯಣ್ಣ.
ಕಾಲ ಯಾವುದಾದ್ರೇನೂ ಈಗೆಲ್ಲ
ಹೈಟೆಕ್ಕು ಕಾಲವಂತೆ.
ಹೊಸ ನಮೂನೆ ದಂಧೆಗಳು.

ಗೊನೆ ಕಡಿದ ಬಾಳೆಹಂಗೆ ಬದುಕು.
ಹರಕು ಚಾಪೆ ಹಂಗೆ ದೇಹ
ಆಗುತ್ತೆ ಅಂತ ಗೊತ್ತಿಲ್ಲೇನು?
ಕಟಕಟ ಹಲ್ಲುಕಡಿಯೋದ ಬಿಟ್ಟು
ಬೇರೇನೂ ಮಾಡೋಕಾಗಲ್ಲ.
ಹರಕು ಕಚ್ಚೆ ಧಣಿಗೂ
ಮೆಳ್ಳೆಗಣ್ಣ ಪೂಜಾರಿಗೂ ಬೆಂಕಿ ಹಾಕ.
ಅರೇ ಶತ್ರು ಅಂದ್ರೆ ಯಾರು?
ಈ ಕವಳದ ತಲುಬಿಗಿಷ್ಟು
ಹೊಗೆ ಹಾಕ. ತೂ.. ತೂ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬
Next post ಮುಸ್ಸಂಜೆಯ ಮಿಂಚು – ೧೪

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys