ಕವಿತೆಯೆಂದರೆ


ಕವಿತೆಯೆಂದರೆ
ಚಂದ್ರನ ಮೇಲಿನ ಕಪ್ಪು ಕಲೆ
ನಿಶೆಯ ನಿದ್ದೆಗೆಡಿಸುವ ಉಷೆ
ಬಾನಿನ ಅಗಾಧತೆ ಭಾನುವಿನ ಪ್ರಖರತೆ


ಕವಿತೆಯೆಂದರೆ
ರಕ್ತದೊಳಗಣ ಕೆಂಪುಕಣ
ತಲೆಯೊಳಗಣ ಜ್ಞಾನಗಣ
ಕೈಯಲ್ಲಿಯ ಕಸಬರಿಗೆ


ಕವಿತೆಯೆಂದರೆ
ಭೋಗದ ಪ್ರತಿಫಲನ
ಮಿರುಗುವ ಮಕಮಲ್ಲಿನ ಹೊದಿಕೆ
ಧಗಧಗಿಸುವ ಕೆಂಡದ ಮೇಲಿನ ನಡಿಗೆ


ಕವಿತೆಯೆಂದರೆ
ಹುಲ್ಲಿನ ಬುಡದ ಬೇರಿನ ಕಂಪು
ಕೆಚ್ಚಲಿಗೆ ಬಾಯಿಟ್ಟ ಹಸುಗರುವಿನ ಹುಮ್ಮಸ್ಸು
ಹದಗೆಟ್ಟ ವಾಸ್ತವ್ಯದ ಹರಕು ಚಾಪೆ


ಕವಿತೆಯೆಂದರೆ
ವಾಚ್ಯ ಸೂಚ್ಯಗಳ ಸೂತಕ ಕೊಳೆ
ಕೀರ್‍ತಿಶೇಷರ ಕಸರತ್ತು ಖಾನೆ
ವಿದ್ವಾಂಸರ ಸರಕಿನ ವ್ಯಾಪಾರ
ಕವಿತೆಯೆಂದರೆ ಜೂಜು, ನಾಣ್ಯ, ವೈಯಾರಿ
ಕವಿತೆಯೆಂದರೆ ಮಗು, ದೈವ, ರಾಕ್ಷಸ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪
Next post ಮುಸ್ಸಂಜೆಯ ಮಿಂಚು – ೧೨

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys