Home / ಕವನ / ಕವಿತೆ / ಕವಿತೆಯೆಂದರೆ

ಕವಿತೆಯೆಂದರೆ


ಕವಿತೆಯೆಂದರೆ
ಚಂದ್ರನ ಮೇಲಿನ ಕಪ್ಪು ಕಲೆ
ನಿಶೆಯ ನಿದ್ದೆಗೆಡಿಸುವ ಉಷೆ
ಬಾನಿನ ಅಗಾಧತೆ ಭಾನುವಿನ ಪ್ರಖರತೆ


ಕವಿತೆಯೆಂದರೆ
ರಕ್ತದೊಳಗಣ ಕೆಂಪುಕಣ
ತಲೆಯೊಳಗಣ ಜ್ಞಾನಗಣ
ಕೈಯಲ್ಲಿಯ ಕಸಬರಿಗೆ


ಕವಿತೆಯೆಂದರೆ
ಭೋಗದ ಪ್ರತಿಫಲನ
ಮಿರುಗುವ ಮಕಮಲ್ಲಿನ ಹೊದಿಕೆ
ಧಗಧಗಿಸುವ ಕೆಂಡದ ಮೇಲಿನ ನಡಿಗೆ


ಕವಿತೆಯೆಂದರೆ
ಹುಲ್ಲಿನ ಬುಡದ ಬೇರಿನ ಕಂಪು
ಕೆಚ್ಚಲಿಗೆ ಬಾಯಿಟ್ಟ ಹಸುಗರುವಿನ ಹುಮ್ಮಸ್ಸು
ಹದಗೆಟ್ಟ ವಾಸ್ತವ್ಯದ ಹರಕು ಚಾಪೆ


ಕವಿತೆಯೆಂದರೆ
ವಾಚ್ಯ ಸೂಚ್ಯಗಳ ಸೂತಕ ಕೊಳೆ
ಕೀರ್‍ತಿಶೇಷರ ಕಸರತ್ತು ಖಾನೆ
ವಿದ್ವಾಂಸರ ಸರಕಿನ ವ್ಯಾಪಾರ
ಕವಿತೆಯೆಂದರೆ ಜೂಜು, ನಾಣ್ಯ, ವೈಯಾರಿ
ಕವಿತೆಯೆಂದರೆ ಮಗು, ದೈವ, ರಾಕ್ಷಸ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...