Home / ಕವನ / ಕವಿತೆ / ನೀಛಾಗ್ರೇಸರ

ನೀಛಾಗ್ರೇಸರ

ಮುದ್ದಾದ
ಕುರಿಮರಿಯ ತರುವೆ
ಬೆಳೆಸುವೆ ಕಕ್ಕುಲತೆಯಲಿ

ಕೇಳೀತೆ ಹಸಿವೆಂದು
ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು
ಮೊರೆದೀತೆ ದೇಹಾಲಸ್ಯವೆಂದು
ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು.

ಸಗಣಿ ಬಾಚುವೆ
ಮೈಯ ತೊಳೆಯುವೆ
ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ
ಒಂದು ಹೆಸರೂ ಕರೆಯುವೆ
ಅಕ್ಕರೆ ತೋರುವೆ ಹಲವು ಹತ್ತು ರೀತಿಯಲಿ.

ಕಣ್ಣಿಟ್ಟು ಕಾಯುವೆ
ಎತ್ತೆಂದರತ್ತ ಬಿಡದೆ
ನಾಯಿ, ತೋಳಗಳ ಬಾಯಿಗೆ ಕೊಡದೆ
ಘಾಸಿಗೆಡೆ ಕೊಡದೆ
ಸ್ನೇಹ ಪಾರಮ್ಯದಲಿ;
ಚರ್ಬಿ ಬಲಿಯುವತನಕ

ಉಬ್ಬುಬ್ಬಿ ಬೆಳೆದಂತೆ ಅದು
ಹಿಗ್ಗುವೆ ಒಡಲಲ್ಲಿ
ಬರಲಿರುವ ಹಬ್ಬದ ದಿನವ ನೆನೆದು.

ಯಾಕಯ್ಯಾ… !
ಬದಲಾಗುವೆ ನಂಬಿಕೆಯಲಿ ?
ನಿನ್ನ ತೆರನದೆ ರಕ್ತ ಮಾಂಸದ
ನಿನ್ನಂತಹುದೇ ಆದ
ನಿನ್ನಲ್ಲೇ ಜೀವವಿರಿಸಿದೊಂದು ಜೀವವ

ಎಳೆದೊಯ್ದು
ಹೊಯ್ಗುಡುಲಿಗಿಡಿದಾಗ
ತಲೆ ಕತ್ತರಿಸಿ ಕೆಡೆದಾಗ
ಸಾವ ನೋವಿನಲದು ಬಾಯಿ ಬಾಯಿ ಬಿಡುವಾಗ
ರಕ್ತ ಮಡುವಾಗಿ ಹರಿವಾಗ
ಮುಂಡ ಪಟ ಪಟ ಒದರಾಡುವಾಗ.
ನಿನಗೆ ಏನೂ ಅನ್ನಿಸದು ?
ಬದಲಿಗೆ ನಿನ್ನ ಕಣ್ಣಲ್ಲಿ ಮಿಂಚು ಸೆಲೆಯೊಡೆಯುವುದು.

ಸಾಲದೆಂಬಂತೆ
ತಲೆಯ ಹೆಕ್ಕಿ
ದೇವರೆಂಬುದರ ಮುಂದಿಕ್ಕಿ
ನೀರ ಹನಿಸಿ
ಹರಕೆ ಕೇಳುವೆ
ಬಾಯಿಬಿಟ್ಟ ಸಂಖ್ಯೆಯಾಧರಿಸಿ
ಒಳಿತಾಗುವುದೆಂದು ಭಾವಿಸುವೆ.

ಏಕೆ ?
ಜಿಹ್ವಾ ಕ್ಷುದ್ರತೆಗೆ ವಶವಾಗಿ
ಕುರಿತು ಚಿಂತಿಸದೆ ನೈಜ ಪಾಶಗಳ ಬಗೆಗೆ
ಎಳೆವೆ ಬರೆ
ಹಸಿ ಶಿಶು ಹೃದಯದ ಮೇಲೆ.

ಬಿಡು !
ನೀಡುವುದೊಂದು, ಬೇಡುವುದಿನ್ನೊಂದರ
ನೀಛಾಗ್ರೇಸರರ ಸಂಗಕ್ಕಿಂತ ನಿಸೂರಾಯಿತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...