ನೀಛಾಗ್ರೇಸರ

ಮುದ್ದಾದ
ಕುರಿಮರಿಯ ತರುವೆ
ಬೆಳೆಸುವೆ ಕಕ್ಕುಲತೆಯಲಿ

ಕೇಳೀತೆ ಹಸಿವೆಂದು
ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು
ಮೊರೆದೀತೆ ದೇಹಾಲಸ್ಯವೆಂದು
ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು.

ಸಗಣಿ ಬಾಚುವೆ
ಮೈಯ ತೊಳೆಯುವೆ
ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ
ಒಂದು ಹೆಸರೂ ಕರೆಯುವೆ
ಅಕ್ಕರೆ ತೋರುವೆ ಹಲವು ಹತ್ತು ರೀತಿಯಲಿ.

ಕಣ್ಣಿಟ್ಟು ಕಾಯುವೆ
ಎತ್ತೆಂದರತ್ತ ಬಿಡದೆ
ನಾಯಿ, ತೋಳಗಳ ಬಾಯಿಗೆ ಕೊಡದೆ
ಘಾಸಿಗೆಡೆ ಕೊಡದೆ
ಸ್ನೇಹ ಪಾರಮ್ಯದಲಿ;
ಚರ್ಬಿ ಬಲಿಯುವತನಕ

ಉಬ್ಬುಬ್ಬಿ ಬೆಳೆದಂತೆ ಅದು
ಹಿಗ್ಗುವೆ ಒಡಲಲ್ಲಿ
ಬರಲಿರುವ ಹಬ್ಬದ ದಿನವ ನೆನೆದು.

ಯಾಕಯ್ಯಾ… !
ಬದಲಾಗುವೆ ನಂಬಿಕೆಯಲಿ ?
ನಿನ್ನ ತೆರನದೆ ರಕ್ತ ಮಾಂಸದ
ನಿನ್ನಂತಹುದೇ ಆದ
ನಿನ್ನಲ್ಲೇ ಜೀವವಿರಿಸಿದೊಂದು ಜೀವವ

ಎಳೆದೊಯ್ದು
ಹೊಯ್ಗುಡುಲಿಗಿಡಿದಾಗ
ತಲೆ ಕತ್ತರಿಸಿ ಕೆಡೆದಾಗ
ಸಾವ ನೋವಿನಲದು ಬಾಯಿ ಬಾಯಿ ಬಿಡುವಾಗ
ರಕ್ತ ಮಡುವಾಗಿ ಹರಿವಾಗ
ಮುಂಡ ಪಟ ಪಟ ಒದರಾಡುವಾಗ.
ನಿನಗೆ ಏನೂ ಅನ್ನಿಸದು ?
ಬದಲಿಗೆ ನಿನ್ನ ಕಣ್ಣಲ್ಲಿ ಮಿಂಚು ಸೆಲೆಯೊಡೆಯುವುದು.

ಸಾಲದೆಂಬಂತೆ
ತಲೆಯ ಹೆಕ್ಕಿ
ದೇವರೆಂಬುದರ ಮುಂದಿಕ್ಕಿ
ನೀರ ಹನಿಸಿ
ಹರಕೆ ಕೇಳುವೆ
ಬಾಯಿಬಿಟ್ಟ ಸಂಖ್ಯೆಯಾಧರಿಸಿ
ಒಳಿತಾಗುವುದೆಂದು ಭಾವಿಸುವೆ.

ಏಕೆ ?
ಜಿಹ್ವಾ ಕ್ಷುದ್ರತೆಗೆ ವಶವಾಗಿ
ಕುರಿತು ಚಿಂತಿಸದೆ ನೈಜ ಪಾಶಗಳ ಬಗೆಗೆ
ಎಳೆವೆ ಬರೆ
ಹಸಿ ಶಿಶು ಹೃದಯದ ಮೇಲೆ.

ಬಿಡು !
ನೀಡುವುದೊಂದು, ಬೇಡುವುದಿನ್ನೊಂದರ
ನೀಛಾಗ್ರೇಸರರ ಸಂಗಕ್ಕಿಂತ ನಿಸೂರಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಯಾಸಿ ರತ್ನ
Next post ಈ ಜಗದೊಳೆಲ್ಲರೊಪ್ಪುವ ಮಾತನಾಡಿದವರುಂಟೇ ?

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys