ಗುರಿ ಇರಬೇಕು ಬಾಳಿಗೆ

ಗುರಿ ಇರಬೇಕು ಬಾಳಿಗೆ
ಛಲವಿರಬೇಕು ಜೀವಕೆ|
ಗುರಿ‌ಇರದ ಬಾಳಿಗೆಲ್ಲಿದೆ ಕೊನೆಯು
ಛಲವಿರದ ಜೀವಕೆಲ್ಲಿದೆ ಬೆಲೆಯು|
ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ||

ಅತ್ತ ಇತ್ತ ಹರಿದಾಡುವ ಮನಸ
ಅಂಕೆಯಲಿಡಬೇಕು|
ಆಸೆ ಆಮೀಷಕೆ ಅಧೀನವಾಗದ ಹಾಗೆ
ನಿಗಾವಹಿಸಲುಬೇಕು|
ಪ್ರತೀ ಕ್ಷಣವು ಅರಿಷ್ಡವರ್ಗಾದಿಗಳ
ಹಿಡಿತದಲ್ಲಿಡಬೇಕು||

ಗುರು ಹಿರಿಯರನು ಅನುಸರಿಸಿ
ಉತ್ತಮ ಮಾರ್ಗದಲಿ ಬದುಕಬೇಕು|
ಎಷ್ಟೇ ಕಷ್ಟಗಳು ಬಂದರೂ ಸತ್ಯ
ಧರ್ಮದಲಿ ನಡೆಯಲುಬೇಕು|
ಇದ್ದುದರಲ್ಲಿಯೇ ಸುಖವನು ಕಂಡು
ಸಂತೃಪ್ತಿಯ ಹೊಂದಬೇಕು||

ಅಲ್ಪತನಕೆ ಆಸ್ಪದವ ನೀಡಬಾರದು
ಹಾಸ್ಯಕೂ ಎಂದು ಅಸತ್ಯವನಾಡಬಾರದು|
ಸಜ್ಜನರೊಳೊಂದಾಗಿ ಬಾಳಿ ಬದುಕಬೇಕು
ಅಚ್ಯುತ ಅನಂತನ ನೆನೆ ನೆನೆದು
ಬಾಳಗುರಿಯ ಸೇರಲು ಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು
Next post ಕತ್ತಲ ರಾಣಿ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys