Home / ಲೇಖನ / ವಿಜ್ಞಾನ / ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಶುದ್ಧವಾದ ಗಾಳಿ ಇದ್ದರೆ ಎಷ್ಟು ವರ್ಷಗಳಾದರೂ ಜೀವರಾಶಿಗಳು ಬದುಕಬಹುದು. ಅದೇ ವಿಷಯುಕ್ತವಾದ ಇಂಗಾಲದ ಡೈ‌ಆಕ್ಸೈಡ್ ಗಾಳಿಯು ಪಸರಿಸಿದರೆ ಇಂಥಹ ಗಾಳಿಯನ್ನು ಸೇವಿಸುವ ಜೀವಿಗಳು ಆತಂಕಕ್ಕೀಡಾಗುತ್ತವೆ. ಇನ್ನೊಂದು ವಿಶೇಷವೆಂದರೆ ಒಂದು ನೆಲೆಯಲ್ಲಿ ವಿಶಯುಕ್ತಗಾಳಿ ಇದ್ದರೆ ಅದು ಬೀಸುತ್ತ ಖಂಡಾಂತರಗೊಂಡು ಬೇರೆ ರಾಷ್ಟ್ರ, ರಾಜ್ಯದ ಜೀವರಾಶಿಗಳಿಗೂ ಆಪತ್ತು ತರಬಲ್ಲದು.

ಸಾಮಾನ್ಯವಾಗಿ ಉಷ್ಣವಲಯದ ನಾಡುಗಳಲ್ಲಿ ಭಾರತವು ಸೇರಿ ಬಳಸುವ ಭಾರಿ ಮಟ್ಟದ ಕೀಟನಾಶಕಗಳು ಗಾಳಿಯೊಡನೆ ಲೀನವಾಗಿ, ಗಾಳಿಯನ್ನು ವಿಷಗೊಳಿಸಿ ಉತ್ತರ ಧೃವ ಪ್ರದೇಶವನ್ನು ಸೇರಿ ನೀರಿನಲ್ಲಿ ಬೆರೆಯುತ್ತವೆ. ಇಂಥಹ ಪರಿಸರದಲ್ಲಿರುವ ಜೀವಿಗಳು ನೀರು, ಮತ್ತು ಗಾಳಿಯ ಸೇವನೆಯಿಂದ ವೇದನೆಯನ್ನು ಪಡಬೇಕಿದೆ. ಕೆನಡಾದ ಉತ್ತರ ಬದಿಯ ಯುಕೋನೀಯ ಲೇಬರ್ಸ್ ಸರೋವರದಲ್ಲಿ ಕೀಟನಾಶಕ ಮತ್ತು ವಿಷದ ಅಂಶ ಸೇರಿ ಕಳವಳಕಾರಿ ಮಟ್ಟವನ್ನು ತಲುಪಿದೆ, ಎಂದು ಇತ್ತೀಚೆಗೆ ಪತ್ತೆಮಾಡಲಾಗಿದೆ. ಈ ಪ್ರದೇಶದಲ್ಲಿ ಕೀಟನಾಶಕ ಅಂಶವನ್ನು ಹಾಕದಿದ್ದರೂ ಆಫ್ರಿಕಾ, ಭಾರತದಂತಹ ದೇಶಗಳ ಕಡೆಯಿಂದ ಉತ್ತರ ಧೃವದತ್ತ ಬೀಸಿದ ಗಾಳಿಯೊಂದಿಗೆ ಸೇರಿಕೊಂಡು ಇಲ್ಲಿ ತನ್ನ ಪರಿಣಾಮವನ್ನು ಬೀರುತ್ತಲಿದೆ.

ಕೆನಡಾದ ಸಂಶೋಧಕರು ಉತ್ತರ ಧೃವ ಪ್ರದೇಶದ ಕಡಲ ನೀರಿನ ಮೇಲ್ಮಟ್ಟದಲಿ ವಿಷಕೀಟನಾಶಕದಂತಹ ಅಂಶಗಳಿರುವುದನ್ನು ಕಂಡು ದಂಗಾಗಿದ್ದಾರೆ. ಈ ಸರೋವರ ಮತ್ತು ಧೃವ ದ ಸುತ್ತ ಮನುಷ್ಯನನ್ನೊಳಗೊಂಡು ೨೦೦ ರಷ್ಟು ಬೇರೆಬೇರೆ ಜೀವರಾಶಿಗಳಿವೆ. ಇಲ್ಲಿಯ ಜೀವರಾಶಿಗಳ ಆಹಾರ ಮೀನು ನೀರು ಮತ್ತು ಮೀನು ಆಹಾರದ ಮೂಲಕ ಈ ಕೀಟನಾಶಕದ ನಂಜು ಸುತ್ತಲ ಪ್ರದೇಶ ಮತ್ತು ಗಾಳಿಬೀಸಿದ ಪ್ರದೇಶಗಳೆಲ್ಲೆಡೆಯಲ್ಲಿ ವಿಷ ನೀಡಿ ಆರೋಗ್ಯವನ್ನು ಹದಗೆಡಿಸುತ್ತಿರುವುದಂತೂ ನಿಜ. ಕೀಟನಾಶಕಗಳಿಂದ ಸಸ್ಯಗಳಿಗೆ ಉಪಕಾರವಾಗಬಹುದೆಂದರೂ ಕೊನೆಗೊಂದು ದಿನ ಆ ಸಸ್ಯವು ಸೇರಿ ಜನ ಸಮುದಾಯಕ್ಕೆ ವಿಷ ಹರಡುತ್ತದೆಂಬುದಂತೂ ಸತ್ಯ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್