Home / ಲೇಖನ / ವಿಜ್ಞಾನ / ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಶುದ್ಧವಾದ ಗಾಳಿ ಇದ್ದರೆ ಎಷ್ಟು ವರ್ಷಗಳಾದರೂ ಜೀವರಾಶಿಗಳು ಬದುಕಬಹುದು. ಅದೇ ವಿಷಯುಕ್ತವಾದ ಇಂಗಾಲದ ಡೈ‌ಆಕ್ಸೈಡ್ ಗಾಳಿಯು ಪಸರಿಸಿದರೆ ಇಂಥಹ ಗಾಳಿಯನ್ನು ಸೇವಿಸುವ ಜೀವಿಗಳು ಆತಂಕಕ್ಕೀಡಾಗುತ್ತವೆ. ಇನ್ನೊಂದು ವಿಶೇಷವೆಂದರೆ ಒಂದು ನೆಲೆಯಲ್ಲಿ ವಿಶಯುಕ್ತಗಾಳಿ ಇದ್ದರೆ ಅದು ಬೀಸುತ್ತ ಖಂಡಾಂತರಗೊಂಡು ಬೇರೆ ರಾಷ್ಟ್ರ, ರಾಜ್ಯದ ಜೀವರಾಶಿಗಳಿಗೂ ಆಪತ್ತು ತರಬಲ್ಲದು.

ಸಾಮಾನ್ಯವಾಗಿ ಉಷ್ಣವಲಯದ ನಾಡುಗಳಲ್ಲಿ ಭಾರತವು ಸೇರಿ ಬಳಸುವ ಭಾರಿ ಮಟ್ಟದ ಕೀಟನಾಶಕಗಳು ಗಾಳಿಯೊಡನೆ ಲೀನವಾಗಿ, ಗಾಳಿಯನ್ನು ವಿಷಗೊಳಿಸಿ ಉತ್ತರ ಧೃವ ಪ್ರದೇಶವನ್ನು ಸೇರಿ ನೀರಿನಲ್ಲಿ ಬೆರೆಯುತ್ತವೆ. ಇಂಥಹ ಪರಿಸರದಲ್ಲಿರುವ ಜೀವಿಗಳು ನೀರು, ಮತ್ತು ಗಾಳಿಯ ಸೇವನೆಯಿಂದ ವೇದನೆಯನ್ನು ಪಡಬೇಕಿದೆ. ಕೆನಡಾದ ಉತ್ತರ ಬದಿಯ ಯುಕೋನೀಯ ಲೇಬರ್ಸ್ ಸರೋವರದಲ್ಲಿ ಕೀಟನಾಶಕ ಮತ್ತು ವಿಷದ ಅಂಶ ಸೇರಿ ಕಳವಳಕಾರಿ ಮಟ್ಟವನ್ನು ತಲುಪಿದೆ, ಎಂದು ಇತ್ತೀಚೆಗೆ ಪತ್ತೆಮಾಡಲಾಗಿದೆ. ಈ ಪ್ರದೇಶದಲ್ಲಿ ಕೀಟನಾಶಕ ಅಂಶವನ್ನು ಹಾಕದಿದ್ದರೂ ಆಫ್ರಿಕಾ, ಭಾರತದಂತಹ ದೇಶಗಳ ಕಡೆಯಿಂದ ಉತ್ತರ ಧೃವದತ್ತ ಬೀಸಿದ ಗಾಳಿಯೊಂದಿಗೆ ಸೇರಿಕೊಂಡು ಇಲ್ಲಿ ತನ್ನ ಪರಿಣಾಮವನ್ನು ಬೀರುತ್ತಲಿದೆ.

ಕೆನಡಾದ ಸಂಶೋಧಕರು ಉತ್ತರ ಧೃವ ಪ್ರದೇಶದ ಕಡಲ ನೀರಿನ ಮೇಲ್ಮಟ್ಟದಲಿ ವಿಷಕೀಟನಾಶಕದಂತಹ ಅಂಶಗಳಿರುವುದನ್ನು ಕಂಡು ದಂಗಾಗಿದ್ದಾರೆ. ಈ ಸರೋವರ ಮತ್ತು ಧೃವ ದ ಸುತ್ತ ಮನುಷ್ಯನನ್ನೊಳಗೊಂಡು ೨೦೦ ರಷ್ಟು ಬೇರೆಬೇರೆ ಜೀವರಾಶಿಗಳಿವೆ. ಇಲ್ಲಿಯ ಜೀವರಾಶಿಗಳ ಆಹಾರ ಮೀನು ನೀರು ಮತ್ತು ಮೀನು ಆಹಾರದ ಮೂಲಕ ಈ ಕೀಟನಾಶಕದ ನಂಜು ಸುತ್ತಲ ಪ್ರದೇಶ ಮತ್ತು ಗಾಳಿಬೀಸಿದ ಪ್ರದೇಶಗಳೆಲ್ಲೆಡೆಯಲ್ಲಿ ವಿಷ ನೀಡಿ ಆರೋಗ್ಯವನ್ನು ಹದಗೆಡಿಸುತ್ತಿರುವುದಂತೂ ನಿಜ. ಕೀಟನಾಶಕಗಳಿಂದ ಸಸ್ಯಗಳಿಗೆ ಉಪಕಾರವಾಗಬಹುದೆಂದರೂ ಕೊನೆಗೊಂದು ದಿನ ಆ ಸಸ್ಯವು ಸೇರಿ ಜನ ಸಮುದಾಯಕ್ಕೆ ವಿಷ ಹರಡುತ್ತದೆಂಬುದಂತೂ ಸತ್ಯ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...