ಕತ್ತಲ ರಾಣಿ

ನಟ್ಟ ನಡು ಇರುಳಲ್ಲಿ ಅರಳಿದ ಹೂವು
ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು
ನಡುವೆ ಉರಳುವ ಚಕ್ರ ಚಲನೆ
ಸಾವಯವ ಮೈಮಾಟದಲ್ಲಿ
ಭಾವ ಬುದ್ಧಿಗಳ ಕೂಟದಲ್ಲಿ
ಕತ್ತಲ ರಾಣಿಯ ಮಿಂಚಿನ ಪ್ರತಿಮೆ!

ಕುಶಲವೆ ನನ್ನ ಕತ್ತಲ ರಾಣಿ?
ವಸಾಹತುವಿನ ಹುತ್ತದಲ್ಲಿ
ವಿಷವಿಲ್ಲದ ಚಿತ್ತದಲ್ಲಿ
ಚಿತ್ತಾರ ಬಿಡಿಸಿದ್ದು ಹೇಗೆ ನೀನು!
ಅವರು ಕೊಟ್ಟ ಅಂಗಿ ಎಸೆದು
ಹೊಸ ಹುಟ್ಟಿನ ಪುಂಗಿ ಮಿಡಿದು
ಕಾಯುತ್ತಿದ್ದೆ ನಿನಗಾಗಿ ನಾನು.

ಕತ್ತಲ ಕೋಣೆಯಲ್ಲಿ ಕತ್ತಲದವಳೆ
ಪರಂಗಿಯ ರಂಗಿನಾಟದಿಂದ ಹೊರಬಂದವಳೆ
ಮಿಂಚಲ್ಲಿ ಮಿಂದು ನಗೆಯಲ್ಲಿ ನಿಂದವಳೆ
ನೀ ನಕ್ಕ ಚುಕ್ಕಿ ಚಂದ್ರಮ ನಿನ್ನದೆ?
ನಡು ಬಳಸುವ ಸ್ವಾತಂತ್ರ ನನ್ನದೆ?

ಹೇಳು ಕತ್ತಲ ರಾಣಿ ಹೇಳು
ಸ್ವಾತಂತ್ರ್ಯವೆನ್ನುವುದು ಹುಸಿನಗೆಯ ವಯಾರವೆ?
ನಡುರಾತ್ರಿಯ ಕೃತಕ ಸಂಚಾರವೆ?

ಕಟ್ಟು ಕಳಚಿದ ಕತ್ತಲ ರಾಣಿಗೆ
ಈ ನಾಡ ಒಡೆಯರು ಕಟ್ಟಿದ ಅರಮನೆ
ಕಂಗೊಳಿಸುವ ಕೆಳಮನೆ-ಮೇಲ್ಮನೆ!
ಬೇಡವೆ ನಿನಗೆ ಬೆಳಕಿನ ಬಡ-
ವರ ಮನೆ; ಸಂಕಟದ ಸುಳಿಯಲ್ಲಿ
ಉಕ್ಕುವ ಹಕ್ಕಿನ ಮನ.

ವಸಾಹತು ಹುತ್ತಕ್ಕಿದು ಹೊಸರೂಪವೇ ಗೆಳತಿ?
ನಡುರಾತ್ರಿಯ ಹುಟ್ಟಿಗೆ ಯಾರು ಪತಿ, ಯಾರು ಸತಿ!
ಬೆವರು ಬುಸುಗುಡುತ್ತಿದೆ ಕತ್ತಲಲ್ಲಿ
ನಿನ್ನಂತೆಯೇ ವಿಷವಿಲ್ಲದ ಚಿತ್ತದಲ್ಲಿ.

ಇಂದು ನೆನ್ನೆಗಳ ನಡುವಿನ ಈ ಮುಗಿಲು
ಹಗಲಲ್ಲಿ ಬೆಳಕು ಹುಡುಕುವ ಬದಲು
ನಿನ್ನೊಡಲ ಕಡೆದಾಗ ಕಳೆದೀತು ಬೇಗೆ
ಕತ್ತಲು ಬೆತ್ತಲಾಗದೆ ಬೆಳಕು ಬಂದೀತು ಹೇಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರಿ ಇರಬೇಕು ಬಾಳಿಗೆ
Next post ಹಾದರಗಿತ್ತಿ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…