ಏನೆಂದು ಬಣ್ಣಿಸಲಿ ನಾನು
ನಿನ್ನ ಏನೆಂದು ವರ್ಣಿಸಲಿ ನಾನು
ಆದಿಯು ನೀನೇ, ಅಂತ್ಯವು ನೀನಾಗಿರಲು||
ಕಾಲನು ನೀನು, ಕಾಲಾತೀತನು ನಾನು
ಕರ್ತೃವು ನೀನು, ಕರ್ಮಣಿಯು ನಾನು|
ಅಜೇಯನು ನೀನು, ಅಜಮಿಳನು ನಾನು
ದೈವನು ನೀನು, ದೇಹಿಯು ನಾನು||
ಸಾಗರನು ನೀನು, ಸಣ್ಣ ವರ್ಥಿಯು ನಾನು
ಸಿದ್ಧಾಂತಿಯು ನೀನು, ನಿನ್ನ ಸಂಶೋಧಕನು ನಾನು|
ಸಕಲ ಜೀವಕೋಟಿಗೆ ಆಶ್ರಯದಾತನು ನೀನು
ಅನಂತ ಕೋಟಿಯಲ್ಲೊಬ್ಬ ಆಶ್ರಯ ಕೋರಕನು ನಾನು||
*****
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.