Home / ಲೇಖನ / ವಿಜ್ಞಾನ / ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಏಕಕಾಲಕ್ಕೆ ಧ್ವನಿಯನ್ನು ದೃಷ್ಯವನ್ನು ಕಾಣುವ ಟಿ.ವಿ. ಮಾಧ್ಯಮಗಳು ಬಂದಿದ್ದರೂ ಅವು ಸಂಪರ್ಕ ಮಾಧ್ಯಮವಾಗಲಾರದೇ ರೂಪಿತ ಕಾರ್ಯಕ್ರಮಗಳನ್ನು ಬಿತ್ತರಿಸುವ ಮಾಧ್ಯಮಗಳಾಗಿವೆ. ಆಡಿಯೋ ವಿಡಿಯೋದ ಮೂಲಕ ಸಂಪರ್ಕ ಸಾಧನದ ವ್ಯವಸ್ಥೆ ಹಾಗಲ್ಲ. ಏಕಕಾಲದಲ್ಲಿ ಸಾವಿರಾರು ಕಿ.ಮೀ. ದೂರದಲ್ಲಿಯ ವ್ಯಕ್ತಿಗಳೊಡನೆ, ಸಭೆಗಳೊಡನೆ, ಸಂಪರ್ಕ ಕಲ್ಪಿಸಿಕೊಂಡು ಪರಸ್ಪರ ಮಾತನಾಡುಪ “ವಿಡಿಯೋ ಕಾನ್ಫರೆನ್ಸ್” ಎಂಬ ಸಾಧನ ರೂಪುಗೊಂಡಿದೆ. ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಮತ್ತು ಬೃಹತ್ ಇಲಾಖೆಯ ಮುಖ್ಯಸ್ಥರು, ವೈದ್ಯಕೀಯ ವಿಜ್ಞಾನಿಗಳು ದೂರದ ದೇಶದೊಡನೆ ಸಂಪರ್ಕ ಕಲ್ಪಿಸಲು ‘ದೂರವಾಣಿ ಮೊಬೈಲ್’, ಇತ್ಯಾದಿ ಧ್ವನಿವಾಹಕಗಳಿದ್ದರೂ ಅವುಗಳು ಕೇಳುವುದಕ್ಕೆ. ಹೇಳುವುದಕ್ಕೆ ಮಾತ್ರ ಸೀಮಿತಗೊಂಡಿವೆ. ಸೀಮಿತ ಅವಧಿಯೊಳಗೆ ದೂರದ ನಿಶ್ಚಿತಪ್ರದೇಶಕ್ಕೆ ಪ್ರವಾಸ ಮಾಡಲು ಆಗಲಾರದು. ಮತ್ತು ದುಬಾರಿ ಖರ್ಚು ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲೆಂದೇ ಬಂದಿರುವ “ವಿಡಿಯೋ ಕಾನ್ಫರೆನ್ಸ್‌” ಗಳು ಆಯಾಕಾಲಕ್ಕೆ ಆಯಾ ವ್ಯಕ್ತಿಗಳೊಂದಿಗೆ, ಸಮೂಹದೊಂದಿಗೆ, ಪರಿಸರದೊಂದಿಗೆ ಸಂಪರ್ಕ ಮತ್ತು ದೃಷ್ಯವನ್ನು ಕಲ್ಪಿಸುತ್ತದೆ.

ಇಂದು ಹಲವು ರೀತಿಯ ತಂತ್ರಜ್ಞಾನಗಳು ಲಭ್ಯವಿದ್ದು ಕಂಪ್ಯೂಟರ್ ಆಧಾರಿತ ತಂತ್ರಜ್ಞಾನವು ಅತ್ಯಂತ ಸರಳವಾಗಿದ್ದು ಜನಪ್ರಿಯವಾಗುತ್ತಿದೆ. ಇದರಲ್ಲಿ ಬಳಸುವ ಉಪಕರಣಗಳೆಂದರೆ ಒಂದು ಮೈಕ್ರೋಫೋನ್ (ಧ್ವನಿಯನ್ನು ರವಾನಿಸಲು) ಒಂದು ಸಣ್ಣ ಕ್ಯಾಮರಾ (ಚಿತ್ರ ರವಾನಿಸಲು) ಮತ್ತು ಒಂದು ಕಂಪ್ಯೂಟರ್ ಹಾಗೂ ದೂರವಾಣಿ ಸಂಪರ್ಕ. ಈ ವ್ಯವಸ್ಥೆ ಕೇವಲ ಇಬ್ಬರು ವ್ಯಕ್ತಿಗಳ ನಡುವಣ ಸಂಪರ್ಕವಾಗಿರದೇ ಹಲವು ಜನರ ನಡುವಣ ಮೀಟಿಂಗ್‌ಗಳಿಗೂ ಅವಕಾಶವಿರುತ್ತದೆ. ಇಬ್ಬರು ವ್ಯಕ್ತಿಗಳ ಸಭೆಯಲ್ಲಿ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತಿದೆಯೋ ಅದೇ ರೀತಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಭೆ ಸೇರಿದ್ದಲ್ಲಿ ಒಂದು ಕಡೆಯಿಂದ ಧ್ವನಿ ಚಿತ್ರಗಳನ್ನು ಉಳಿದ ಎರಡು ಕಡೆಗಳಿಗೆ ಸಾಗಿಸುತ್ತದೆ.

ಈ ದೃಷ್ಯ ಸಂಪರ್ಕ ಸಭೆಗಳು ಸಮಯದ ಅಭಾವವನ್ನು ಎದುರಿಸುತ್ತಿರುವ ವಾಣಿಜ್ಯೋದ್ಯಮಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಇವುಗಳ ಪ್ರಯಾಣದ ಶ್ರಮವನ್ನು ನಿವಾರಿಸುವುದಲ್ಲದೇ ಅತಿ ಮುಖ್ಯ ವ್ಯಕ್ತಿಗಳು ತಮಗೆ ಬೇಕೆನಿಸಿದಾಗ ಸಂಪರ್ಕಿಸಿ ವಿಚಾರ ವಿನಿಮಯ ನಡೆಸಬಹುದು. ಒಂದು ದೇಶದ ಮಾರುಕಟ್ಟೆಯ ಬೆಳವಣಿಗೆಗಳ ಬಗೆಗೆ ಅತಿ ಶೀಘ್ರದಲಿಯೇ ಬೇರೆ ಬೇರೆ ದೇಶಗಳಲ್ಲಿಯ ಪಾಲುದಾರರಿಗೆ ತಿಳಿಸಬಹುದು. ಪದೆ ಪದೆ ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದರೆ ಪರಸ್ಪರರ ಬಗೆಗೆ ತಿಳುವಳಿಕೆ ಹೆಚ್ಚುತ್ತದೆ ಮತ್ತು ತೀರ್ಮಾನಗಳನ್ನು ಕೈಕೊಳ್ಳಲು ಸಹಾಯವಾಗುತ್ತದೆ.

ಈ ವ್ಯವಸ್ಥೆಯ ಶಿಕ್ಷಣ ರಂಗಕ್ಕೂ ಉಪಕಾರವನ್ನು ಮಾಡುತ್ತದೆ. ಅತ್ಯಂತ ಕ್ಲಿಷ್ಟಕರ ಸಮಸ್ಯೆ, ಪ್ರಮೇಯ, ಸಂಶೋಧನೆಗಳಿದ್ದರೆ ವಿದ್ಯಾರ್ಥಿಯಾಗಿದ್ದವನು ಕುಳಿತಲ್ಲಿಂದಲೇ ದೂರದೇಶದ ತನ್ನ ಗುರುವಿನೊಂದಿಗೆ ಸಂಪರ್ಕಿಸಿ ಆಡಿಯೋ, ವಿಡಿಯೋ ಮೂಲಕ ತನ್ನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿಕೊಳ್ಳಬಹುದು. ಸಂವಾದ ಹೆಚ್ಚಿದಂತೆ ಪರಿಹಾರಗಳು ಆಗುತ್ತವೆ. ಮುಕ್ತವಾದ ವಿಚಾರ ವಿನಿಮಯಕ್ಕೆ ಈ ವಿಡಿಯೋ ಸಭೆಗಳು ಉಪಯುಕ್ತವಾಗಿವೆ. ದೇಶದ ಮೂಲೆ ಮೂಲೆಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಿ ಅದಕ್ಕೆ ಅಧ್ಯಾಪಕರನ್ನು ನೇಮಿಸಿ ಅವರನ್ನು ನಿಭಾಯಿಸಲು ಇಲಾಖೆಯನ್ನು ಸೃಷ್ಟಿಸುವ ಬದಲು “ದೃಷ್ಯ ಸಂಪರ್ಕಶಾಲೆ” ಸ್ಥಾಪಿಸುವುದು ಸೂಕ್ತ. ಇಂತಹ ಕಾಲವೂ ಕೂಡ ಬರಲಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...