Home / ಲೇಖನ / ವಿಜ್ಞಾನ / ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಏಕಕಾಲಕ್ಕೆ ಧ್ವನಿಯನ್ನು ದೃಷ್ಯವನ್ನು ಕಾಣುವ ಟಿ.ವಿ. ಮಾಧ್ಯಮಗಳು ಬಂದಿದ್ದರೂ ಅವು ಸಂಪರ್ಕ ಮಾಧ್ಯಮವಾಗಲಾರದೇ ರೂಪಿತ ಕಾರ್ಯಕ್ರಮಗಳನ್ನು ಬಿತ್ತರಿಸುವ ಮಾಧ್ಯಮಗಳಾಗಿವೆ. ಆಡಿಯೋ ವಿಡಿಯೋದ ಮೂಲಕ ಸಂಪರ್ಕ ಸಾಧನದ ವ್ಯವಸ್ಥೆ ಹಾಗಲ್ಲ. ಏಕಕಾಲದಲ್ಲಿ ಸಾವಿರಾರು ಕಿ.ಮೀ. ದೂರದಲ್ಲಿಯ ವ್ಯಕ್ತಿಗಳೊಡನೆ, ಸಭೆಗಳೊಡನೆ, ಸಂಪರ್ಕ ಕಲ್ಪಿಸಿಕೊಂಡು ಪರಸ್ಪರ ಮಾತನಾಡುಪ “ವಿಡಿಯೋ ಕಾನ್ಫರೆನ್ಸ್” ಎಂಬ ಸಾಧನ ರೂಪುಗೊಂಡಿದೆ. ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಮತ್ತು ಬೃಹತ್ ಇಲಾಖೆಯ ಮುಖ್ಯಸ್ಥರು, ವೈದ್ಯಕೀಯ ವಿಜ್ಞಾನಿಗಳು ದೂರದ ದೇಶದೊಡನೆ ಸಂಪರ್ಕ ಕಲ್ಪಿಸಲು ‘ದೂರವಾಣಿ ಮೊಬೈಲ್’, ಇತ್ಯಾದಿ ಧ್ವನಿವಾಹಕಗಳಿದ್ದರೂ ಅವುಗಳು ಕೇಳುವುದಕ್ಕೆ. ಹೇಳುವುದಕ್ಕೆ ಮಾತ್ರ ಸೀಮಿತಗೊಂಡಿವೆ. ಸೀಮಿತ ಅವಧಿಯೊಳಗೆ ದೂರದ ನಿಶ್ಚಿತಪ್ರದೇಶಕ್ಕೆ ಪ್ರವಾಸ ಮಾಡಲು ಆಗಲಾರದು. ಮತ್ತು ದುಬಾರಿ ಖರ್ಚು ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲೆಂದೇ ಬಂದಿರುವ “ವಿಡಿಯೋ ಕಾನ್ಫರೆನ್ಸ್‌” ಗಳು ಆಯಾಕಾಲಕ್ಕೆ ಆಯಾ ವ್ಯಕ್ತಿಗಳೊಂದಿಗೆ, ಸಮೂಹದೊಂದಿಗೆ, ಪರಿಸರದೊಂದಿಗೆ ಸಂಪರ್ಕ ಮತ್ತು ದೃಷ್ಯವನ್ನು ಕಲ್ಪಿಸುತ್ತದೆ.

ಇಂದು ಹಲವು ರೀತಿಯ ತಂತ್ರಜ್ಞಾನಗಳು ಲಭ್ಯವಿದ್ದು ಕಂಪ್ಯೂಟರ್ ಆಧಾರಿತ ತಂತ್ರಜ್ಞಾನವು ಅತ್ಯಂತ ಸರಳವಾಗಿದ್ದು ಜನಪ್ರಿಯವಾಗುತ್ತಿದೆ. ಇದರಲ್ಲಿ ಬಳಸುವ ಉಪಕರಣಗಳೆಂದರೆ ಒಂದು ಮೈಕ್ರೋಫೋನ್ (ಧ್ವನಿಯನ್ನು ರವಾನಿಸಲು) ಒಂದು ಸಣ್ಣ ಕ್ಯಾಮರಾ (ಚಿತ್ರ ರವಾನಿಸಲು) ಮತ್ತು ಒಂದು ಕಂಪ್ಯೂಟರ್ ಹಾಗೂ ದೂರವಾಣಿ ಸಂಪರ್ಕ. ಈ ವ್ಯವಸ್ಥೆ ಕೇವಲ ಇಬ್ಬರು ವ್ಯಕ್ತಿಗಳ ನಡುವಣ ಸಂಪರ್ಕವಾಗಿರದೇ ಹಲವು ಜನರ ನಡುವಣ ಮೀಟಿಂಗ್‌ಗಳಿಗೂ ಅವಕಾಶವಿರುತ್ತದೆ. ಇಬ್ಬರು ವ್ಯಕ್ತಿಗಳ ಸಭೆಯಲ್ಲಿ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತಿದೆಯೋ ಅದೇ ರೀತಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಭೆ ಸೇರಿದ್ದಲ್ಲಿ ಒಂದು ಕಡೆಯಿಂದ ಧ್ವನಿ ಚಿತ್ರಗಳನ್ನು ಉಳಿದ ಎರಡು ಕಡೆಗಳಿಗೆ ಸಾಗಿಸುತ್ತದೆ.

ಈ ದೃಷ್ಯ ಸಂಪರ್ಕ ಸಭೆಗಳು ಸಮಯದ ಅಭಾವವನ್ನು ಎದುರಿಸುತ್ತಿರುವ ವಾಣಿಜ್ಯೋದ್ಯಮಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಇವುಗಳ ಪ್ರಯಾಣದ ಶ್ರಮವನ್ನು ನಿವಾರಿಸುವುದಲ್ಲದೇ ಅತಿ ಮುಖ್ಯ ವ್ಯಕ್ತಿಗಳು ತಮಗೆ ಬೇಕೆನಿಸಿದಾಗ ಸಂಪರ್ಕಿಸಿ ವಿಚಾರ ವಿನಿಮಯ ನಡೆಸಬಹುದು. ಒಂದು ದೇಶದ ಮಾರುಕಟ್ಟೆಯ ಬೆಳವಣಿಗೆಗಳ ಬಗೆಗೆ ಅತಿ ಶೀಘ್ರದಲಿಯೇ ಬೇರೆ ಬೇರೆ ದೇಶಗಳಲ್ಲಿಯ ಪಾಲುದಾರರಿಗೆ ತಿಳಿಸಬಹುದು. ಪದೆ ಪದೆ ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದರೆ ಪರಸ್ಪರರ ಬಗೆಗೆ ತಿಳುವಳಿಕೆ ಹೆಚ್ಚುತ್ತದೆ ಮತ್ತು ತೀರ್ಮಾನಗಳನ್ನು ಕೈಕೊಳ್ಳಲು ಸಹಾಯವಾಗುತ್ತದೆ.

ಈ ವ್ಯವಸ್ಥೆಯ ಶಿಕ್ಷಣ ರಂಗಕ್ಕೂ ಉಪಕಾರವನ್ನು ಮಾಡುತ್ತದೆ. ಅತ್ಯಂತ ಕ್ಲಿಷ್ಟಕರ ಸಮಸ್ಯೆ, ಪ್ರಮೇಯ, ಸಂಶೋಧನೆಗಳಿದ್ದರೆ ವಿದ್ಯಾರ್ಥಿಯಾಗಿದ್ದವನು ಕುಳಿತಲ್ಲಿಂದಲೇ ದೂರದೇಶದ ತನ್ನ ಗುರುವಿನೊಂದಿಗೆ ಸಂಪರ್ಕಿಸಿ ಆಡಿಯೋ, ವಿಡಿಯೋ ಮೂಲಕ ತನ್ನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿಕೊಳ್ಳಬಹುದು. ಸಂವಾದ ಹೆಚ್ಚಿದಂತೆ ಪರಿಹಾರಗಳು ಆಗುತ್ತವೆ. ಮುಕ್ತವಾದ ವಿಚಾರ ವಿನಿಮಯಕ್ಕೆ ಈ ವಿಡಿಯೋ ಸಭೆಗಳು ಉಪಯುಕ್ತವಾಗಿವೆ. ದೇಶದ ಮೂಲೆ ಮೂಲೆಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಿ ಅದಕ್ಕೆ ಅಧ್ಯಾಪಕರನ್ನು ನೇಮಿಸಿ ಅವರನ್ನು ನಿಭಾಯಿಸಲು ಇಲಾಖೆಯನ್ನು ಸೃಷ್ಟಿಸುವ ಬದಲು “ದೃಷ್ಯ ಸಂಪರ್ಕಶಾಲೆ” ಸ್ಥಾಪಿಸುವುದು ಸೂಕ್ತ. ಇಂತಹ ಕಾಲವೂ ಕೂಡ ಬರಲಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...