Home / ಲೇಖನ / ವಿಜ್ಞಾನ / ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಆಡಿಯೋ ವಿಡಿಯೋವನ್ನು ಹೊಂದಿದ ಸಂಪರ್ಕ ಸಾಧನ!

ಏಕಕಾಲಕ್ಕೆ ಧ್ವನಿಯನ್ನು ದೃಷ್ಯವನ್ನು ಕಾಣುವ ಟಿ.ವಿ. ಮಾಧ್ಯಮಗಳು ಬಂದಿದ್ದರೂ ಅವು ಸಂಪರ್ಕ ಮಾಧ್ಯಮವಾಗಲಾರದೇ ರೂಪಿತ ಕಾರ್ಯಕ್ರಮಗಳನ್ನು ಬಿತ್ತರಿಸುವ ಮಾಧ್ಯಮಗಳಾಗಿವೆ. ಆಡಿಯೋ ವಿಡಿಯೋದ ಮೂಲಕ ಸಂಪರ್ಕ ಸಾಧನದ ವ್ಯವಸ್ಥೆ ಹಾಗಲ್ಲ. ಏಕಕಾಲದಲ್ಲಿ ಸಾವಿರಾರು ಕಿ.ಮೀ. ದೂರದಲ್ಲಿಯ ವ್ಯಕ್ತಿಗಳೊಡನೆ, ಸಭೆಗಳೊಡನೆ, ಸಂಪರ್ಕ ಕಲ್ಪಿಸಿಕೊಂಡು ಪರಸ್ಪರ ಮಾತನಾಡುಪ “ವಿಡಿಯೋ ಕಾನ್ಫರೆನ್ಸ್” ಎಂಬ ಸಾಧನ ರೂಪುಗೊಂಡಿದೆ. ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಮತ್ತು ಬೃಹತ್ ಇಲಾಖೆಯ ಮುಖ್ಯಸ್ಥರು, ವೈದ್ಯಕೀಯ ವಿಜ್ಞಾನಿಗಳು ದೂರದ ದೇಶದೊಡನೆ ಸಂಪರ್ಕ ಕಲ್ಪಿಸಲು ‘ದೂರವಾಣಿ ಮೊಬೈಲ್’, ಇತ್ಯಾದಿ ಧ್ವನಿವಾಹಕಗಳಿದ್ದರೂ ಅವುಗಳು ಕೇಳುವುದಕ್ಕೆ. ಹೇಳುವುದಕ್ಕೆ ಮಾತ್ರ ಸೀಮಿತಗೊಂಡಿವೆ. ಸೀಮಿತ ಅವಧಿಯೊಳಗೆ ದೂರದ ನಿಶ್ಚಿತಪ್ರದೇಶಕ್ಕೆ ಪ್ರವಾಸ ಮಾಡಲು ಆಗಲಾರದು. ಮತ್ತು ದುಬಾರಿ ಖರ್ಚು ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲೆಂದೇ ಬಂದಿರುವ “ವಿಡಿಯೋ ಕಾನ್ಫರೆನ್ಸ್‌” ಗಳು ಆಯಾಕಾಲಕ್ಕೆ ಆಯಾ ವ್ಯಕ್ತಿಗಳೊಂದಿಗೆ, ಸಮೂಹದೊಂದಿಗೆ, ಪರಿಸರದೊಂದಿಗೆ ಸಂಪರ್ಕ ಮತ್ತು ದೃಷ್ಯವನ್ನು ಕಲ್ಪಿಸುತ್ತದೆ.

ಇಂದು ಹಲವು ರೀತಿಯ ತಂತ್ರಜ್ಞಾನಗಳು ಲಭ್ಯವಿದ್ದು ಕಂಪ್ಯೂಟರ್ ಆಧಾರಿತ ತಂತ್ರಜ್ಞಾನವು ಅತ್ಯಂತ ಸರಳವಾಗಿದ್ದು ಜನಪ್ರಿಯವಾಗುತ್ತಿದೆ. ಇದರಲ್ಲಿ ಬಳಸುವ ಉಪಕರಣಗಳೆಂದರೆ ಒಂದು ಮೈಕ್ರೋಫೋನ್ (ಧ್ವನಿಯನ್ನು ರವಾನಿಸಲು) ಒಂದು ಸಣ್ಣ ಕ್ಯಾಮರಾ (ಚಿತ್ರ ರವಾನಿಸಲು) ಮತ್ತು ಒಂದು ಕಂಪ್ಯೂಟರ್ ಹಾಗೂ ದೂರವಾಣಿ ಸಂಪರ್ಕ. ಈ ವ್ಯವಸ್ಥೆ ಕೇವಲ ಇಬ್ಬರು ವ್ಯಕ್ತಿಗಳ ನಡುವಣ ಸಂಪರ್ಕವಾಗಿರದೇ ಹಲವು ಜನರ ನಡುವಣ ಮೀಟಿಂಗ್‌ಗಳಿಗೂ ಅವಕಾಶವಿರುತ್ತದೆ. ಇಬ್ಬರು ವ್ಯಕ್ತಿಗಳ ಸಭೆಯಲ್ಲಿ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತಿದೆಯೋ ಅದೇ ರೀತಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಭೆ ಸೇರಿದ್ದಲ್ಲಿ ಒಂದು ಕಡೆಯಿಂದ ಧ್ವನಿ ಚಿತ್ರಗಳನ್ನು ಉಳಿದ ಎರಡು ಕಡೆಗಳಿಗೆ ಸಾಗಿಸುತ್ತದೆ.

ಈ ದೃಷ್ಯ ಸಂಪರ್ಕ ಸಭೆಗಳು ಸಮಯದ ಅಭಾವವನ್ನು ಎದುರಿಸುತ್ತಿರುವ ವಾಣಿಜ್ಯೋದ್ಯಮಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಇವುಗಳ ಪ್ರಯಾಣದ ಶ್ರಮವನ್ನು ನಿವಾರಿಸುವುದಲ್ಲದೇ ಅತಿ ಮುಖ್ಯ ವ್ಯಕ್ತಿಗಳು ತಮಗೆ ಬೇಕೆನಿಸಿದಾಗ ಸಂಪರ್ಕಿಸಿ ವಿಚಾರ ವಿನಿಮಯ ನಡೆಸಬಹುದು. ಒಂದು ದೇಶದ ಮಾರುಕಟ್ಟೆಯ ಬೆಳವಣಿಗೆಗಳ ಬಗೆಗೆ ಅತಿ ಶೀಘ್ರದಲಿಯೇ ಬೇರೆ ಬೇರೆ ದೇಶಗಳಲ್ಲಿಯ ಪಾಲುದಾರರಿಗೆ ತಿಳಿಸಬಹುದು. ಪದೆ ಪದೆ ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದರೆ ಪರಸ್ಪರರ ಬಗೆಗೆ ತಿಳುವಳಿಕೆ ಹೆಚ್ಚುತ್ತದೆ ಮತ್ತು ತೀರ್ಮಾನಗಳನ್ನು ಕೈಕೊಳ್ಳಲು ಸಹಾಯವಾಗುತ್ತದೆ.

ಈ ವ್ಯವಸ್ಥೆಯ ಶಿಕ್ಷಣ ರಂಗಕ್ಕೂ ಉಪಕಾರವನ್ನು ಮಾಡುತ್ತದೆ. ಅತ್ಯಂತ ಕ್ಲಿಷ್ಟಕರ ಸಮಸ್ಯೆ, ಪ್ರಮೇಯ, ಸಂಶೋಧನೆಗಳಿದ್ದರೆ ವಿದ್ಯಾರ್ಥಿಯಾಗಿದ್ದವನು ಕುಳಿತಲ್ಲಿಂದಲೇ ದೂರದೇಶದ ತನ್ನ ಗುರುವಿನೊಂದಿಗೆ ಸಂಪರ್ಕಿಸಿ ಆಡಿಯೋ, ವಿಡಿಯೋ ಮೂಲಕ ತನ್ನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿಕೊಳ್ಳಬಹುದು. ಸಂವಾದ ಹೆಚ್ಚಿದಂತೆ ಪರಿಹಾರಗಳು ಆಗುತ್ತವೆ. ಮುಕ್ತವಾದ ವಿಚಾರ ವಿನಿಮಯಕ್ಕೆ ಈ ವಿಡಿಯೋ ಸಭೆಗಳು ಉಪಯುಕ್ತವಾಗಿವೆ. ದೇಶದ ಮೂಲೆ ಮೂಲೆಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಿ ಅದಕ್ಕೆ ಅಧ್ಯಾಪಕರನ್ನು ನೇಮಿಸಿ ಅವರನ್ನು ನಿಭಾಯಿಸಲು ಇಲಾಖೆಯನ್ನು ಸೃಷ್ಟಿಸುವ ಬದಲು “ದೃಷ್ಯ ಸಂಪರ್ಕಶಾಲೆ” ಸ್ಥಾಪಿಸುವುದು ಸೂಕ್ತ. ಇಂತಹ ಕಾಲವೂ ಕೂಡ ಬರಲಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...