ಒಂದೇ ಒಂದು ಬಿಳಿಯ ಕೂದಲು

ಒಂದೇ ಒಂದು ಬಿಳಿಯ ಕೂದಲು
ಬಂದಿತೆಂದು ಏಕಿಷ್ಟು
ಬೇಜಾರ ಮಾಡಿಕೂಳ್ಳುವೆ?|
ನನಗೆ ನೀ ಇನ್ನೂ ಹದಿನಾರರ ಚೆಲುವೆ
ಪ್ರೇಮದಲಿ ಕಾಣಿಸುವುದೇ ವಯಸ್ಸು?||

ನಿನ್ನ ಒಲವು ನಿನ್ನ ಚೆಲುವಿಗಿಂತ
ದಿನೇದಿನೇ ಎತ್ತರೆತ್ತರಕ್ಕೆ ಬೆಳೆಯುತಿದೆ|
ನಿನ್ನ ಸೌಂದರ್ಯ ತರುಲತೆಯಂತೆ ಚಿಗುರಿ
ನನ್ನ ಮನಕೆ ಮುದವ ನೀಡುತಿದೆ
ಬಿಡು ಚಿಂತೆಮಾಡುವುದ ನೀನು||

ಮುಪ್ಪು ದೇಹಕೆನೇ ಹೊರತು
ಮನಸಿಗಂತು ಅಲ್ಲವೇ ಅಲ್ಲ|
ಒಲಿದ ಹೃದಯಗಳಿಗೆ
ಪ್ರೀತಿ ಪ್ರೇಮ ಸದಾ ಹೊಸದು|
ಬಣ್ಣ ಬಣ್ಣದೋಕಳಿಯ ಹಾಗೆ
ನವನವೀನ ವರ್ಣಮಯ|
ಹೂ ದುಂಬಿಯೆರಡು ಹೂಬನದಿ
ಮಧು ಜೇನ ಹೀರಿದಂತೆ
ಜೀವನ ಸವಿಯ ಸವಿಯೋಣ||

ಬಂದರೆ ಬರಲಿಬಿಡು
ಒಂದೆರಡು ಬೆಳ್ಳಿ ಬಿಳಿ ಕೂದಲು|
ಹಾಗೆ ಒಂದೆರಡು ಕೆನ್ನೆ ಮೇಲೆ ಸುಕ್ಕು
ಕಣ್ಣ ಕಾಡಿಗೆ ಸುತ್ತ ಒಂದಿಷ್ಟು ಕಪ್ಪು|
ಮಗನಿಗೆ ಬರುತಲಿದೆ ಕುಡಿಮೀಸೆ
ನನಗೂ ಬಿಳಿಯಾಗುತಿದೆ ಹಳೇ ಮೀಸೆ
ಜೊತೆ ಜೊತೆಗೆ ಬೊಳಾಗುತಿದೆ ತಲೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ಬಾಂಬು ದುರಂತ…
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೭

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…