ಇರು ನೀನು ಇಲ್ಲದಿರು ನೀನು

ಇರು ನೀನು ಇಲ್ಲದಿರು ನೀನು
ಸುತ್ತುವೆ ನಿನ್ನಗುಡಿಯ|
ಕೊಡು ನೀನು ಕೊಡದಿರೂ ನೀನು
ಎಂದೆಂದಿಗೂ ನೀನೇ ನನ್ನೊಡೆಯ||

ಸೃಷ್ಟಿಸಿರುವೆ ಈ ಸುಂದರ ಜಗವ
ಕೊಟ್ಟಿರುವೆ ಈ ಎರಡು ಕೈಗಳ
ಕೊಡು ನೀನು ಸದಾ ಧರ್ಮಮಾರ್ಗದಿ
ದುಡಿದು ಉಣ್ಣುವಾ ಛಲವ||

ಕೊಟ್ಟಿರುವೆ ಹೃದಯವನು
ಇತ್ತು ಸುಗುಣ ಶ್ರೀಮಂತಿಕೆಯ
ಬಿತ್ತುನೀ ವಿಶಾಲ ಭಾವನೆಯ
ಎಲ್ಲರೊಳೊಂದಾಗಿ ಬಾಳುವಾತನವ||

ಕೊಟ್ಟಿರುವೆ ಕಣ್ಣುಗಳ
ಇಟ್ಟಿರುವೆ ಬೆಳಕೆಂಬ ದೃಷ್ಟಿಯಾ
ಕೊಡು ನೀನು ಸದಾ ಗೆಲ್ಲುವ
ಜೀವನದ ದೂರದೃಷ್ಟೀಯ||

ಕೊಟ್ಟಿರುವೆ ಚಿತ್ತವನು, ಅದರಿಂದ
ಕೆತ್ತೆನ್ನ ಸುಂದರ ಮೂರುತಿಯ|
ಕೊಟ್ಟು ಕಷ್ಟದನುಭವಗಳ ಪೆಟ್ಟ
ಆನಂದದಿ ಅನುಭವಿಸಿ ರೂಪಗುಳ್ಳುವೆ
ನಿನ್ನಾಸೆಯಂದದಿ ಜಗದಿ|
ಹತ್ತಾರು ಹಿರಿಯರು ಮೆಚ್ಚುವಂದದಿ ಮುದದಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ಚೆಲ್ಲುವ ಜೀವಿಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೧

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…