ಇರು ನೀನು ಇಲ್ಲದಿರು ನೀನು

ಇರು ನೀನು ಇಲ್ಲದಿರು ನೀನು
ಸುತ್ತುವೆ ನಿನ್ನಗುಡಿಯ|
ಕೊಡು ನೀನು ಕೊಡದಿರೂ ನೀನು
ಎಂದೆಂದಿಗೂ ನೀನೇ ನನ್ನೊಡೆಯ||

ಸೃಷ್ಟಿಸಿರುವೆ ಈ ಸುಂದರ ಜಗವ
ಕೊಟ್ಟಿರುವೆ ಈ ಎರಡು ಕೈಗಳ
ಕೊಡು ನೀನು ಸದಾ ಧರ್ಮಮಾರ್ಗದಿ
ದುಡಿದು ಉಣ್ಣುವಾ ಛಲವ||

ಕೊಟ್ಟಿರುವೆ ಹೃದಯವನು
ಇತ್ತು ಸುಗುಣ ಶ್ರೀಮಂತಿಕೆಯ
ಬಿತ್ತುನೀ ವಿಶಾಲ ಭಾವನೆಯ
ಎಲ್ಲರೊಳೊಂದಾಗಿ ಬಾಳುವಾತನವ||

ಕೊಟ್ಟಿರುವೆ ಕಣ್ಣುಗಳ
ಇಟ್ಟಿರುವೆ ಬೆಳಕೆಂಬ ದೃಷ್ಟಿಯಾ
ಕೊಡು ನೀನು ಸದಾ ಗೆಲ್ಲುವ
ಜೀವನದ ದೂರದೃಷ್ಟೀಯ||

ಕೊಟ್ಟಿರುವೆ ಚಿತ್ತವನು, ಅದರಿಂದ
ಕೆತ್ತೆನ್ನ ಸುಂದರ ಮೂರುತಿಯ|
ಕೊಟ್ಟು ಕಷ್ಟದನುಭವಗಳ ಪೆಟ್ಟ
ಆನಂದದಿ ಅನುಭವಿಸಿ ರೂಪಗುಳ್ಳುವೆ
ನಿನ್ನಾಸೆಯಂದದಿ ಜಗದಿ|
ಹತ್ತಾರು ಹಿರಿಯರು ಮೆಚ್ಚುವಂದದಿ ಮುದದಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ಚೆಲ್ಲುವ ಜೀವಿಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೧

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys