ಅನುಕರುಣೆಯೆಂಬ

ಅನುಕರುಣೆಯೆಂಬ
ಬಿಸಿಲಗುದುರೆಯನೇರಿ |
ಸಮಯದಿಂದೆ ಓಡುತಿರುವ
ಅಲ್ಪ ಬುದ್ದಿಮತಿಗಳೇ|
ಜೀವನದ ಮೌಲ್ಯಮರೆತಿರಿ
ಅದನೇ ನಿಮ್ಮ ಮಕ್ಕಳಿಗೂ ಕಲಿಸಿ
ಮುಂದೆಂದು ಕೊರಗದಿರಿ||

ಹೊಟ್ಟೆಹೊರೆವ ವಿದ್ಯೆ ಕಲಿತು
ಜೀವನದ ವಿದ್ಯೆ ಮರೆತು|
ಹಣದ ಹುಚ್ಚು ಹೆಚ್ಚಿ
ಹೆಚ್ಚೆಚ್ಚುಗಳಿಸ ಬಯಸಿ|
ಆನ್ನ ನಿದ್ರಾದಿಗಳ ತ್ಯಜಿಸಿ
ದುಡಿದು ಏನನು ಸಾಧಿಸುವಿರಿ? |
ಸಮಾಧಾನ ವಿರದ
ಜೀವನವನೇಕೆ ನಡೆಸುವಿರಿ|
ಮಾನವೀಯತೆ, ಬಂಧು ಬಳಗವಿಲ್ಲದ
ಸಮಾಜವನೇಕೆ ಸೃಷ್ಟಿಸುವಿರಿ||

ತಿನ್ನುವುದು ಹಿಡಿ ಅನ್ನ
ಉಡುವುದು ಗೇಣು ಬಟ್ಟೆ|
ಬದುಕುವುದು ಕೆಲವೇದಿನ
ಸಾವು ವಾರದಲ್ಲೊಂದು ದಿನ
ಆದರೂ ಅದೇತಕೆ ಅತೃಪ್ತಿ
ಎಲ್ಲಾ ನನಗೇ ಬೇಕೆಂಬ ದುರಾಸೆಬುದ್ಧಿ||

ಎಣ್ಣೆ ಹಚ್ಚಿ ಮಣ್ಣಲಿ ಉರುಳಿದರೆ
ಹೆಚ್ಚೇನು ಲಾಭವಿರದು|
ಬದುಕಿ, ಬದುಕಲು ಬಿಡಿ
ಎಂದಿದೆ ಸುಧರ್ಮ|
ಕಾಲನ ಗೆಲ್ಲುವೆನೆಂದರೆ
ಅದು ನಿನ್ನ ಕರ್ಮ |
ಜೀರ್ಣಿಸುವಷ್ಟು ಉಣಿಸಿ
ದಕ್ಕುವಷ್ಟು ಗಳಿಸಿ
ಮಕ್ಕಳಿಗೆ ಕಷ್ಟಪಟ್ಟು
ದುಡಿದು ಬದುಕುವುದ ಕಲಿಸಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಶರೀರ : ವಿಸ್ಮಯಗಳ ಆಗರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys