ಅನುಕರುಣೆಯೆಂಬ

ಅನುಕರುಣೆಯೆಂಬ
ಬಿಸಿಲಗುದುರೆಯನೇರಿ |
ಸಮಯದಿಂದೆ ಓಡುತಿರುವ
ಅಲ್ಪ ಬುದ್ದಿಮತಿಗಳೇ|
ಜೀವನದ ಮೌಲ್ಯಮರೆತಿರಿ
ಅದನೇ ನಿಮ್ಮ ಮಕ್ಕಳಿಗೂ ಕಲಿಸಿ
ಮುಂದೆಂದು ಕೊರಗದಿರಿ||

ಹೊಟ್ಟೆಹೊರೆವ ವಿದ್ಯೆ ಕಲಿತು
ಜೀವನದ ವಿದ್ಯೆ ಮರೆತು|
ಹಣದ ಹುಚ್ಚು ಹೆಚ್ಚಿ
ಹೆಚ್ಚೆಚ್ಚುಗಳಿಸ ಬಯಸಿ|
ಆನ್ನ ನಿದ್ರಾದಿಗಳ ತ್ಯಜಿಸಿ
ದುಡಿದು ಏನನು ಸಾಧಿಸುವಿರಿ? |
ಸಮಾಧಾನ ವಿರದ
ಜೀವನವನೇಕೆ ನಡೆಸುವಿರಿ|
ಮಾನವೀಯತೆ, ಬಂಧು ಬಳಗವಿಲ್ಲದ
ಸಮಾಜವನೇಕೆ ಸೃಷ್ಟಿಸುವಿರಿ||

ತಿನ್ನುವುದು ಹಿಡಿ ಅನ್ನ
ಉಡುವುದು ಗೇಣು ಬಟ್ಟೆ|
ಬದುಕುವುದು ಕೆಲವೇದಿನ
ಸಾವು ವಾರದಲ್ಲೊಂದು ದಿನ
ಆದರೂ ಅದೇತಕೆ ಅತೃಪ್ತಿ
ಎಲ್ಲಾ ನನಗೇ ಬೇಕೆಂಬ ದುರಾಸೆಬುದ್ಧಿ||

ಎಣ್ಣೆ ಹಚ್ಚಿ ಮಣ್ಣಲಿ ಉರುಳಿದರೆ
ಹೆಚ್ಚೇನು ಲಾಭವಿರದು|
ಬದುಕಿ, ಬದುಕಲು ಬಿಡಿ
ಎಂದಿದೆ ಸುಧರ್ಮ|
ಕಾಲನ ಗೆಲ್ಲುವೆನೆಂದರೆ
ಅದು ನಿನ್ನ ಕರ್ಮ |
ಜೀರ್ಣಿಸುವಷ್ಟು ಉಣಿಸಿ
ದಕ್ಕುವಷ್ಟು ಗಳಿಸಿ
ಮಕ್ಕಳಿಗೆ ಕಷ್ಟಪಟ್ಟು
ದುಡಿದು ಬದುಕುವುದ ಕಲಿಸಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಶರೀರ : ವಿಸ್ಮಯಗಳ ಆಗರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…