ಕನ್ನಡದ ಬಾವುಟ

ಇರಲಿ ನಮ್ಮೆಲ್ಲರ ಮನೆಯಲಿ
ಕನ್ನಡದ ಬಾವುಟ|
ಹಾರಲೆಲ್ಲರ ಮನದಲಿ
ಅದುವೆ ಪಟಪಟ|
ಕನ್ನಡವೆಂದರೆ ಅದು
ಬರಿಯ ಭಾಷೆಯಲ್ಲ
ನಮ್ಮನಿಮ್ಮೆಲ್ಲರ ಮಾತೃಭಾಷೆ|
ಅತ್ಯಧಿಕ ಜ್ಞಾನಪೀಠಗಳ
ತಂದುಕೊಟ್ಟಾ ಭಾಷೆ||

ಆಡುವಾ ಮಾತಿನಂತೆಯೇ
ಬರೆಯುವಾ ಭಾಷೆ|
ಬರೆದರೆ ಮುತ್ತು ಮಣಿಗಳ
ಪೋಣಿಸಿದಂತೆ ಕಾಣುವಾ ಭಾಷೆ||
ಕರ್ನಾಟಕ ಸಂಗೀತಕೆ
ಇದುವೆ ಮಾತೃಭಾಷೆ||
ಪ್ರತಿ ವರ್ಷ ಅತೀಹೆಚ್ಚು
ಹೊಸಾ ಹೊಸ
ಪದಗಳು ಹುಟ್ಟಿಕೊಳ್ಳುವ ಭಾಷೆ||

ಕನ್ನಡವೊಂದು ಸುಮಧುರ ಭಾಷೆ
ಕನ್ನಡವೊಂದು ಸುಲಲಿತ ಭಾಷೆ |
ಕಸ್ತೂರಿ ಕನ್ನಡ ಈ ನಮ್ಮ ಭಾಷೆ
ಕವಿಜನ ಶ್ರೇಷ್ಟರು ಬೆಳೆಸಿದಾಭಾಷೆ
ದಾಸರು ಶರಣರ ನೆಚ್ಚಿನ ಭಾಷೆ||

ನಮ್ಮ ಬಾವುಟದಲ್ಲಿದೆ
ಕೆಂಪು ಹಳದಿಯ ಬಣ್ಣ|
ಕೆಂಪು ಕನ್ನಡಾಂಬೆಯ
ಹಣೆಯ ಕುಂಕುಮ ತಿಲಕ |
ಹಳದಿ ಕನ್ನಡಾಂಬೆಯ ಕೆನ್ನೆಗಚ್ಚುವ ಅರಿಶಿಣ
ಇಂಥ ವಿಶೇಷವೀ ಬಾವುಟ||

ಹುಟ್ಟಲಿ ಹತ್ತಾರು ರಾಷ್ರ್ಟಕವಿಗಳು
ಹುಟ್ಟಲಿ ಹತ್ತಾರು ವರಕವಿಗಳು|
ಬೆಳಗಲಿ ನೂರಾರು ಸಮಗ್ರ ಸಾಹಿತಿಗಳು
ಬರಲಿ ಇನ್ನತ್ತಾರು ಜ್ಞಾನಪೀಠ ಪ್ರಶಸ್ತಿಗಳು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವೆಂಬರ್ ನಾಯಕರು
Next post ಪಿಸುಮಾತು

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…