ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ

ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ
ನಾ ಎಡವುವಲ್ಲಿ, ನಡೆಯುವಾಗ ಹೆಜ್ಜೆ ತಪ್ಪಿದಲ್ಲಿ|
ಅನ್ಯರ ಅಂತರಂಗ ಅರಿಯದೆ ಅವರ ಪ್ರಶ್ನಿಸುವಲ್ಲಿ
ಅವರ ಆಳವ ತಿಳಿಯದೆ
ಮೂರ್ಖತನದಿ ಅಳೆಯುವಲ್ಲಿ||

ಧೈರ್ಯ ತುಂಬುತ್ತಿರು
ನೀನು ನಾ ಅಧೈರ್ಯನಾಗಿ ನಿಂತಲ್ಲಿ|
ದಾರಿ ತೋರುತಿರು ನೀನು
ನಾ ದಾರಿ ತಪ್ಪಿದಲ್ಲಿ|
ತುಂಬುವಿಶ್ವಾಸ ನೀ ತುಂಬುತಿರು
ನಾ ಸೋತು ಕೂತಲ್ಲಿ||

ಕಷ್ಟಗಳ ಗೆಲ್ಲುವ ಶಕ್ತಿಯ ಕೊಡು
ವಿಧಿಕಷ್ಟಗಳ ಸರಣಿ ಬಂದಲ್ಲಿ|
ಬುದ್ಧಿ ವಿಚಾರವ ಕೊಡು ನನ್ನ
ಬುದ್ಧಿ ಮತಿ ಶೂನ್ಯವಾದಲ್ಲಿ|
ಶಿಕ್ಷಿಸು ನಾ ನಿನ್ನ ಮಾತನ್ನೇ
ಕೇಳದಾದ ಪಕ್ಷದಲ್ಲಿ||

ದಯೆತೋರು ನೀ
ಬದುಕು ಬೇಡವೆನಿಸಿದಲ್ಲಿ|
ಅನ್ಯ ಜೀವಿಗಳಿಗೆ ಹೋಲಿಸಿ
ಮಾನವ ಜನ್ಮದ ಮಹಿಮೆಯ ತಿಳಿಸು,
ಮಾನವ ಧರ್ಮವ ಕಲಿಸು|
ಆತ್ಮಹತ್ಯೆಯ ಪಾಪ ಕೃತ್ಯದ
ಕರ್ಮವನು ತಿಳಿಸೇಳು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವದ ಬೃಹತ್ ವಿಮಾನ ನಿಲ್ದಾಣ : ಕೌಲಲಂಪುರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೪

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys