ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ

ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ
ನಾ ಎಡವುವಲ್ಲಿ, ನಡೆಯುವಾಗ ಹೆಜ್ಜೆ ತಪ್ಪಿದಲ್ಲಿ|
ಅನ್ಯರ ಅಂತರಂಗ ಅರಿಯದೆ ಅವರ ಪ್ರಶ್ನಿಸುವಲ್ಲಿ
ಅವರ ಆಳವ ತಿಳಿಯದೆ
ಮೂರ್ಖತನದಿ ಅಳೆಯುವಲ್ಲಿ||

ಧೈರ್ಯ ತುಂಬುತ್ತಿರು
ನೀನು ನಾ ಅಧೈರ್ಯನಾಗಿ ನಿಂತಲ್ಲಿ|
ದಾರಿ ತೋರುತಿರು ನೀನು
ನಾ ದಾರಿ ತಪ್ಪಿದಲ್ಲಿ|
ತುಂಬುವಿಶ್ವಾಸ ನೀ ತುಂಬುತಿರು
ನಾ ಸೋತು ಕೂತಲ್ಲಿ||

ಕಷ್ಟಗಳ ಗೆಲ್ಲುವ ಶಕ್ತಿಯ ಕೊಡು
ವಿಧಿಕಷ್ಟಗಳ ಸರಣಿ ಬಂದಲ್ಲಿ|
ಬುದ್ಧಿ ವಿಚಾರವ ಕೊಡು ನನ್ನ
ಬುದ್ಧಿ ಮತಿ ಶೂನ್ಯವಾದಲ್ಲಿ|
ಶಿಕ್ಷಿಸು ನಾ ನಿನ್ನ ಮಾತನ್ನೇ
ಕೇಳದಾದ ಪಕ್ಷದಲ್ಲಿ||

ದಯೆತೋರು ನೀ
ಬದುಕು ಬೇಡವೆನಿಸಿದಲ್ಲಿ|
ಅನ್ಯ ಜೀವಿಗಳಿಗೆ ಹೋಲಿಸಿ
ಮಾನವ ಜನ್ಮದ ಮಹಿಮೆಯ ತಿಳಿಸು,
ಮಾನವ ಧರ್ಮವ ಕಲಿಸು|
ಆತ್ಮಹತ್ಯೆಯ ಪಾಪ ಕೃತ್ಯದ
ಕರ್ಮವನು ತಿಳಿಸೇಳು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವದ ಬೃಹತ್ ವಿಮಾನ ನಿಲ್ದಾಣ : ಕೌಲಲಂಪುರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೪

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…