ರಾಮನಾಥನ ವರದಿ

ಅಂಥಿಂಥವನಲ್ಲ ರಾಮನಾಥ
ಕಾರ್ಬನ್ ಕಾಪಿ ವರದಿಗಾರ,
ಎಂಥೆಂಥವರನ್ನೋ ನುಂಗಿ ನೀರು ಕುಡಿದವನು
ಒಂದರ್ಥದಲ್ಲಿ ಕ್ರಾಂತಿಕಾರ.

ಅಸಾಧ್ಯ ಸತ್ಯವಂತ ರಾಮನಾಥ
ನಾ ಹೇಳಿದ್ದನ್ನೇ ಕಕ್ಕಿದ,
ಪದ ಅಳಿಸದೆ ಪದ ಬಳಸದೆ
ಹೊಸಾ ಹೊಸಾ ಅರ್ಥ ಬೆಳೆದ.

ಮಹಾಬುದ್ಧಿವಂತ ರಾಮನಾಥ
ವಿರಾಮ ಚಿಹ್ನೆ ಮಾತ್ರ ತೆಗೆದ,
ಕಾಮ ಇದ್ದಲ್ಲಿ ಫುಲ್‌ಸ್ಟಾಪ್‌ ಇಟ್ಟು
ಸೆಮಿಕೋಲನ್ನಷ್ಟೆ ನುಂಗಿದ.

ಒಂದು ಪದವನ್ನು ನಕ್ಕು ಉಚ್ಚರಿಸಿ
ಮತ್ತೊಂದನ್ನು ಬಿಕ್ಕಿದ,
ಪದಗಳ ಮಧ್ಯೆ ಅಂತರ ಹೆಚ್ಚಿಸಿ
ಬೆಂತರಗಳನ್ನೆ ಇರುಕಿದ.

ರಾಮನಾಥ ಬಹಳ ಹಸ್ತಕುಶಲಿ
ದೊಡ್ಡ ಪವಾಡಗಾರ,
ಬೀಗ ಮುಟ್ಟದೆ ಬಾಗಿಲು ಒಡೆಯದೆ
ಭಾರಿ ಕಳುವನ್ನೆ ಮಾಡಿದ.

ಕಿವಿ ಕಣ್ಣು ನಾಲಿಗೆ ಎಲ್ಲವೂ ಇರುತ್ತೆ
ಉಸಿರೇ ಪರಾರಿಯಾಯಿತು.
ಮುಟ್ಟಿದ್ದೇ ತಡೆ ರಾಮನಾಥ
ಸತ್ತೇ ಎಂದಿತು ಮಾತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಹುತ್ತರಿ ಹಾಡು

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…