ರಾಮನಾಥನ ವರದಿ

ಅಂಥಿಂಥವನಲ್ಲ ರಾಮನಾಥ
ಕಾರ್ಬನ್ ಕಾಪಿ ವರದಿಗಾರ,
ಎಂಥೆಂಥವರನ್ನೋ ನುಂಗಿ ನೀರು ಕುಡಿದವನು
ಒಂದರ್ಥದಲ್ಲಿ ಕ್ರಾಂತಿಕಾರ.

ಅಸಾಧ್ಯ ಸತ್ಯವಂತ ರಾಮನಾಥ
ನಾ ಹೇಳಿದ್ದನ್ನೇ ಕಕ್ಕಿದ,
ಪದ ಅಳಿಸದೆ ಪದ ಬಳಸದೆ
ಹೊಸಾ ಹೊಸಾ ಅರ್ಥ ಬೆಳೆದ.

ಮಹಾಬುದ್ಧಿವಂತ ರಾಮನಾಥ
ವಿರಾಮ ಚಿಹ್ನೆ ಮಾತ್ರ ತೆಗೆದ,
ಕಾಮ ಇದ್ದಲ್ಲಿ ಫುಲ್‌ಸ್ಟಾಪ್‌ ಇಟ್ಟು
ಸೆಮಿಕೋಲನ್ನಷ್ಟೆ ನುಂಗಿದ.

ಒಂದು ಪದವನ್ನು ನಕ್ಕು ಉಚ್ಚರಿಸಿ
ಮತ್ತೊಂದನ್ನು ಬಿಕ್ಕಿದ,
ಪದಗಳ ಮಧ್ಯೆ ಅಂತರ ಹೆಚ್ಚಿಸಿ
ಬೆಂತರಗಳನ್ನೆ ಇರುಕಿದ.

ರಾಮನಾಥ ಬಹಳ ಹಸ್ತಕುಶಲಿ
ದೊಡ್ಡ ಪವಾಡಗಾರ,
ಬೀಗ ಮುಟ್ಟದೆ ಬಾಗಿಲು ಒಡೆಯದೆ
ಭಾರಿ ಕಳುವನ್ನೆ ಮಾಡಿದ.

ಕಿವಿ ಕಣ್ಣು ನಾಲಿಗೆ ಎಲ್ಲವೂ ಇರುತ್ತೆ
ಉಸಿರೇ ಪರಾರಿಯಾಯಿತು.
ಮುಟ್ಟಿದ್ದೇ ತಡೆ ರಾಮನಾಥ
ಸತ್ತೇ ಎಂದಿತು ಮಾತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಹುತ್ತರಿ ಹಾಡು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…