ರಾಮನಾಥನ ವರದಿ

ಅಂಥಿಂಥವನಲ್ಲ ರಾಮನಾಥ
ಕಾರ್ಬನ್ ಕಾಪಿ ವರದಿಗಾರ,
ಎಂಥೆಂಥವರನ್ನೋ ನುಂಗಿ ನೀರು ಕುಡಿದವನು
ಒಂದರ್ಥದಲ್ಲಿ ಕ್ರಾಂತಿಕಾರ.

ಅಸಾಧ್ಯ ಸತ್ಯವಂತ ರಾಮನಾಥ
ನಾ ಹೇಳಿದ್ದನ್ನೇ ಕಕ್ಕಿದ,
ಪದ ಅಳಿಸದೆ ಪದ ಬಳಸದೆ
ಹೊಸಾ ಹೊಸಾ ಅರ್ಥ ಬೆಳೆದ.

ಮಹಾಬುದ್ಧಿವಂತ ರಾಮನಾಥ
ವಿರಾಮ ಚಿಹ್ನೆ ಮಾತ್ರ ತೆಗೆದ,
ಕಾಮ ಇದ್ದಲ್ಲಿ ಫುಲ್‌ಸ್ಟಾಪ್‌ ಇಟ್ಟು
ಸೆಮಿಕೋಲನ್ನಷ್ಟೆ ನುಂಗಿದ.

ಒಂದು ಪದವನ್ನು ನಕ್ಕು ಉಚ್ಚರಿಸಿ
ಮತ್ತೊಂದನ್ನು ಬಿಕ್ಕಿದ,
ಪದಗಳ ಮಧ್ಯೆ ಅಂತರ ಹೆಚ್ಚಿಸಿ
ಬೆಂತರಗಳನ್ನೆ ಇರುಕಿದ.

ರಾಮನಾಥ ಬಹಳ ಹಸ್ತಕುಶಲಿ
ದೊಡ್ಡ ಪವಾಡಗಾರ,
ಬೀಗ ಮುಟ್ಟದೆ ಬಾಗಿಲು ಒಡೆಯದೆ
ಭಾರಿ ಕಳುವನ್ನೆ ಮಾಡಿದ.

ಕಿವಿ ಕಣ್ಣು ನಾಲಿಗೆ ಎಲ್ಲವೂ ಇರುತ್ತೆ
ಉಸಿರೇ ಪರಾರಿಯಾಯಿತು.
ಮುಟ್ಟಿದ್ದೇ ತಡೆ ರಾಮನಾಥ
ಸತ್ತೇ ಎಂದಿತು ಮಾತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಹುತ್ತರಿ ಹಾಡು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…