ರಾಮನಾಥನ ವರದಿ

ಅಂಥಿಂಥವನಲ್ಲ ರಾಮನಾಥ
ಕಾರ್ಬನ್ ಕಾಪಿ ವರದಿಗಾರ,
ಎಂಥೆಂಥವರನ್ನೋ ನುಂಗಿ ನೀರು ಕುಡಿದವನು
ಒಂದರ್ಥದಲ್ಲಿ ಕ್ರಾಂತಿಕಾರ.

ಅಸಾಧ್ಯ ಸತ್ಯವಂತ ರಾಮನಾಥ
ನಾ ಹೇಳಿದ್ದನ್ನೇ ಕಕ್ಕಿದ,
ಪದ ಅಳಿಸದೆ ಪದ ಬಳಸದೆ
ಹೊಸಾ ಹೊಸಾ ಅರ್ಥ ಬೆಳೆದ.

ಮಹಾಬುದ್ಧಿವಂತ ರಾಮನಾಥ
ವಿರಾಮ ಚಿಹ್ನೆ ಮಾತ್ರ ತೆಗೆದ,
ಕಾಮ ಇದ್ದಲ್ಲಿ ಫುಲ್‌ಸ್ಟಾಪ್‌ ಇಟ್ಟು
ಸೆಮಿಕೋಲನ್ನಷ್ಟೆ ನುಂಗಿದ.

ಒಂದು ಪದವನ್ನು ನಕ್ಕು ಉಚ್ಚರಿಸಿ
ಮತ್ತೊಂದನ್ನು ಬಿಕ್ಕಿದ,
ಪದಗಳ ಮಧ್ಯೆ ಅಂತರ ಹೆಚ್ಚಿಸಿ
ಬೆಂತರಗಳನ್ನೆ ಇರುಕಿದ.

ರಾಮನಾಥ ಬಹಳ ಹಸ್ತಕುಶಲಿ
ದೊಡ್ಡ ಪವಾಡಗಾರ,
ಬೀಗ ಮುಟ್ಟದೆ ಬಾಗಿಲು ಒಡೆಯದೆ
ಭಾರಿ ಕಳುವನ್ನೆ ಮಾಡಿದ.

ಕಿವಿ ಕಣ್ಣು ನಾಲಿಗೆ ಎಲ್ಲವೂ ಇರುತ್ತೆ
ಉಸಿರೇ ಪರಾರಿಯಾಯಿತು.
ಮುಟ್ಟಿದ್ದೇ ತಡೆ ರಾಮನಾಥ
ಸತ್ತೇ ಎಂದಿತು ಮಾತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಹುತ್ತರಿ ಹಾಡು

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys