ಹಾಮಾ ನಾಯಕ

ಹೆತ್ತವರು ಗೊತ್ತಿದ್ದೆ ಹೆಸರಿಟ್ಟರೆಂಬ ಥರ
ಅಚ್ಚರಿಗೊಳಿಸುವಂತೆ ಬೆಳೆದ ಹಿರಿವ್ಯಕ್ತಿತ್ವ
ಕನ್ನಡದ ಕೋಟೆ ಕೊತ್ತಳ ಫೌಜು ನೆಲಜಲವ
ಹೋರಾಡಿ ಕಾಯ್ದುಕೊಳ್ಳುವ ಧೀರ ದೃಢಸತ್ವ
ನಾಯಕರು ನಿಜವಾಗಿ ನಾಯಕರೆ ; ಗುರಿ, ನಿಟ್ಟು
ವ್ಯೂಹರಚನೆಯ ಗುಟ್ಟು ಪರಿಪೂರ್ಣ ಎಲ್ಲ ಸಲ;
ತೊಡೆತಟ್ಟಿ ಎದುರಾದ ಜಟ್ಟಿಯ ಕ್ಷಣಾರ್ಧದಲ್ಲಿ
ಚಿತ್ತು ಮಾಡುವ ಚತುರ ; ಒಂದೆ ಗುರಿ, ಒಂದೆ ಶರ.
ಜಾತಿಕೋತಿಗಳ ಹಾವಳಿ ಎಲ್ಲ ದಿಕ್ಕಲ್ಲಿ
ಇಲ್ಲ ನೀವಿರುವಲ್ಲಿ, ನೀವೊ ಬಲು ಗಟ್ಟಿಕುಳ
ಕನ್ನಡದ ಶಿಖರಗಳ ಮೇಲೆ ಬೆಳಕನ್ನುರಿಸಿ
ಎಲ್ಲ ಮೂಲೆಗು ಅದನು ಕಾಣಿಸುವ ನಿಷ್ಠೆ, ಛಲ.

ಕನ್ನಡವ ಹಳಿದರೋ, ಕಿಡಿಯಾಡುವುದು ಕಣ್ಣು, ಮಾತೆಲ್ಲ ಸ್ಫೋಟಿಸುವ ಗುಂಡು,
ಸಹ್ಯಾದ್ರಿ ನೆತ್ತಿಯಲಿ ಒಟ್ಟಾಗಿ ಕವಿದು ಘೀಳಿಡುವಂತೆ ಕರಿಮುಗಿಲ ಹಿಂಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಗ್ಗಿ ಕಾಲ ಬಂದೈತೆ
Next post ಹಾಲುಬಾಯಿ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…