Home / ಕವನ / ಅನುವಾದ / ಶಿಶು ಗೀತೆ

ಶಿಶು ಗೀತೆ

ಅಮ್ಮಾ, ನನ್ನ ಮಗುವನ್ನು ಕಂಡರೆ ನಿನಗೆ ಪ್ರೀತಿ ಇಲ್ಲವೇನಮ್ಮಾ?
ತೊದಲು ಮಾತಿನ ಮಗು, ಪುಟ್ಟ ಹೆಜ್ಜೆ ಇಡುವ ಮಗು, ಮುದ್ದು ಮಗು?

ಇದೇ ಈಗ ಸ್ನಾನ ಮಾಡಿಸಿಕೊಂಡು ಥಳ ಥಳ ತೊಳಗುತ್ತಿರುವ
ಮಗುಗಳ ಮಾಣಿಕ್ಯನಂಥ ಕಿಲಕಿಲನೆ ನಗುವ ಮಗು?

ಮಗಳೇ, ಮಗಳೇ, ನಿನ್ನ ಮಗುವನ್ನು ಮುದ್ದು ಮಾಡಲು ನನಗೂ ಆಸೆ, ಮಗಳೇ.
ಅಜ್ಜಿಯ ಪ್ರೀತಿ ತೋರಿ, ಬೊಚ್ಚು ಬಾಯಲ್ಲಿ ಮುದ್ದಿಟ್ಟು ನಗುವ ಆಸೆ, ಮಗಳೇ.

ಮಗುವಿನ ತಲೆಯ ಮೇಲೆರಡು ಪುಟ್ಟ ಕೋಡು ಮೊಳೆತಿವೆಯಲ್ಲ, ಯಾಕೋ?
ಅಮೆರಿಕದ ಶೂ ತೊಟ್ಟು ನಮ್ಮ ಮನೆಯಂಗಳ ದಾಟಿ ನ್ಯೂಯಾರ್ಕಿಗೆ ಹೆಜ್ಜೆ ಹಾಕುವಂತೆ ಕಾಣುವನಲ್ಲ?

ಟಿವಿಯ ಹಾಡು ನೋಡುತ್ತಾ ಕಂಪ್ಯೂಟರಿನ ಆಟ ಆಡುತ್ತಾ
ಮೈ ಜ್ವರ ಬಂದ ಹಾಗೆ ಬಿಸಿಯಾಗಿ ಮುಟ್ಟಿದರೆ ಸುಡುವುದಲ್ಲಾ?

ನಿನ್ನೆದೆಯ ಹಾಲಿನ ಪರಿಮಳದ ಬದಲು ಮಗವಿನೆದೆಗೆ ಪ್ಯಾರಿಸ್ಸಿನ ಸೆಂಟಿನ ವಾಸನೆ ಇಳಿದಿದೆಯಲ್ಲ?
ಎಳೆ ಚಿಗುರ ಕೈ ಬೆರಳು, ಚೆಕ್ಕು ಪುಸ್ತಕದ ಹಾಳೆಗೆ ಸೈನು ಹಾಕುವ ಪೆನ್ನಿನಂತಿವೆಯಲ್ಲಾ?

ಒಂದು ಕಣ್ಣಲ್ಲಿ ಗಾಳ, ಇನ್ನೊಂದರಲ್ಲಿ ಬಂದೂಕು ಕಾಣುತ್ತೆಯಲ್ಲಾ?
ಕಿವಿ ಮೊರದಗಲವಾಗಿ ಚೂಪಾಗಿ, ಪಾದ ಹಿಂದುಮುಂದಾಗಿವೆಯಲ್ಲಾ?

ಅಮ್ಮಾ ಅಮ್ಮಾ, ನನ್ನ ಮಗನ ಕಂಡರೆ ಪ್ರೀತಿಯಿಲ್ಲವೇನಮ್ಮಾ?
ಹೇಳಮ್ಮಾ, ನಿನ್ನ ಮೊಮ್ಮಗನ ಕಂಡರೆ ಅಕ್ಕರೆ ಇಲ್ಲವೇನಮ್ಮಾ?

ಮಣ್ಣಲ್ಲಿ‌ಆಡಿ, ಹಕ್ಕಿ ಗುಬ್ಬಿ ನೋಡಿ, ಕತೆ ಹೇಳಜ್ಜಿ ಅನ್ನುತ್ತಾ ಪಕ್ಕದಲ್ಲಿ ಮಲಗುವ ಮೊಮ್ಮಗ
ಒಂದು ತುತ್ತು‌ಅನ್ನತಿನ್ನಲು ಮನೆಯೆಲ್ಲ‌ಅಡ್ಡಾಡಿಸುವ ಮೊಮ್ಮಗ

ಆ ಆಟ, ಊ ಊಟ ಅನ್ನುತ್ತಾ ಇದು ನನ್ನ ಅಂಗಿ, ನನ್ನ ಮನೆ, ನನ್ನ ತಟ್ಟೆ ಅಂತ ಜಗಳಾಡುವ
ಮುದ್ದು ಮೊಮ್ಮಗ ಬರುತ್ತಾನೆಂದುಕೊಂಡಿದ್ದೆನಲ್ಲೇ ತಾಯಿ!
*****
ಮೂಲ: ಚಾರ್ಲ್ಸ್ ಕಾಸ್ಲೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...