Home / ಕವನ / ಅನುವಾದ / ಶಿಶು ಗೀತೆ

ಶಿಶು ಗೀತೆ

ಅಮ್ಮಾ, ನನ್ನ ಮಗುವನ್ನು ಕಂಡರೆ ನಿನಗೆ ಪ್ರೀತಿ ಇಲ್ಲವೇನಮ್ಮಾ?
ತೊದಲು ಮಾತಿನ ಮಗು, ಪುಟ್ಟ ಹೆಜ್ಜೆ ಇಡುವ ಮಗು, ಮುದ್ದು ಮಗು?

ಇದೇ ಈಗ ಸ್ನಾನ ಮಾಡಿಸಿಕೊಂಡು ಥಳ ಥಳ ತೊಳಗುತ್ತಿರುವ
ಮಗುಗಳ ಮಾಣಿಕ್ಯನಂಥ ಕಿಲಕಿಲನೆ ನಗುವ ಮಗು?

ಮಗಳೇ, ಮಗಳೇ, ನಿನ್ನ ಮಗುವನ್ನು ಮುದ್ದು ಮಾಡಲು ನನಗೂ ಆಸೆ, ಮಗಳೇ.
ಅಜ್ಜಿಯ ಪ್ರೀತಿ ತೋರಿ, ಬೊಚ್ಚು ಬಾಯಲ್ಲಿ ಮುದ್ದಿಟ್ಟು ನಗುವ ಆಸೆ, ಮಗಳೇ.

ಮಗುವಿನ ತಲೆಯ ಮೇಲೆರಡು ಪುಟ್ಟ ಕೋಡು ಮೊಳೆತಿವೆಯಲ್ಲ, ಯಾಕೋ?
ಅಮೆರಿಕದ ಶೂ ತೊಟ್ಟು ನಮ್ಮ ಮನೆಯಂಗಳ ದಾಟಿ ನ್ಯೂಯಾರ್ಕಿಗೆ ಹೆಜ್ಜೆ ಹಾಕುವಂತೆ ಕಾಣುವನಲ್ಲ?

ಟಿವಿಯ ಹಾಡು ನೋಡುತ್ತಾ ಕಂಪ್ಯೂಟರಿನ ಆಟ ಆಡುತ್ತಾ
ಮೈ ಜ್ವರ ಬಂದ ಹಾಗೆ ಬಿಸಿಯಾಗಿ ಮುಟ್ಟಿದರೆ ಸುಡುವುದಲ್ಲಾ?

ನಿನ್ನೆದೆಯ ಹಾಲಿನ ಪರಿಮಳದ ಬದಲು ಮಗವಿನೆದೆಗೆ ಪ್ಯಾರಿಸ್ಸಿನ ಸೆಂಟಿನ ವಾಸನೆ ಇಳಿದಿದೆಯಲ್ಲ?
ಎಳೆ ಚಿಗುರ ಕೈ ಬೆರಳು, ಚೆಕ್ಕು ಪುಸ್ತಕದ ಹಾಳೆಗೆ ಸೈನು ಹಾಕುವ ಪೆನ್ನಿನಂತಿವೆಯಲ್ಲಾ?

ಒಂದು ಕಣ್ಣಲ್ಲಿ ಗಾಳ, ಇನ್ನೊಂದರಲ್ಲಿ ಬಂದೂಕು ಕಾಣುತ್ತೆಯಲ್ಲಾ?
ಕಿವಿ ಮೊರದಗಲವಾಗಿ ಚೂಪಾಗಿ, ಪಾದ ಹಿಂದುಮುಂದಾಗಿವೆಯಲ್ಲಾ?

ಅಮ್ಮಾ ಅಮ್ಮಾ, ನನ್ನ ಮಗನ ಕಂಡರೆ ಪ್ರೀತಿಯಿಲ್ಲವೇನಮ್ಮಾ?
ಹೇಳಮ್ಮಾ, ನಿನ್ನ ಮೊಮ್ಮಗನ ಕಂಡರೆ ಅಕ್ಕರೆ ಇಲ್ಲವೇನಮ್ಮಾ?

ಮಣ್ಣಲ್ಲಿ‌ಆಡಿ, ಹಕ್ಕಿ ಗುಬ್ಬಿ ನೋಡಿ, ಕತೆ ಹೇಳಜ್ಜಿ ಅನ್ನುತ್ತಾ ಪಕ್ಕದಲ್ಲಿ ಮಲಗುವ ಮೊಮ್ಮಗ
ಒಂದು ತುತ್ತು‌ಅನ್ನತಿನ್ನಲು ಮನೆಯೆಲ್ಲ‌ಅಡ್ಡಾಡಿಸುವ ಮೊಮ್ಮಗ

ಆ ಆಟ, ಊ ಊಟ ಅನ್ನುತ್ತಾ ಇದು ನನ್ನ ಅಂಗಿ, ನನ್ನ ಮನೆ, ನನ್ನ ತಟ್ಟೆ ಅಂತ ಜಗಳಾಡುವ
ಮುದ್ದು ಮೊಮ್ಮಗ ಬರುತ್ತಾನೆಂದುಕೊಂಡಿದ್ದೆನಲ್ಲೇ ತಾಯಿ!
*****
ಮೂಲ: ಚಾರ್ಲ್ಸ್ ಕಾಸ್ಲೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...